ಕುಂದಾಪುರ ,(ವಿಶ್ವ ಕನ್ನಡಿಗ ನ್ಯೂಸ್ ): ಹಲವು ವರ್ಷಗಳ ಕಾಲ ಹೊಸಂಗಡಿ ಗ್ರಾಮ ಪಂಚಾಯತ್ ನಲ್ಲಿ ಕಾರ್ಯದರ್ಶಿ, ಅಭಿವೃದ್ಧಿ ಅಧಿಕಾರಿ ಯಾಗಿ ಉತ್ತಮ ಕಾರ್ಯನಿರ್ವಹಿಸಿ ಅಜಾತ ಶತ್ರುವಾಗಿ ಗ್ರಾಮಸ್ಥರ ಮೆಚ್ಚುಗೆ ಪಾತ್ರರಾಗಿದ್ದ ಪ್ರಸ್ತುತ ಸಿದ್ದಾಪುರದ ಗ್ರಾಮ ಪಂಚಾಯತ್ ನಲ್ಲಿ ಅಭಿವೃದ್ಧಿ ಅಧಿಕಾರಿ ಆಗಿ ಸೇವೆ ಸಲ್ಲಿಸಿ ನಿವ್ರತ್ತಿ ಹೊಂದಿರುವ ಶಿವರಾಮ ಶೆಟ್ಟಿಯವರಿಗೆ ಇಂದು ಹೊಸಂಗಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಬೀಳ್ಕೊಡುಗೆ ಸನ್ಮಾನ ನಡೆಯಿತು.ಹೊಸಂಗಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಆದ ಶ್ವೇತ ಲತಾ, ಲೆಕ್ಕಪರಿಶೋದಕ ಗಜೇಂದ್ರ, ಮತ್ತು ಸಿಬ್ಬಂದಿಗಳು,ಹೊಸಂಗಡಿ ಗ್ರಾಮ ಪಂಚಾಯತ್ ಹಾಲೀ ಸದಸ್ಯರಾದ ಆನಂದ ಶೆಟ್ಟಿ ಬಾಗೀಮನೆ,ಸಂತೋಷ ಶೆಟ್ಟಿ, ಹೆರಿಯ ನಾಯ್ಕ, ವಿ ಶ್ರೀಮತಿ, ಅಶ್ವಿನಿ, ಪ್ರೇಮ ಕೆ ಮಡಿವಾಳ,ಹೊಸಂಗಡಿ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಶ್ರೀಧರ್, ಮಾಜಿ ಸದಸ್ಯರುಗಳಾದ ಬಾಸ್ಕರ ಶೆಟ್ಟಿ ,ಅನಿತಾ, ಮಲ್ಲಿಕಾ, ನಾಗವೇಣಿ, ಯಡಮೊಗ್ಗೆ ಗ್ರಾಮ ಪಂಚಾಯ್ತ್ ಮಾಜಿ ಉಪಾಧ್ಯಕ್ಷ ರಾದ ಬಾಲಚಂದ್ರ ಕುಲಾಲ್ ನಿವ್ರತ್ತ ಕೆಪಿಸಿ ಅಧಿಕಾರಿಗಳಾದ ಕೆ ಎಸ್ ಮಡಿವಾಳ, ಬಿ ರಾಜು ಶೆಟ್ಟಿ,ಉದ್ಯಮಿ ದೇವಿಪ್ರಸಾದ್ ಶೆಟ್ಟಿ, ದಲಿತ ಮುಖಂಡ ಆನಂದ ಕಾರೂರು,ಆಶಾಕಾರ್ಯಕರ್ತೆಯರಾದ ಸರೋಜ,ಗೀತಾ,ವಿಜಯ, ಸೀತಾದೇವಿ ಮತ್ತು ಗ್ರಾಮಸ್ಥರು ಗಣ್ಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.