ವಿಟ್ಲ (ವಿಶ್ವಕನ್ನಡಿಗ ನ್ಯೂಸ್): ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಮಹಿಳಾ ವಿಭಾಗದಿಂದ “ಮಹಿಳೆಯರ ಸುರಕ್ಷತೆ ದೇಶದ ಹೊಣೆ” ಎಂಬ ಧ್ಯೇಯದಡಿಯಲ್ಲಿ ಮಹಿಳಾ ಸುರಕ್ಷತಾ ಜಾಗೃತಿ ಅಭಿಯಾನವನ್ನು 12.09.2021 ರಿಂದ 19.09.2021 ರವರೆಗೆ ಹಮ್ಮಿಕೊಂಡಿದ್ದು, ಇದರ ಸಲುವಾಗಿ ಕಳೆದ 16.09. 2021 ರ ಗುರುವಾರ ಸಂಜೆ ವಿಟ್ಲದ ಅನುಗ್ರಹ ವಾಣಿಜ್ಯ ಸಂಕೀರ್ಣದಲ್ಲಿರುವ ಮಿನಿ ಸಭಾ ಭವನದಲ್ಲಿ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಮಹಿಳಾ ಕಾರ್ಯಕರ್ತೆಯರಿಂದ ವಿಚಾರ ವಿನಿಮಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ದೇಶದಲ್ಲೆಡೆ, ಅವ್ಯಾಹತವಾಗಿ ನಡೆಯುತ್ತಿರುವ ಮಹಿಳಾ ದೌರ್ಜನ್ಯಕ್ಕೆದುರಾಗಿ, ಸಾರ್ವಜನಿಕ ಜಾಗೃತಿ ಮೂಡಿಸುವ ಉದ್ದೇಶದಿಂದ, ಇಲ್ಲಿನ ವೆಲ್ಫೇರ್ ಮಹಿಳಾ ಒಕ್ಕೂಟದ ಸದಸ್ಯೆಯರ ಸಂಗಮದ ಈ ಸಭೆಯಲ್ಲಿ, ಪಕ್ಷದ ದ.ಕ. ಜಿಲ್ಲಾ ಮಹಿಳಾ ಸಮಿತಿಯ ಅಧ್ಯಕ್ಷೆ ಶ್ರೀಮತಿ ಮಮ್ತಾಝ್ ವಾಮಂಜೂರು ಪ್ರಾಸ್ತಾವಿಕ ಭಾಷಣ ಮಾಡಿದ ನಂತರ, ವಿಶೇಷ ಆಹ್ವಾನಿತ ಅತಿಥಿಗಳಾಗಿ ಆಗಮಿಸಿದ್ದ,ಶ್ರೀಮತಿ ಆಶಾಮಣಿ ರೈ ವಕೀಲೆಯರು ಬಂಟ್ವಾಳ ಹೆಣ್ಣು ಮಕ್ಕಳ,ತಾಯಂದಿರ ಹೀಗೆ ಮಹಿಳೆಯರ ಸಮಸ್ಯೆಗಳ ವಿವಿಧ ಮಗ್ಗಲುಗಳ ಬಗ್ಗೆ ತಮ್ಮ ವಿಚಾರ ಭಾಷಣದಲ್ಲಿ ಚರ್ಚಿಸಿದರು.
ಶ್ರೀಮತಿ ಶಾರದಾ,ಶಿಶು ಅಭವೃದ್ಧಿ ಯೋಜನೆ ವಿಟ್ಲ ಇದರ ಹಿರಿಯ ಮೇಲ್ವಿಚಾರಕಿಯವರು ಸರಕಾರಿ ಇಲಾಖೆಗಳಿಂದ ಅದರಲ್ಲೂ ಶಿಸು ಅಭಿವೃದ್ಧಿ ಇಲಾಖೆಯಿಂದ ಮಹಿಳೆಯರಿಗೆ ಮತ್ತು ವಿಕಲ ಚೇತನ ಮಹಿಳೆಯರಿಗೆ ಮಾತ್ರವಲ್ಲದೆ ಪುರುಷರಿಗೂ ಇರುವ ಕೆಲವು ಸಹಾಯ ಸವಲತ್ತುಗಳ ಕುರಿತು ವಿವರಿಸಿದರು, ಶ್ರೀಮತಿ ರೇವತಿಯಮ್ಮ ನಿವೃತ್ತ ಶಿಕ್ಷಕಿ ನೀರ್ಕಜೆ, ವಿಟ್ಲರವರು ಮಹಿಳೆಯರು ಉನ್ನತ ಮಟ್ಟದ ಶಿಕ್ಷಣವನ್ನು ಪಡೆಯುವುದರ ಮೂಲಕ ಸಮಾಜಕ್ಕೆ ಲಭಿಸುವ ಪ್ರಯೋಜನಗಳನ್ನು ಹೇಳಿದರು, ಮತ್ತು