ದುಬೈ(www.vknews.in): ದುಬೈ ಬಹುಮಹಡಿ ಕಟ್ಟಡವೊಂದರ ಎರಡನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಜಿಗಿದ ಬೆಕ್ಕಿನ ಪ್ರಾಣ ರಕ್ಷಿಸಿದ ನಾಲ್ಕು ವಿದೇಶಿಗಳು ದುಬೈ ದೊರೆ ಶೇಖ್ ಮಹಮ್ಮದ್ ರಾಷೀದ್ ಅಲ್ ಮಕ್ತೂಮ್ ತಲಾ 50,000 ದಿರ್ಹಂ ಬಹುಮಾನವನ್ನು ಪಡೆದಿದ್ದಾರೆ. ಯುಎಇ ಉಪಾಧ್ಯಕ್ಷ ಹಾಗೂ ದುಬೈ ದೊರೆ ಶೇಖ್ ಮಹಮ್ಮದ್ ಅವರಿಂದ ‘ಹಾಡಿಕೊಳ್ಳದ ವೀರರು’ ಎಂದು ಪ್ರಸಂಶಿಸಲ್ಪಟ್ಟ ನಾಲ್ವರು ವಿದೇಶಿಗಳಾದ ಕಾವಲುಗಾರನಾಗಿ ಉದ್ಯೋಗದಲ್ಲಿರುವ ಮರಕ್ಕೋದ ಅಶ್ರಫ್, ಸೇಲ್ಸ್ ಮೆನ್ ವೃತ್ತಿಯಲ್ಲಿರುವ ಪಾಕಿಸ್ತಾನ ಮೂಲದ ಅತೀಫ್ ಮಹಮ್ಮದ್, ದುಬೈ ರಸ್ತೆ ಪ್ರಾಧಿಕಾರದಲ್ಲಿ ಉದ್ಯೋಗದಲ್ಲಿರುವ ಭಾರತೀಯನಾದ ನಾಸರ್ ಹಾಗೂ ತನ್ನ ಮೊಬೈಲ್ ನಲ್ಲಿ ಬೆಕ್ಕನ್ನು ರಕ್ಷಿಸುವ ವಿಡಿಯೋವನ್ನು ಸೆರೆಹಿಡಿದ ಕೇರಳದ ಮಹಮ್ಮದ್ ರಷೀದ್ ಎಂಬುವವರಾಗಿದ್ದಾರೆ ಈ ನಾಲ್ವರು ಅದೃಷ್ಟವಂತರು. ಕೆಲವು ದಿನಗಳ ಹಿಂದೆ ಮಹಡಿಯಿಂದ ಕೆಳಗೆ ಬೀಳುತ್ತಿದ್ದ ಬೆಕ್ಕನ್ನು ಸ್ಥಳದಲ್ಲಿದ್ದ ಮೂವರು ವಿದೇಶಿಯರು ವಸ್ತ್ರವನ್ನು ಹಿಡಿಯುವ ಮೂಲಕ ರಕ್ಷಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿತ್ತು. ದುಬೈ ದೊರೆ ಶೇಖ್ ಮಹಮ್ಮದ್ ಸ್ವತಃ ಈ ವಿಡಿಯೋವನ್ನು ಟ್ವೀಟ್ ಮಾಡಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.