(www.vknews.com) : 2021 ಜೀವನದಲ್ಲಿ ಆಸೆ ಪಟ್ಟ ಕೆಲವೊಂದು ಕನಸುಗಳು ನನಸಾದ ವರ್ಷ . ನೋವು ನಲಿವು ಆತ್ಮೀಯರ ಅಗಲುವಿಕೆ ಈಗೆ ಹಲವಾರು ಸಂಗತಿಗಳು ನಡೆದ ವರ್ಷ. ಕುಟುಂಬ ಬಂಧವನ್ನು ನಾನು ