ಕಾಸರಗೋಡ್ (www.vknewes.com) : ಹಿಂದುತ್ವ ಸಿದ್ಧಾಂತಗಳ ಕುರಿತು ಕಲಿಸುವ ಹಲವಾರು ಪುಸ್ತಕಗಳು ಲಭ್ಯವಿರುವಾಗ ಹಿಂದುತ್ವ ಸಿದ್ದಾಂತದ ಮಾರ್ಗಸೂಚಿಯೆಂದೇ ಬಿಂಬಿಸಲ್ಪಡುವ ‘ಬೆಂಚ್ ಓಫ್ ತೋಟ್ಸ್’ನಂತಹ ಪುಸ್ತಕಗಳು ಸಿಲೆಬಸ್ನಲ್ಲಿ ನುಸುಳಿರುವುದು ಒಮ್ಮೆಯೂ ಅಂಗೀಕರಿಸಲಾಗದು ಎಂದು ಎಸ್ ಎಸ್ ಎಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎನ್ ಜಾಫರ್ ಹೇಳಿದರು.
ಎಸ್ ಎಸ್ ಎಫ್ ಕಾಸರಗೋಡ್ ಜಿಲ್ಲಾ ಸಾಹಿತ್ಯೋಲ್ಸವ್ ವೇದಿಕೆಯಲ್ಲಿ ಅವರು ಮುಖ್ಯ ಭಾಷಣ ಮಾಡುತ್ತಿದ್ದರು. ಕಣ್ಣೂರ್ ಯೂನಿವರ್ಸಿಟಿಯ ಸಿಲೆಬಸ್ ವಿಷಯದಲ್ಲಿ ಎದ್ದಿರುವ ವಿವಾದದ ಕುರಿತು ಕೆಲವರು ಹೇಳುವ ನ್ಯಾಯೀಕರಣಗಳು ಬಾಲಿಶವಾದುದಾಗಿದೆ. ಭವಿಷ್ಯದಲ್ಲಿ ಇಂತಹ ಪುಸ್ತಕಗಳಿಗೆ ಸಾಮಾಜಿಕ ಮಾನ್ಯತೆ ಲಭಿಸಲು ಯುನಿವರ್ಸಿಟಿಯಲ್ಲಿ ಕಲಿಸುವುದು ಕಾರಣವಾಗಬಹುದು. ವಿದ್ಯಾಲಯಗಳಲ್ಲಿ ಕೇಂದ್ರ ಸರಕಾರದ ಕೆಸರೀಕರಣವು ಬಲವಾಗಿ ನಡೆಯುತ್ತಿರುವಾಗ ಇಂತಹ ವಿಷಯಗಳನ್ನು ಅತ್ಯಂತ ಎಚ್ಚರಿಕೆಯಿಂದಲೇ ಸಮೀಪಿಸಬೇಕೆಂದು ಅವರು ಹೇಳಿದರು.
ವರದಿ : ಕರೀಂ ಗಾಳಿಮುಗಮ್
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.