ಕೋಲಾರ (ವಿಶ್ವಕನ್ನಡಿಗ ನ್ಯೂಸ್):- ಕೋವಿಡ್ ಮಹಾಮಾರಿ ಶೈಕ್ಷಣಿಕ ಅಭಿವೃದ್ದಿಗೆ ಭಾರಿ ಹಿನ್ನಡೆಯುಂಟು ಮಾಡಿದ್ದು , ಇದೀಗ ಭೌತಿಕ ತರಗತಿಗಳ ಆರಂಭದೊಂದಿಗೆ ಮತ್ತೆ ವಿದ್ಯಾರ್ಥಿಗಳ ಕಲಿಕೆಗೆ ಚೈತನ್ಯ ತುಂಬುವ ಕೆಲಸದ ಜತೆಗೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯನ್ನು ಟಾಪ್ ೫ ರೊಳಗೆ ಕಾಣಲು ಉಪನ್ಯಾಸಕರು ಸಹಕಾರ ನೀಡಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದಪ್ಪ ಮನವಿ ಮಾಡಿದರು.
ನಗರದ ಸರಕಾರಿ ಪಪೂ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾ ಘಟಕ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶೈಕ್ಷಣಿಕ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು. ವಿಶ್ವವನ್ನು ಕಾಡುತ್ತಿರುವ ಕೊರೋನ ಮಹಾಮಾರಿಯೂ ಒಂದು ರೀತಿಯಲ್ಲಿ ಅಯೋಮಯವಾಗಿದ್ದು , ಇಂದು ನಾನಾ ಕ್ಷೇತ್ರಗಳಲ್ಲಿ ಕೆಲಸ ಕಾರ್ಯಗಳು ಸ್ಥಗಿತವಾಗಿದೆ.
ಇದು ಶೈಕ್ಷಣಿಕ ಕ್ಷೇತಕ್ಕೂ ಹೊರತಾಗಿಲ್ಲ ಎಂದ ಅವರು , ಆನ್ಲೈನ್ ತರಗತಿಗಳು ಎಂದಿಗೂ ಒಪೂರ್ಣ ಕಲಿಕೆಗೆ ಪೂರಕವಲ್ಲ ಎಂದು ಅಭಿಪ್ರಾಯಪಟ್ಟು , ಇದರ ನಡುವೆಯೂ ಮಕ್ಕಳ ಕಲಿಕಾಭಿವೃದ್ಧಿಗೆ ಒತ್ತು ನೀಡಬೇಕಾಗಿದೆ ಎಂದರು. ಕೂವಿಡ್ ಕಡಿಮೆಯಾಗಿ ಇದೀಗ ಮತ್ತೆ ಜೀವನ ನಡೆಸುವ ಹಂತಕ್ಕೆ ಮುಖ ಮಾಡುತ್ತಿದ್ದೇವೆ ಎಂದರಲ್ಲದೆ ಸಮಾಜ ಕಟ್ಟುವ ನಿಟ್ಟಿನಲ್ಲಿ ಬಲಿಷ್ಠ ಭಾರತಕ್ಕಾಗಿ ವಿದ್ಯಾರ್ಥಿಗಳನ್ನು ಉತ್ತಮ ದಾರಿಯಲ್ಲಿ ಸಾಗುವಂತೆ ಮುನ್ನಡೆಸಲು ಈ ಕಾರ್ಯಾಗಾರ ನೆರವಾಗಲಿ ಎಂದು ಹಾರೈಸಿದರು.
ಸುಮಾರು ವರ್ಷಗಳ ಕಾಲ ಶಿಕ್ಷಕರ ವೃತ್ತಿಯಲ್ಲಿ ತೊಡಗಿಕೊಂಡಿದ್ದು , ಸರಕಾರದ ಇತರೇ ವೃತ್ತಿಗಳಲ್ಲಿ ಸಿಗದೆ ಇರುವ ಹೆಚ್ಚು ಖುಷಿಯಂತೂ ಉಪನ್ಯಾಸಕರ ವೃತ್ತಿಯಲ್ಲಿ ಸಿಗುತ್ತದೆ ಎಂದು ನುಡಿದರು . ಉಪನ್ಯಾಸಕರು ಸೇವೆ ಸಲ್ಲಿಸುವ ಕಾಲೇಜುಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳು ಜೀವನ ಪರ್ಯಂತ ನನೆಯುವ ಮೂಲಕ ಅವರಿಗೆ ಮಾದರಿ ಉಪನ್ಯಾಸಕರಾಗಿ ಹೊರಹೊಮ್ಮುವುದರಿಂದ ವಿಶೇಷ ಗೌರವ ಘನತೆ ಹೆಚ್ಚಿಸಿಕೊಳ್ಳುವ ದಿಸೆಯಲ್ಲಿ ನಿಮ್ಮ ಕರ್ತವ್ಯ ನಿರ್ವಹಣೆ ಸಾಗಬೇಕು ಎಂದರು.
