ಅಬುಧಾಬಿ(ವಿಶ್ವಕನ್ನಡಿಗ ನ್ಯೂಸ್): ಸ್ಮಾರ್ಟ್ ಲಿವಿಂಗ್ ಫೌಂಡೇಶನ್ (ಇಂಟರ್ ನ್ಯಾಷನಲ್) ಆಯೋಜಿಸಿದ ಪ್ರಥಮ ಶೈಖ್ ಝಾಇದ್ ಅವಾರ್ಡ್ ಪ್ರಮುಖ ವಿದ್ವಾಂಸರೂ ಸಾಮಾಜಿಕ ಕಾಳಜಿಯುಳ್ಳ ಕಾರ್ಯಕರ್ತರೂ ಆದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಳಂ ಅವರಿಗೆ ಪ್ರಧಾನ ಮಾಡಲಾಯಿತು.
ಮರ್ಕಝ್ ನಾಲೆಜ್ ಸಿಟಿ ಸಿಇಒ ಹಾಗೂ ಪ್ರಶಸ್ತಿ ಸಮಿತಿಯ ಚೆಯರ್ ಮೆನ್ ಡಾ.ಅಬ್ದುಸ್ಸಲಾಂ ಮುಹಮ್ಮದ್ ಈ ಪ್ರಶಸ್ತಿ ಘೋಷಿಸಿದ್ದರು.
ಊರಿನಲ್ಲಿ ಹಾಗೂ ಗಲ್ಫ್ ರಾಷ್ಟ್ರ ಗಳಲ್ಲಿ ಜನ ಸಾಮಾನ್ಯರಿಗೆ ಖುರ್ ಆನಿನ ಆಶಯಗಳನ್ನು ತಲುಪಿಸುವವರಿಗೆ ಹಾಗೂ ಸಮುದಾಯದ ಸೇವೆ ಮಾಡುವವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ ಎಂದು ಸ್ಮಾರ್ಟ್ ಲಿವಿಂಗ್ ಫೌಂಡೇಶನ್ ಕೋ- ಆರ್ಡಿನೇಟರ್ ಗಳಾದ ಪಿ.ಸಿ.ಮುಹಮ್ಮದ್ ಜಾಫರ್ ಹಾಗೂ ಸಿರಾಜ್ ಪುತ್ತನ್ ಪಳ್ಳಿ ತಿಳಿಸಿದರು. ಕೋವಿಡ್ ಪ್ರೋಟೋಕಾಲ್ ಅನುಸರಿಸಿ ನಡೆದ ಕಾರ್ಯಕ್ರಮದಲ್ಲಿ ಶೌಕತ್ ಬುಖಾರಿ ಅಲ್ ನ ಈಮಿ ಪ್ರಶಸ್ತಿ ಪ್ರದಾನ ಮಾಡಿದರು. ಡಾ. ಅಬ್ದುಸ್ಸಲಾಮ್ ಮುಖ್ಯ ಭಾಷಣ ಮಾಡಿದರು.
ಅಬ್ದುಲ್ ಹಮೀದ್ ಸಅದಿಈಶ್ವರಮಂಗಳರವರು ಕರ್ನಾಟಕ ರಾಜ್ಯ ಎಸ್. ಎಸ್. ಎಫ್ .ಇದರ ಸ್ಥಾಪಕ ಕಾರ್ಯ ದರ್ಶಿ ,ಎರಡು ಅವಧಿಗೆ ಕೆ. ಸಿ. ಎಫ್. ಯು. ಎ. ಇ. ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾಗಿದ್ದರು. ಪ್ರಸ್ತುತ ಕೆ. ಸಿ. ಎಫ್ ಅಂತರಾಷ್ಟ್ರೀಯ ಸಮಿತಿಯ ಹಣಕಾಸು ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಬದಾಬಿ ಸರಕಾರದ ಔಕಾಫ್ ಅಧೀನದಲ್ಲಿರುವ ಮುಸಫ್ಫ ಶಾಬಿಯ ಮಸೀದಿಯಲ್ಲಿ ಇಮಾಮ್ ಹಾಗೂ ಖತೀಬ್ ಆಗಿ ಸೇವೆಸಲ್ಲಿಸುತಿದ್ದಾರೆ. ಯು. ಎ. ಇ. ಯ ಹಲವಾರು ಸುನ್ನೀ ಸಂಘ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕಾರ್ಯಚರಿಸುತ್ತಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.