ಕೋಲಾರ (ವಿಶ್ವ ಕನ್ನಡಿಗ ನ್ಯೂಸ್) : – ಜಿಲ್ಲೆಯ ೧೫ ಕೇಂದ್ರಗಳಲ್ಲಿ ಶನಿವಾರ ಕೋವಿಡ್ ಮಾರ್ಗಸೂಚಿಯಡಿ ಸಿಇಟಿ ಪರೀಕ್ಷೆ ಸುಸೂತ್ರವಾಗಿ ನಡೆದಿದ್ದು , ಬೆಳಗಿನ ಅವಧಿಯಲ್ಲಿ ಜೀವಶಾಸ್ತ್ರಕ್ಕೆ ೫೬೧ ಮಂದಿ ಹಾಗೂ ಮಧ್ಯಾಹ್ನದ ಗಣಿತ ಪರೀಕ್ಷೆಗೆ ೧೭೮ ಮಂದಿ ಗೈರಾಗಿದ್ದರು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದಪ್ಪ ತಿಳಿಸಿದ್ದಾರೆ.
ಸಾಮಾನ್ಯ ಪ್ರವೇಶ ಪರೀಕ್ಷೆಯ ಮೊದಲ ದಿನ ಶನಿವಾರ ಎರಡು ವಿಷಯಗಳ ಪರೀಕ್ಷೆ ನಡೆದಿದ್ದು , ಯಾವುದೇ ಗೊಂದಲಗಳಿಗೆ ಅವಕಾಶವಾಗಲಿಲ್ಲ ಮತ್ತು ಕೋವಿಡ್ ಮಾರ್ಗಸೂಚಿ ಪಾಲಿಸಲಾಗಿದೆ ಎಂದು ತಿಳಿಸಿದ್ದಾರೆ. ಬೆಳಗಿನ ಜೀವಶಾಸ್ತ್ರ ಪರೀಕ್ಷೆಗೆ ಒಟ್ಟು ೪೯೬೪ ಮಂದಿ ನೋಂದಾಯಿಸಿದ್ದು , ೪೪೦೩ ಮಂದಿ ಹಾಜರಾದರು ಮತ್ತು ೫೬೧ ಮಂದಿ ಗೈರಾದರು.
ಮಧ್ಯಾಹ್ನದ ಅವಧಿಯಲ್ಲಿ ನಡೆದ ಗಣಿತ ವಿಷಯಕ್ಕೆ ಒಟ್ಟು ೪೯೬೪ ಮಂದಿ ನೋಂದಾಯಿಸಿದ್ದು , ೪೭೮೬ ಮಂದಿ ಪರೀಕ್ಷೆಗಹಾಜರಾಗಿದ್ದು , ೧೭೮ ಮಂದಿ ಗೈರಾಗಿದ್ದರು ಎಂದು ಪಿಯು ಉಪನಿರ್ದೇಶಕರು ತಿಳಿಸಿದ್ದಾರೆ. ಪರೀಕ್ಷೆಗೆ ಮುನ್ನ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸ್ಯಾನಿಟೈಸರ್ ಸಿಂಪಡಿಸಲಾಗಿತ್ತು , ಕೂ ಎಡ್ ಮಾರ್ಗ ಸೂಚಿಯಡಿ ಪರೀಕ್ಷೆಗೆ ಅರ್ಧ ಗಂಟೆ ಮುಂಚೆ ಹಾಜರಾದ ವಿದ್ಯಾರ್ಥಿಗಳನ್ನು ಥರ್ಮಲ್ ನಿಂಗ್ಗೆ ಒಳಪಡಿಸಿ , ಸಾನಿಟೈಸರ್ ನೀಡಿ ಒಳ ಆಹ್ವಾನಿಸಲಾಗಿದ್ದು , ಆಶಾ ಕಾರ್ಯಕರ್ತೆಯರ ನೆರವು ಪಡೆಯಲಾಯಿತು ಎಂದು ತಿಳಿಸಿದ್ದಾರೆ.
೧೪೪ ನೇ ಸೆಕ್ಷನ್ ನಿಷೇದಾಜ್ಞೆ ಜಾರಿ ಯಾವುದೇ ಗೊಂದಲಗಳಿಗೆ ಅವಕಾಶವಾಗದಂತೆ ಎಲ್ಲಾ ಪರೀಕ್ಷಾ ಕೇಂದಗಳ ಸುತ್ತ ೨೦೦ ಮೀಟರ್ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳು ನಿಷೇಧಾಜ್ಞೆ ಜಾರಿಗೊಳಿಸಿದ್ದು , ಕೇಂದ್ರಗಳಲ್ಲಿ ಸುರಕ್ಷತೆಗೆ ಪೊಲೀಸರ ನೆರವು ಪಡೆಯಲಾಗಿತ್ತು ಎಂದು ತಿಳಿಸಿದರು. ಪರೀಕ್ಷಾ ಕೇಂದ್ರಗಳಿಗೆ ರಾಜ್ಯಮಟ್ಟದ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.