ಸರಕಾರಿ ಶಾಲೆಗಳಿಗೆ ಕೃಷಿ , ಕಾರ್ಮಿಕರ , ಹಾಗೂ ಹಿಂದುಳಿದ ವರ್ಗ , ಅವಿದ್ಯಾವಂತರ ಮಕ್ಕಳ ಹೆಚ್ಚಾಗಿ ಸೇರುವ ಸರಕಾರಿ ಶಾಲೆಗಳಲ್ಲಿ ಮಕ್ಕಳನ್ನು ಭದ್ರಬುನಾದಿ ಹಾಕಿ ಭವಿಷ್ಯ ರೂಪಿಸಿಕೊಳ್ಳುವ ಕಡೆ ಸಾಗಿಸುವಂತ ಜವಾಬ್ದಾರಿ ನಮ್ಮಿಂದ ಆಗಬೇಕು ಎಂದು ಹೇಳಿದರಲ್ಲದೆ ಜಿಲ್ಲೆಯ ಉಪನ್ಯಾಸಕರ ಸಹಕಾರದಿಂದ ಪಿಯುಸಿ ಪರೀಕ್ಷೆಯಲ್ಲಿ ಚಿನ್ನದ ಜಿಲ್ಲೆ ಕೋಲಾರವನ್ನು ರಾಜ್ಯ ಮಟ್ಟದಲ್ಲಿ ಟಾಪ್ ಫೈವ್ ನಲ್ಲಿ ಹೆಸರುಗಳಿಸುವ ಮಹದಾಸೆಯನ್ನು ಹೊಂದಲಾಗಿದೆ ಇದಕ್ಕೆ ಪ್ರತಿಂರೊಬ್ಬ ಉಪನ್ಯಾಸಕರು ಶ್ರಮವಹಿಸಬೇಕಿದೆ ಎಂದರು.
ಜಿಲ್ಲೆಯಲ್ಲಿ ಯಾವುದೇ ಕಾಲೇಜುಗಳಲ್ಲಿ ಉಪನ್ಯಾಸಕರು ಗುಂಪುಗಾರಿಕೆಗೆ ಅವಕಾಶವನ್ನು ನೀಡದಂತೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕಾಗಿ ಪಣತೊಡಬೇಕು ಎಂದು ಕಿವಿ ಮಾತು ಹೇಳಿದರು . ರಾಜ್ಯ ಸರಕಾರ ಆಗಸ್ಟ್ ೨೩ ರಿಂದ ಶಾಲಾ ಕಾಲೇಜುಗಳ ಪ್ರಾರಂಭಿಸುವ ಯೋಚನೆ ಮಾಡಿದ್ದು , ಇಡೀ ವಿಶ್ವ , ರಾಜ್ಯ , ಜಿಲ್ಲ . ಗ್ರಾಮವನ್ನು ಬಾಧಿಸುತ್ತಿರುವ ಕೋಡ್ ೧೯ ಸೋಂಕು ಸುಟ್ಟು ಭಸ್ಮವಾಗಿ ಮಕ್ಕಳ ಜತೆಂರುಲ್ಲಿ ಶಿಕ್ಷಕರು ಪಾಠ ಮಾಡುವ ಸುದಿನ ಒದಗಿಬರಲಿ ಎಂದು ನುಡಿದರು.
