ಮಾಲೂರು (ವಿಶ್ವ ಕನ್ನಡಿಗ ನ್ಯೂಸ್): ಮಾಲೂರು ತಾಲ್ಲೂಕಿನ ಜನಪ್ರಿಯ ಮಾಜಿ ಶಾಸಕರಾಗಿ, ಹಾಗೂ ಮುಜರಾಯಿ ಇಲಾಖೆಯ ಮಾಜಿ ಸಚಿವರಾಗಿ ಸೇವೆ ಸಲ್ಲಿಸಿದವರು, ರಾಜ್ಯಕ್ಕೆ ಆಧ್ಯಾತ್ಮಿಕ ಸೇವೆಯ ಮೂಲಕ ಚಿರಪರಿಚಿತರಾದ ಮಾಲೂರು ಎಸ್.ಎನ್. ಕೃಷ್ಣಯ್ಯಶೆಟ್ಟಿ ರವರ ಹುಟ್ಟುಹಬ್ಬವನ್ನು ಮಾಲೂರಿನ ಮಾರಿಕಾಂಬಾ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಚರಣೆ ಮಾಡಲಾಯಿತು.
ಮಾಲೂರು ಮಹಾಮಾತೆ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಮಾಲೂರು ಪುರಸಭಾ ಸದಸ್ಯರಾದ ಭಾನುತೇಜಾ ರವರು ಮಾತನಾಡಿ ”ರಾಜ್ಯದಲ್ಲಿ ಆಧ್ಯಾತ್ಮಿಕ ಚಿಂತನೆ, ಸಮಾಜ ಸೇವೆ, ಅನ್ನದಾನ ಕಾರ್ಯ, ಬಡವರ ಪರ ಸದಾ ಸೇವೆ ಸಲ್ಲಿಸುವ ಮಾಜಿ ಸಚಿವರಾದ ಮಾಲೂರು ಎಸ್.ಎಸ್.ಕೃಷ್ಣಯ್ಯಶೆಟ್ಟಿ ರವರ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾಲೂರು ಮಾರಿಕಾಂಬಾ ದೇವಿಗೆ ವಿಶೇಷ ಪೂಜೆಯ ಮೂಲಕ ದೇವರು ಉತ್ತಮ ಆರೋಗ್ಯ, ಸಿರಿ-ಸಂಪತ್ತು ನೀಡಿ ನೂರ್ಕಾಲ ಚೆನ್ನಾಗೀದ್ದು, ನಿರಂತರ ಉತ್ತಮ ಸೇವೆಯನ್ನು ನಮ್ಮ ತಾಲ್ಲೂಕಿನ ಜನರಿಗೆ ನೀಡುವಂತಾಗಲಿ, ಹಾಗೇ ಈ ನಾಡಿಗೆ ಗಂಗಾಜಲವನ್ನು ಎಲ್ಲಾ ದೇವಾಲಯಗಳಿಗೆ ನೀಡುವ ಮೂಲಕ ಭಗವಂತ ಸೇವೆ ಮಾಡಿದ ಗೌರವ ತಂದಿರುವುದು ನಮ್ಮ ಹೆಮ್ಮೆ ಹಾಗೂ ದೊಡ್ಡತಿರುಪತಿ ವೆಂಕಟರಾಮಣ ದೇವಾಲಯದಲ್ಲಿ ಕನ್ನಡಿಗರಿಗೆ ಪ್ರತಿದಿನ ಊಟ ನೀಡುವ ಕಾರ್ಯ ಮಾಡುತ್ತಿರುವ ಮಹಾನ್ ವ್ಯಕ್ತಿಗೆ ಶುಭವಾಗಲಿ ಎಂದು ಹಾರೈಸುತ್ತೆವೆ” ಎಂದರು.
ಇದೇ ಸಂದರ್ಭದಲ್ಲಿ ಮಾಲೂರಿನ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಣ್ಣು-ಹಂಪಲು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಈ ಸಂದರ್ಭದಲ್ಲಿ ಮಾಲೂರು ಭಾರತೀಯ ಜನತಾ ಪಾರ್ಟಿಯ ಮಾಜಿ ತಾಲ್ಲೂಕು ಅಧ್ಯಕ್ಷರಾದ ಬಿ.ಎಂ.ವೆಂಕಟೇಶ್, ಪುರಸಭಾ ಸದಸ್ಯರಾದ ಕೂರಿ ಮಂಜು, ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಅಮರಾವತಿ, ಶ್ರೀಮತಿ ಶ್ರೀವಳ್ಳಿ, ಬೋರ್ ಮಂಜು, ಅಂಬೇಡ್ಕರ್ ಕಾಲೋನಿಯ ರಾಮಣ್ಣ, ಯುವ ಮೋರ್ಚಾ ಮಾಜಿ ಅಧ್ಯಕ್ಷ ಸಂಪಗೆರೆ ಅಶ್ವಥ್, ಮಣಿ, ಶಂಕರಪ್ಪ, ವಿನೋದ್, ಹಾಗೂ ಬಿಜೆಪಿ ಪಕ್ಷದ ಅನೇಕ ಕಾರ್ಯಕರ್ತರು ಹಾಜರಿದ್ದರು.
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.