ಸುಳ್ಯ(www.vknews.in): ತನ್ನ ಹಿಂದೂ ಗೆಳೆಯರೊಂದಿಗೆ ಆಟವಾಡುತ್ತಿದ್ದ ಕ್ರೈಸ್ತ ಯುವಕನನ್ನು ಹೊರದಬ್ಬಿದ್ದಲ್ಲದೆ ಇನ್ನು ಮುಂದೆ ಹಿಂದೂ ಯುವಕರೊಂದಿಗೆ ನೀನು ಆಟವಾಟಬಾರದೆಂದು ದಮಕಿ ಹಾಕಿದ ಘಟನೆ ಸುಳ್ಯದಿಂದ ವರದಿಯಾಗಿದೆ. ಕ್ರೈಸ್ತ ಯುವಕನನ್ಮು ಹೊರಹಾಕಿದ ವ್ಯಕ್ತಿಯ ಹೆಸರು ಪ್ರವೀಣ್ ಎಂದು ತಿಳಿದು ಬಂದಿದ್ದು, ಈತ ಯುವಕನನ್ನು ಹೊರದಬ್ಬುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ. ದೇವಸ್ಥಾನಕ್ಕೆ ಸೇರಿದ ಮೈದಾನದಲ್ಲಿ ಗೆಳೆಯರೊಂದಿಗೆ ಆಟಆಡುತಿದ್ದ ಕ್ರೈಸ್ತ ಯುವಕನನ್ನು ಮೈದಾನದಿಂದ ಹೊರದಬ್ಬಿದ ಈ ಘಟನೆಯು ಸುಳ್ಯ ಸಮೀಪದ ಜಯನಗರದ ಕೊರಂಬಡ್ಕ ದೈವಸ್ಥಾನದ ಮೈದಾನದಲ್ಲಿ ನಡೆದಿದೆ. ಪ್ರವೀಣನ ಈ ಗೂಂಡಾಗಿರಿಗೆ ಸಾರ್ವಜನಿಕವಾಗಿ ಖಂಡನೆ ವ್ಯಕ್ತವಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.