ಭೌತಿಕ ಲಾಭಕ್ಕಾಗಿ ಅವರು ಧರ್ಮದ ಹೆಸರನ್ನೂ ಉಲ್ಲೇಖಿಸಿದ್ದಾರೆ. ತಾಲಿಬಾನ್ ಉಗ್ರರು ಇಸ್ಲಾಮೇತರ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಅಧಿಕಾರದ ಸ್ವಾರ್ಥಕ್ಕಾಗಿ ಇಡೀ ಮನಕುಲವನ್ನೇ ರಕ್ತದೋಕುಳಿ ಮಾಡುವ ತಾಲಿಬಾನ್ ನರಸುರರು….
ಸುತ್ತಮುತ್ತಲಿನ ಚೌಕಟ್ಟಿನಲ್ಲಿ ಏನು ನಡೆಯಿತು ಎಂದು ತಿಳಿಯದೆ ಅಸ್ವಸ್ಥರಾಗಿ ಓಡಿ ರಕ್ಷಣೆಯನ್ನು ಪಡೆಯುವ ನಿಷ್ಕಳಂಕರಾದ ಕೆಲವು ಜನತೆ. ಒಂದು ದೇಶವನ್ನು ಬೆರಳೆಣಿಕೆಯ ದಿವಸದಲ್ಲಿ ಶತಮಾನದ ಹಿಂದಿನ ಪಾರತಂತ್ರ್ಯಕ್ಕೆ ಎಳೆದೊಯ್ಯುವ ತಾಲಿಬಾನ್ ಭೀಕರ ಸಂಘಟನೆ.
ಕನಸಿನಲ್ಲೂ ಕಾಣದ ದುಸ್ವಪ್ನವಾಗಿರಬಹುದು ಅವರ ಪಾಲಿಗೆ ತಾಲಿಬಾನ್, ಬೀದಿಗಳ ಅಗಲಕ್ಕೂ ಸಿಡಿಮದ್ದು ಹಾಗೂ ಬಂದೂಕುಗಳ ಶಬ್ದ ತೀಕ್ಷ್ಣವಾದ ಅಗ್ನಿ ಚಿತ್ರಗಳು. ಕೇವಲ ಜೀವನ ಮಾತ್ರ ಕೈಯಲ್ಲಿಡಿದುಕೊಂಡು ಓಡಿ ಪರಾರಿಯಾಗುವ ಜನತೆ ಇನ್ನೂ ಮರಣಹೊಂದಿ ಜೀವಿಸಬೇಕಾಗುತ್ತದೆ. ಪ್ರತಿಯೊಂದು ಜೀವವು ಒಳ್ಳೆಯ ಮರಣಕ್ಕಾಗಿ ಸರ್ವಶಕ್ತನಾದ ಅಲ್ಲಾಹನಲ್ಲಿ ಬೇಡುತ್ತಾ ಇರುವವು.
ವರ್ಣರಂಜಿತ ನಾಳೆಯ ಕನಸು ಕಾಣಲೂ ಸಾಧ್ಯವಾಗದೆ ಅಲ್ಲಿನ ನಾರಿಯರು ಭಯೋತ್ಪಾದಕರ ಶಿಬಿರದಲ್ಲಿ ಲೈಂಗಿಕ ಗುಲಾಮರಾಗಿ ನೋವು ಅನುಭವಿಸುತ್ತಾರೆ. ಅಲ್ಲಿಯೇ ಕೊನೆಯುಸಿರೆಳೆದುಕೊಳ್ಳಬೇಕಾಗುತ್ತದೆ ಎಂಬ ಭೀತಿ ಅವರ ಮನದಲ್ಲಿದೆ. ಧರ್ಮದ ನೆಪವನ್ನೊಡ್ಡಿ ಅಧಿಕಾರವನ್ನು ಸ್ಥಾಪಿಸಲು ದೌರ್ಜನ್ಯದ ದಾಪುಗಾಲಿಡುವ ತಾಲಿಬಾನ್ ಉಗ್ರರು.
ಯಾವುದೇ ಪರಿಸ್ಥಿತಿಯಲ್ಲಿಯೂ ಅವರು ತಮ್ಮ ಪರವಾಗಿ ನಿಲ್ಲುತ್ತಾರೆ ಎಂದು ನಂಬಿದ್ದ ಆಡಳಿತಗಾರರು ಕೂಡ ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಗಡಿಯನ್ನು ದಾಟಿದ್ದಾರೆ. ಯಾರು ಅವರಿಗೆ ಶಕ್ತಿಯನ್ನು ನೀಡುತ್ತಾರೆ? ಅವರನ್ನು ಯಾರು ಬೆಂಬಲಿಸುತ್ತಾರೆ?
ನಾನು ನೀವೂ ಧ್ವನಿಯೆತ್ತಿದರೆ ಕೊನೆಗೊಳ್ಳುವ ದೌರ್ಜನ್ಯವಲ್ಲಯಿದು ಈ ಜಗತ್ತಿನಲ್ಲಿರುವ ಮಾನವೀಯತೆ ಹೃದಯದಲ್ಲಿ ಭದ್ರವಾಗಿರಿಸಿದ ಪ್ರತಿಯೊಬ್ಬ ಮನುಷ್ಯನು ಒಂದಾಗಬೇಕು. ಪವಿತ್ರವಾದ ಧರ್ಮದ ಹೆಸರನ್ನೆತ್ತಿ ಅಫ್ಘಾನ್ ಜನರನ್ನು ದಾಸ್ಯದ ನೆರಳಿನಲ್ಲಿರಿಸಿದ ಭೀಕರ ತಾಲಿಬಾನ್ ಷಡ್ಯಂತರಗಳಿಗೆ ಅಂತಃಕರಣದಲ್ಲಿ ವೈರುಧ್ಯವನ್ನಿರಿಸಬೇಕು.
#SaveAfghanistan
#ಸೇವ್ಅಫ್ಘಾನಿಸ್ತಾನ
✒️ ಸಹದ್ ಕರ್ನೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.