ಇಂದ್ರಾಜೆ(ವಿಶ್ವಕನ್ನಡಿಗ ನ್ಯೂಸ್): ಬದ್ರಿಯಾ ಜುಮಾ ಮಸೀದಿ ಇಂದ್ರಾಜೆ ಇದರ ಮಹಾಸಭೆಯು 12/11/2021 ರಂದು ಜುಮಾ ನಮಾಝಿನ ಬಳಿಕ ಖಾಝಿ ಖುರ್ರತುಸ್ಸಾದಾತ್ ಫಝಲ್ ಕೋಯಮ್ಮ ತಂಙಳ್ ಕೂರತ್ ರವರ ನೇತ್ರತ್ವದಲ್ಲಿ ನಡೆಯಿತು.ಪ್ರ.ಕಾರ್ಯದರ್ಶಿಯವರು ಸರ್ವರನ್ನೂ ಸ್ವಾಗತಿಸಿ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು,ಕೆಲವು ಚರ್ಚೆಗಳ ಬಳಿಕ ಸಭೆಯಲ್ಲಿ ಅಂಗೀಕರಿಸಲಾಯಿತು.
ಬಳಿಕ ಹಳೆ ಕಮಿಟಿಯನ್ನು ಬರ್ಖಾಸ್ತುಗೊಳಿಸಿ ನೂಥನ ಸಮಿತಿಗಾಗಿ 15 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಿ,ಅಧ್ಯಕ್ಷರಾಗಿ ಇಸ್ಮಾಯಿಲ್ ಹಾಜಿ ಉಪಾಧ್ಯಕ್ಷರುಗಳಾಗಿ ಉಮ್ಮರ್ ಕುಳಾಯಿತ್ತೋಡಿ,ಇಸ್ಮಾಯಿಲ್ ಎನ್.ಎ ,ಪ್ರ.ಕಾರ್ಯದರ್ಶಿಯಾಗಿ ಇಬ್ರಾಹಿಂ ಖಲೀಲ್ ,ಕೋಶಾಧಿಕಾರಿಯಾಗಿ ಇಸ್ಮಾಯಿಲ್ ಮುಸ್ಲಿಯಾರ್,ಜೊ.ಕಾರ್ಯರ್ಶಿಗಳಾಗಿ ಸಿದ್ದೀಖ್ ಮುಸ್ಲಿಯಾರ್ ಹಾಗೂ ಫಾರೂಖ್ ಸಾಹೆಬ್ ರನ್ನು ಆರಿಸಲಾಯಿತು.
ಕೊನೆಯಲ್ಲಿ ಖಾಝಿಯವರು ಹಲವು ಉಪದೇಶ ನಿರ್ದೇಶನಗಳನ್ನು ನೀಡಿ ಪ್ರಾರ್ಥನೆಗೈದು ಸ್ವಲಾತಿನೊಂದಿಗೆ ಮಹಾಸಭೆಯನ್ನು ಮುಕ್ತಾಯಗೊಳಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.