ಕೋಲಾರ(ವಿಶ್ವ ಕನ್ನಡಿಗ ನ್ಯೂಸ್ ) :ಕೋವಿಡ್ನಿಂದಾಗಿ ವಸೂಲಾಗದೇ ಇರುವ ೨೦ ಕೋಟಿ ರೂ ಸಾಲ ಮರುಪಾವತಿಗೆ ಕ್ರಮವಹಿಸಿ , ಅನ್ನ ನೀಡುತ್ತಿರುವ ಬ್ಯಾಂಕಿನ ಘನತೆಗೆ ಕುತ್ತು ತಾರದಿರಿ ಎಂದು ಸಿಬ್ಬಂದಿಗೆ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು.
ಶನಿವಾರ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ನಡೆದ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದರು. ಕೋವಿಡ್ ಸಂದರ್ಭದಲ್ಲೂ ಮಹಿಳಾ ಸಂಘಗಳ ಸಾಲ ಮರುಪಾವತಿ ಉತ್ತಮವಾಗಿದೆ. ಉಳಿದ ಸಾಲಗಳ ವಸೂಲಾತಿಯಲ್ಲಿ ಹಿನ್ನಡೆಯಾಗಿದೆ. ಶನಿವಾರ , ಭಾನುವಾರ ರಜೆ ಎಂದು ಮೈಮರೆಯದೇ ವಸೂಲಾತಿ ಮಾಡಿ ಎಂದು ಸೂಚಿಸಿದರು. ಬ್ಯಾಂಕ್ ಮುಳುಗಿ ಹೋಗಿದ್ದಾಗ ಯಾರೂ ಮಾತನಾಡಲಿಲ್ಲ.
ಈಗ ಬ್ಯಾಂಕ್ ಪಗತಿ ಹೊಂದಲು ಹಗಲಿರುಳು ಶ್ರಮಿಸಿದಕ್ಕೆ ಪ್ರತಿದಿನವೂ ನನ್ನ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು , ನಾನು ಟೀಕೆಗಳಿಗೆ ಹೆದರಲ್ಲಿ ಬಂಡೆಯಂತಾಗಿದ್ದೇನೆ ಎಂದು ತಿಳಿಸಿದರು. ಈ ಹಿಂದೆ ಸತ್ತು ಹೋಗಿದ್ದ ಬ್ಯಾಂಕನ್ನು ಉಳಿಸಿ ಬೆಳೆಸಿದ್ದೇ ಅಪರಾಧವನ್ನುವಂತಾಗಿದೆ. ಬ್ಯಾಂಕ್ ದಿವಾಳಿಯಾಗಿ ೧೦ ವರ್ಷಗಳ ಕಾಲ ಜಿಲ್ಲೆಯ ಬಡ ರೈತರು , ಮಹಿಳೆಯರಿಗೆ ಕಡಿಮೆ ಬಡ್ಡಿ ಸಾಲ , ಸಾಲ ಮನ್ನಾದಂತಹ ಯೋಜನೆಗಳ ಪ್ರಯೋಜನ ಸಿಗದೇ ವಂಚನೆಯಾದಾಗ ಯಾರೂ ತುಟಿ ಬಿಚ್ಚಲಿಲ್ಲ ಎಂದರು.
ನಾವಿಂದು ಇಡೀ ದೇಶದಲ್ಲೇ ಅತಿ ಹೆಚ್ಚು ಮಹಿಳೆಯರಿಗೆ ಸಾಲ ನೀಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗಿರುವ ಹೆಗ್ಗಳಿಕೆ ಸಾಧಿಸಿದ್ದೇವೆ , ೫೦ ಕೋಟಿ ವಹಿವಾಟು ಇಲ್ಲದೆ ಬ್ಯಾಂಕ್ ಇಂದು ೧೫೦೦ ಕೋಟಿ ವಹಿವಾಟು ನಡೆಸುವ ಶಕ್ತಿ ತುಂಬಿದ್ದೇವೆ ಆದರೂ ಪ್ರತಿ ದಿನವೂ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಕೇಳುತ್ತಿದ್ದೇನೆ ಎಂದು ತಿಳಿಸಿದರು.
ಇಂತಹ ದುಷ್ಟ ಶಕ್ತಿಗಳಿಗೆ ಬ್ಯಾಂಕಿನ ಶೇ.ಐದಾರರಷ್ಟು ಮಂದಿ ಸಿಬ್ಬಂದಿಯೂ ನೆರವಾಗಿದ್ದಾರೆ , ಬ್ಯಾಂಕ್ ದಿವಾಳಿಯಾದಾಗ ಸಂಬಳವಿಲ್ಲದ ದಿನಗಳನ್ನು ಮರೆಯಬೇಡಿ , ಈಗ ಬ್ಯಾಂಕ್ ಚೆನ್ನಾಗಿರುವುದರಿಂದಲೇ ನಿಮಗೆ ಒಳ್ಳೆಯ ವೇತನ ಸಿಗುತ್ತಿದೆ , ನಿಮ್ಮ ಮನೆಗೆ ನೀವೇ ಬೆಂಕಿ ಹಾಕಿಕೊಂಡರೇ ನಿಮ್ಮ ಕುಟುಂಬಗಳ ಬೀದಿಗೆ ಬರುತ್ತವೆ ಎಂದು ಎಚ್ಚರಿಸಿದರು . ಸಾಲ ವಸೂಲಾತಿಯಲ್ಲಿನ ಹಿನ್ನಡೆ ಸರಿಪಡಿಸಿ , ನಿಜವಾದ ರೈತರನ್ನು ಮಾತ್ರ ಗುರುತಿಸಿ ಸಾಲ ನೀಡಿ ವಸೂಲಾತಿಯಲ್ಲಿ ಮೋಸವಾಗದು , ಜತೆಗೆ ಗಣಕೀಕರಣ ಇ ಶಕ್ತಿ ಅನುಷ್ಠಾನ ಶೀಘ್ರವಾಗಿ ಮುಗಿಸಿ ಎಂದು ಸಿಬ್ಬಂದಿಗೆ ಸೂಚಿಸಿದರು.
ಒಳ್ಳೆಯ ಕೆಲಸಕ್ಕೆ ಟೀಕೆಗಳು ಹೆಚ್ಚು ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ , ಒಳ್ಳೆಯ ಕೆಲಸ ಮಾಡೋರಿಗೆ ಶತ್ರುಗಳೂ ಹೆಚ್ಚು ಕೆಲಸ ಮಾಡದಿದ್ದರೆ ಯಾರೂ ನಿಮತ್ರ ನೋಡುವುದೇ ಇಲ್ಲ. ಇದಕ್ಕೆ ಡಿಸಿಸಿ ಬ್ಯಾಂಕಿನ ಹಿಂದಿನ ಸ್ಥಿತಿಯೇ ಸಾಕ್ಷಿಯಂತಿದೆ ಎಂದರು. ಟೀಕೆ ಮಾಡೋರು ಮಾಡಲಿ , ಸುಳ್ಳು ದೂರು ನೀಡೋರು ನೀಡಲಿ ಇಲ್ಲಿ ತಪ್ಪಾಗಿದ್ದರೆ ಹದರಬೇಕು , ಈಗಾಗಲೇ ಹಲವು ತಪಗಳಲ್ಲಿ ದೂರು ಕೊಟ್ಟೂರಿಗೆ ಸತ್ಯಾಂಶದ ಅರಿವೂ ಆಗಿದೆ . ಅಂತಹವರಿಗೆ ಒಳ್ಳೆಯ ಕೆಲಸ ಮಾಡುವ ಮೂಲಕವೇ ಉತ್ತರ ನೀಡೋಣ ಎಂದರು.
ಬ್ಯಾಂಕಿಗೆ ಕೆಟ್ಟ ಹೆಸರು ಬಂದರೆ ಅದರಿಂದ ನಷ್ಟವಾಗೆದು ಶೂನ್ಯ ಬಡ್ಡಿ ಸಾಲದಿಂದ ಬದುಕು ಕಟ್ಟಿಕೊಂಡಿರುವ ಮಹಿಳೆಯರಿಗೆ, ರೈತರಿಗೆ ಎಂಬುದನ್ನು ಮರೆಯದಿರಿ , ಆ ತಾಯಂದಿರ ಶಾಪ ಖಂಡಿತಾ ಬ್ಯಾಂಕ್ ವಿರುದ ಮಡುವಿಗೆ ತರ್ದ ಲರದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಅವಿಭಜಿತ ಜಿಲ್ಲೆಯ ಎಲ್ಲಾ ಶಾಖೆಗಳಲ್ಲಿನ ಸಾಲ ವಸೂಲಾತಿಯಲ್ಲಿನ ಹಿನ್ನಡೆ ಕುರಿತು ಗಮನಹರಿಸಲು ಸೂಚಿಸಲಾಯಿತು . ಹಾಗೆಯೇ ಸಿಬ್ಬಂದಿಗೆ ಠೇವಣಿ ಸಂಗ್ರಹಕ್ಕೆ ನೀಡಿರುವ ಗುರಿ ಸಾಧನಗೂ ಸಭೆಯಲ್ಲಿ ತಾಕೀತು ಮಾಡಲಾಯಿತು . ಸಭೆಯಲ್ಲಿ ಬ್ಯಾಂಕಿನ ಎಜಿಎಂಗಳಾದ ಬೈರೇಗೌಡ , ಖಲೀಮುಲ್ಲಾ , ಹುಸೇನ್ಸಾಬ್ ದೊಡ್ಡಮನಿ , ಚೌಡಪ್ಪ , ಅರುಣ್ ಕುಮಾರ್ , ಬೇಬಿ ಮತ್ತಿತರರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.