ಶ್ರೀಮತಿ ಇಂದಿರಾ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ಮಹಿಳಾ ಆರೋಗ್ಯದ ಬಗ್ಗೆ ಹಾಗೂ ಆರೋಗ್ಯ ಇಲಾಖೆಯ ಮೂಲಕ ಸರಕಾರ ನೀಡುವ ಹಲವು ಉಚಿತ ಸೌಲಭ್ಯಗಳ ಮಾಹಿತಿ ನೀಡಿದರಲ್ಲದೆ, ಪ್ರಸಕ್ತ ಹಮ್ಮಿಕೊಂಡಿರುವ ಲಸಿಕಾ ಶಿಬಿರಗಳ ವಿವರಣೆಯನ್ನು ಸಭಿಕರಲ್ಲಿ ಹಂಚಿದ ಅವರು ಎಲ್ಲರಲ್ಲೂ ಕೋವಿಡ್ ಲಸಿಕೆಯನ್ನು ಪಡೆಯುವಂತೆ ಮನವಿ ಮಾಡಿಕೊಂಡರು ಹೀಗೆ ಎಲ್ಲರೂ ತಮ್ಮ ತಮ್ಮ ವಿಚಾರವನ್ನು ಮಂಡಿಸಿ ಮಹಿಳಾ ಜಾಗೃತಿ ಸಂದೇಶವನ್ನು ನೀಡಿದರು. ಪಕ್ಷದ ದ. ಕ. ಜಿಲ್ಲಾ ಸಮಿತಿಯ ಉಪಾಧ್ಯಕ್ಷೆ ಮರಿಯಂ ಶಹೀರರವರು ಮಾತನಾಡಿ ಮಹಿಳಾ ಸುರಕ್ಷತೆಯ ಬಗ್ಗೆ ತಮ್ಮ ಪಕ್ಷವು ಆಡಳಿತ ವರ್ಗಕ್ಕೆ ತಮ್ಮ ಹೊಣೆಗಾರಿಕೆಯನ್ನು ನೆನಪಿಸುವ ಕೆಲಸವನ್ನು ಮಾಡುತ್ತಿದೆಯೆಂದರು.
ಕೊನೆಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಸಮಿತಿಯ ಉಪಾಧ್ಯಕ್ಷರಾದ ಶ್ರೀಯುತ ಶ್ರೀಕಾಂತ್ ಸಾಲ್ಯಾನ್ ರವರು ಇಷ್ಟೆಲ್ಲಾ ರಾಜಕೀಯ ಪಕ್ಷಗಳು ಇಲ್ಲಿ ಇದ್ದಾಗ್ಯೂ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಎಂಬ ಪಕ್ಷ ಸ್ಥಾಪನೆಯ ಉದ್ದೇಶ ಮತ್ತು ಅದರ ಧ್ಯೇಯ ಧೋರಣೆಗಳನ್ನು ವಿವರಿಸಿದರು.
ಪಕ್ಷದ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿರುವ ಅಡ್ವಕೇಟ್ ಶ್ರೀ ಸರ್ಪರಾಜ್ ರವರು ಅಧ್ಯಕ್ಷತೆ ವಹಿಸಿದ್ದ ಈ ಸಭೆಯನ್ನು ನಿರೂಪಣೆಗೈದ ಪಕ್ಷದ ದ.ಕ. ಜಿಲ್ಲಾ ಮಾಧ್ಯಮ ವಕ್ತಾರರಾಗಿರುವ ಶ್ರೀ ಅಬ್ದುಲ್ ಖಾದರ್ ಕುಕ್ಕಾಜೆಯವರು ಸಭೆಯ ಆರಂಭದಲ್ಲಿ ಅತಿಥಿ ಮತ್ತು ಸಭಿಕರನ್ನು ಸ್ವಾಗತಿಸಿದರು ಕೊನೆಯಲ್ಲಿ ಪಕ್ಷದ ಮಹಿಳಾ ವಿಭಾಗದ ವಿಟ್ಲ ವರ್ತುಲದ ಸಂಯೋಜಕಿ ಶ್ರೀಮತಿ ಆಶುರಾರವರು ಧನ್ಯವಾದವಿತ್ತರು. ಸಭೆಯಲ್ಲಿ ಅಭಿಯಾನ ಸಂಚಾಲಕಿ ಶ್ರೀಮತಿ ಝೀನತ್ ಇಸ್ಮಾಯಿಲ್ ರವರು ಉಪಸ್ಥಿತರಿದ್ದರು.
ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.