ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಾನಸ ಪದವಿ ಕಾಲೇಜು (ಡಿಗ್ರಿ) ಬಿ.ಕಾಂ ಪ್ರವೇಶಾತಿಗಾಗಿ ವಿದ್ಯಾರ್ಥಿಗಳನ್ನು ಆಹ್ವಾನಿಸಿದ್ದಾರೆ.
ಮಾಲೂರಿನ ಮಾನಸ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮಾರ್ಕೋಂಡಪ್ಪ ರವರು ಮಾತನಾಡಿ “ನಮ್ಮ ಕಾಲೇಜಿನಲ್ಲಿ ಪಿ.ಯು.ಸಿ ಹಾಗೂ ಪದವಿ ಎರಡು ಇದ್ದು ಅತ್ಯಧಿಕ ಅಂಕಗಳನ್ನು ಪಡೆಯುವ ಮೂಲಕ ಜಿಲ್ಲೆಗೆ, ನಮ್ಮ ತಾಲ್ಲೂಕಿಗೆ ಕೀರ್ತಿಯನ್ನು ತಂದಿದ್ದಾರೆ. ಉತ್ತಮ ಉಪನ್ಯಾಸಕರ ತಂಡ, ಕಾಲೇಜು ವಾತಾವರಣ, ಕಾಲೇಜಿಗೆ ಬಸ್ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳ ಬಗ್ಗೆ ಅಪಾರವಾದ ಕಾಳಜಿ ಇರುವ ಸಂಸ್ಥೆ ನಮ್ಮದಾಗಿದೆ, ಪೋಷಕರು ತಮ್ಮ ಮಕ್ಕಳನ್ನು ನಮ್ಮ ಕಾಲೇಜಿಗೆ ಸೇರಿಸುವ ಮೂಲಕ ಸಹಕರಿಸಿ” ಎಂದರು.
ಕಾಲೇಜಿನ ಕನ್ನಡ ಉಪನ್ಯಾಸಕರಾದ ಕಾವೇರಪ್ಪ ರವರು ಮಾತನಾಡಿ “ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಅನೇಕ ಮಂದಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುವ ಮೂಲಕ ಅತಿ ಹೆಚ್ಚು ಅಂಕಪಡೆದು ಉತ್ತಮ ಸಾಧನೆಯ ಪಥದತ್ತ ಸಾಗುತ್ತಿದ್ದಾರೆ. ಅನೇಕ ಮಂದಿ ವಿದ್ಯಾರ್ಥಿಗಳು ಕಾಲೇಜಿನ ಉಪನ್ಯಾಸಕರ ಹಾಗೂ ಉತ್ತಮ ವಾತವಾರಣದಲ್ಲಿ ಕಲಿಕೆಯ ಮಟ್ಟ ಹೆಚ್ಚಿಸಿಕೊಂಡು ಮಹತ್ತರ ಸಾಧನೆ ಮಾಡುತ್ತಿದ್ದಾರೆ” ಎಂದರು.
ಒಟ್ಟಾರೆಯಾಗಿ ಸುಸಜ್ಜಿತ ಕಾಲೇಜಿನ ವಾತವಾರಣ, ಬಸ್ ವ್ಯವಸ್ಥೆ, ಉತ್ತಮ ಉಪನ್ಯಾಸಕರ ತಂಡ, ಹೊಂದಿರುವ ಮಾನಸ ಪಿ.ಯು.ಸಿ ಹಾಗೂ ಡಿಗ್ರಿ ಕಾಲೇಜಿನ ಪ್ರವೇಶ ಆರಂಭವಾಗಿದ್ದು ತಾವು ಸಹ ತಮ್ಮ ಮಕ್ಕಳನ್ನು ನಮ್ಮ ಕಾಲೇಜಿಗೆ ಸೇರಿಸುವ ಮೂಲಕ ಮಕ್ಕಳ ಭವಿಷ್ಯದ ಉತ್ತಮ ಸಾಧನೆಗೆ ಸಹಕರಿಸಿ.. ಮಾಹಿತಿಗಾಗಿ: ಮಾರ್ಕೋಂಡಪ್ಪ ಪ್ರಾಂಶುಪಾಲರು ಮೊ:97310 03191.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.