ಪುತ್ತೂರು(www.vknews.com) : ಸ್ಮಾರ್ಟ್ ರೂಟ್ ಟೆಕ್ನಾಲಜೀಸ್ ಸಂಸ್ಥೆಯ ನೂತನ ಹೋಲ್ ಸೇಲ್ ಮತ್ತು ರಿಟೇಲ್ ಮಳಿಗೆಯು ಪುತ್ತೂರಿನ ಸಿಟಿ ಸೆಂಟರ್ ಬ್ಯುಲ್ಡಿಂಗನಲ್ಲಿ ದಿನಾಂಕ.04.11.2021, ಗುರುವಾರದಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲೀಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ನೂತನ ಮಳಿಗೆಯನ್ನು, ಅಲ್ ಇಹ್ ಸಾನ್ ಎಜುಕೇಷನಲ್ ಟ್ರಸ್ಟ್ ಮುಳೂರುನ ಅಧ್ಯಕ್ಷರಾದ ಅಸಯ್ಯದ್ ಕೆ. ಎಸ್. ಆಟಕೋಯ ತಂಗಳ್ ಕುಂಬೋಲ್ ಉದ್ಘಾಟಿಸಲಿದ್ದು, ಶಾಸಕರಾದ ಸಂಜೀವ ಮಟಂದೂರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪುತ್ತೂರು ನಗರ ಸಭಾ ಅಧ್ಯಕ್ಷ ಜೀವಂದರ್ ಜೈನ್, ಹೇಮನಾಥ ಶೆಟ್ಟಿ ಕಾವು, ಒಳಮೊಗ್ರು ಗ್ರಾಮ ಪಂಚಾಯತ್ ನ ಹಾಜಿ ಅಬ್ದುಲ್ ರಹಿಮಾನ್ ಅರಿಯಡ್ಕ, ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸ್ಮಾರ್ಟ್ ರೂಟ್ ಟೆಕ್ನಾಲಜೀಸ್ ಸಂಸ್ಥೆಯು ಕಳೆದ ಹಲವು ವರ್ಷಗಳಿಂದ ಗ್ರಾಹಕರ ಬೇಡಿಕೆಗಳನ್ನು ಜಿಲ್ಲೆಯಾದ್ಯಂತ ಪೂರೈಸುತ್ತಿದ್ದು, ಪುತ್ತೂರು ವಿಭಾಗದ ಗ್ರಾಹಕರ ಅನುಕೂಲಕ್ಕಾಗಿ ನೂತನ ಮಳಿಗೆಯನ್ನು ಆರಂಭಿಸಲಾಗಿದೆ.
ನಮ್ಮಲ್ಲಿ, ಸೋಲಾರ್ ಸಿಸ್ಟಮ್ ನ ಪ್ರಾಡಕ್ಟ್ ಗಳು, ಸಿಸಿಟಿವಿ ಮತ್ತು ಸೆಕ್ಯೂರಿಟಿ ಸಿಸ್ಟಮ್ ನ ಪ್ರಾಡಕ್ಟ್ ಗಳ ಹೋಲ್ ಸೇಲ್ ಮತ್ತು ರಿಟೇಲ್ ಮಾರಾಟ ಮತ್ತು ಸೇವೆ ಲಭ್ಯವಿದೆ, ಹಾಗೂ ಇನ್ಸ್ಟಾಲೇಷನ್, ಸಪೋರ್ಟ್ ಮತ್ತು ಮೇಂಟೇನಾನ್ಸ್ ಮಾಡಿಕೊಡಲಾಗುವುದು. ಹಾಗೂ, ಸೋಲಾರ್ ವಾಟರ್ ಹೀಟರ್, ಸೋಲಾರ್ ಲೈಟ್ಸ್, ಸೋಲಾರ್ ಇನ್ವರ್ಟರ್, ಬ್ಯಾಟರಿ ಸಹಿತ ಮತ್ತು ಬ್ಯಾಟರಿ ರಹಿತ ವಿದ್ಯುತ್ ಸ್ಥಾವರ ಅಳವಡಿಕೆ, ಸೋಲಾರ್ ಸಿಸಿಟಿವಿ,ವೈಫೈ ಮತ್ತು 4ಜಿ ಸಿಮ್ ಕ್ಯಾಮೆರಾ, ಬಯೋಮೆಟ್ರಿಕ್ ಅಟೆಂಡೆನ್ಸ್ ಮಷೀನ್, ಆಟೋಮ್ಯಾಟಿಕ್ ಗೇಟ್ಸ್, ಇಂಟರ್ಕಾಂ ಟೆಲಿಫೋನ್, ಜಿ ಪಿ ಎಸ್ ವೆಹಿಕಲ್ ಟ್ರಾಕಿಂಗ್ ಸಿಸ್ಟಮ್ ಜೊತೆ ಹಲವು ಸೌಲಭ್ಯಗಳನ್ನು ಗ್ರಾಹಕರು ಈ ಮೂಲಕ ಪಡೆಯಬಹುದು ಎಂದು ಸಂಸ್ಥೆಯ ಮಾಲಕರು ಪ್ರಕಟಣೆ ಯಲ್ಲಿ ತಿಳಿಸಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.