ಕುಂದಾಪುರ ,(ವಿಶ್ವ ಕನ್ನಡಿಗ ನ್ಯೂಸ್ ): ನಮ್ಮ ಕರಾವಳಿಯ ಇತಿಹಾಸ ಪ್ರಸಿದ್ಧ ಜನಪ್ರಿಯ ಕ್ರೀಡೆ ಕಂಬಳ . ಕಂಬಳ ಉಳಿಸಿ ಬೆಳೆಸುವ ನೆಲೆಯಲ್ಲಿ ,ಈ ಕಂಬಳ ಕ್ರೀಡೆಗೆ ಬೇಕಾದ ಕೋಣಗಳಿಗೆ ಓಟದ ತರಬೇತಿ ನೀಡುವ ಕಂಬಳ ಕೆರೆಯನ್ನು ಕಂಬಳ ಟೀಮ್ ಪಾಂಡೇಶ್ವರ ಮೂಡಹಡು ಸಾಸ್ತಾನ ಹಾಗೂ ಕಂಬಳ ಅಭಿಮಾನಿಗಳ ಸಾಕಷ್ಟು ದಿನಗಳ ಶ್ರಮದಿಂದ ಕರೆಯನ್ನು ನಿರ್ಮಿಸಿದರು .ಹಚ್ಚ ಹಸಿರ ವಿಶಾಲ ವಾದ ಕಳಿಬೈಲ್ ಪ್ರದೇಶದಲ್ಲಿ ಸ್ಥಳದ ವಾರಸುದಾರರ ಸಹಕಾರ ದಿಂದ ಕಂಬಳದ ಕರೆಯನ್ನು ಶ್ರೀ ಕೆ.ವಿ ರಮೇಶ್ ರಾವ್ , ಜ್ಯೋತಿಷಿಗಳು ಶ್ರೀ.ರಕ್ತೇಶ್ವರಿ ದೇವಸ್ಥಾನ ಇವರು ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಗಣೇಶ್ ಪೂಜಾರಿ ಪಾಂಡೇಶ್ವರ ಸಾಸ್ತಾನ, ಶೇಖರ ಪೂಜಾರಿ ಮೂಡಕಟ್ಟು, ರಾಜು ಪೂಜಾರಿ ಮೂಡಬೆಟ್ಟು, ಕಂಬಳ ದ ಹಿರಿಯ ಓಟಗಾರದ ಶಿರೂರು ಗೋಪಾಲ್ ನಾಯ್ಕ್ ಮುದ್ದುಮನೆ, ರಮಾನಂದ ಬಂಗೇರ , ನಾರಾಯಣ ವಿ.ಆಚಾರ್ , ಶೇಕು ಪೂಜಾರಿ, ರವೀಶ್ ಶ್ರೀಯಾನ್ ,ರಮೇಶ್ ಪೂಜಾರಿ ಕೋಟ ಪಡುಕೆರೆ , ಚೇತನ್ ಪಾಂಡೇಶ್ವರ , ವಿಜಯ ಮೂಡಕಟ್ಟು ಕಂಬಳ ಓಟಗಾರ ಬಾಸ್ಕರ ದೇವಾಡಿಗ ಬೈಂದೂರು, ಮಂಜುನಾಥ್ ಬೈಂದೂರು, ಗಣೇಶ್ ಉಳ್ಳೂರು ಸ್ವರೂಪ್ , ಗಣೇಶ್ ಪಾಂಡೇಶ್ವರ, ವಿಕಾಸ್ ಪಾಂಡೇಶ್ವರ , ಮಣಿ ನಾಗರ ಮಠ , ಪ್ರಕಾಶ ನಾಗರಮಟ , ಮಧುಕರ ಬಾರಕೂರು , ಪ್ರಕಾಶ್ ಶೆಟ್ಟಿ ಸಾಸ್ತಾನ, ನವೀನ್ ತೀರ್ಥಬೈಲು, ಗಣೇಶ್ ಶ್ರೀ ಪಾಲ್ ಟೀಮ್ ಶಿರೂರು ಮುದ್ದು ಮನೆ, ಟೀಮ್ ಬಲರಾಮ ಉಳ್ಳೂರು, ಟೀಮ್ ಬೈಂದೂರು , ಟೀಮ್ ಕೋಟ ಪಡುಕೆರೆ , ಟೀಮ್ ಕುಂದಬಾರಾಂದಡಿ ಹಾಗೂ ಟೀಮ್ ಪಾಂಡೇಶ್ವರ ಸಾಸ್ತಾನ ಸರ್ವ ಸದಸ್ಯರು ,ವಿವಿಧ ಕಡೆಯಿಂದ ಬಂದ ಕೋಣಗಳ ಮಾಲಕರು ಮತ್ತು ಗ್ರಾಮಸ್ಥರು, ಕಂಬಳ ಅಭಿಮಾನಿಗಳು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಕಂಬಳದ ಉದ್ಗೋಷ ಕರಾದ ಅಭಿಜಿತ್ ಪಾಂಡೇಶ್ವರ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.