ಉಪನ್ಯಾಸಕರ ಸಂಘದ ಗೌರವಾಧ್ಯಕ್ಷಉದಯಕುಮಾರ್ ನೂತನ ಉಪನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿ , ಡಿಡಿಪಿಯು ರಾಮಚಂದ್ರಪ್ಪ ಅವರು ಶಿಸ್ತು ಪ್ರಾಮಾಣಿಕತೆ ಪಾರದರ್ಶಕತೆಯನ್ನು ಬಾಲ್ಯದಿಂದಲೂ ರೂಢಿಸಿಕೊಂಡ ಶ್ರೇಷ್ಠ ವ್ಯಕ್ತಿ , ಅವರ ಕಾರ್ಯಗಳಿಗೆ ಮಾಸ್ತಿ ಕಾಲೇಜಿನ ಅಭಿವೃದ್ದಿಯೇ ಸಾಕ್ಷಿ ಎಂದು ತಿಳಿಸಿ , ಉಪನ್ಯಾಸಕರ ಸಂಘ ಅವರ ಜೊತೆಗೆ ಯಾವತ್ತು ಇರುತ್ತದೆ ಎಂದು ತಿಳಿಸಿದರು.
ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಟಿ ಕೆ ನಟರಾಜ್ ಮಾತನಾಡಿ , ಉಪನ್ಯಾಸಕರು ತಮ್ಮ ದಕ್ಷತೆ ಮತ್ತು ಬದ್ಧತೆಯ ಮೂಲಕ ಕಾರ್ಯನಿರ್ವಹಿಸಲು ಪ್ರಾಮಾಣಿಕ ಡಿಡಿಪಿಯು ಬಂದಿರುವುದರಿಂದ ಕೋಲಾರ ಜಿಲ್ಲಾ ಪದವಿಪೂರ್ವ ಕಾಲೇಜು ಶಿಕ್ಷಣ ವ್ಯವಸ್ಥೆ ರಾಜ್ಯದಲ್ಲಿ ಮಾದರಿಯಾಗಬಹುದು ಎಂಬ ಆಶಾಭಾವನೆ ನಮ್ಮ ಸಂಘಕ್ಕೆ ಇದೆ. ಈ ನಿಟ್ಟಿನಲ್ಲಿ ಸಂಘ ಪೂರ್ಣ ಸಹಕಾರ ನೀಡಲಿದೆ ಎಂದರು.
ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಕೃಷ್ಣಪ್ಪ , ಪದವಿ ಪೂರ್ವ ಶಿಕ್ಷಣ ಇಲಾಖೆಯು ರಾಮಚಂದ್ರಪ್ಪ ಅವರ ಅವಧಿಯಲ್ಲಿ ಉತ್ತಮ ಸಾಧನೆ ಮಾಡಲಿ , ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಜಿಲ್ಲೆಯ ಉತ್ತಮ ಸಾಧನೆಯನ್ನು ರಾಜ್ಯವೇ ಗಮನಿಸುವಂತಾಗಲಿ ಎಂದು ಆಶಿಸಿದರು.
ಉಪನ್ಯಾಸಕರ ಸಂಘದ ಕಾರ್ಯಾಧ್ಯಕ್ಷ ಜೆ.ಜಿ. ನಾಗರಾಜ್ ಪ್ರಾಸ್ತಾವಿಕ ಮಾತನಾಡಿ , ಪದವಿ ಪೂರ್ವ ಶಿಕ್ಷಣ ಇಲಾಖೆಯಡಿ ಬರುವ ಎಲ್ಲಾ ಕಾಲೇಜುಗಳ ವಿದ್ಯಾರ್ಥಿಗಳ ಕಲಿಕೆಗೆ ಒತ್ತು ನೀಡುವ ವಲಕ ಜಿಲ್ಲೆಯ ಶೈಕ್ಷಣಿಕ ರಂಗದಲ್ಲಿ ಹೊಸ ಇತಿಹಾಸ ಬರಂರೂಣ ಎಂದು ತಿಳಿಸಿದರು ಈ ಸಂದರ್ಭದಲ್ಲಿ ನಗರದ ಮೂರೂ ಪಪೂ ಕಾಲೇಜುಗಳ ಪ್ರಾಂಶುಪಾಲರಾದ ಜಯರಾಮ್ .ಬಾಲಕೃಷ್ಣ , ಎನ್.ಕೆ. ಮಂಜುನಾಥ್ , ಸಂಘದ ಪದಾಧಿಕಾರಿಗಳಾದ ಟಿ.ಚಂದಪ್ಪ ಗೋಪಿಕೃಷ್ಣನ್ ರತ್ನಪ್ಪ ಮೇಲಾಗಾಣಿ , ಬೇಡಿ ರಡ್ಡಿ ಮತ್ತಿತರರು ಉಪಸ್ಟಿತರಿದ್ದರು .
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.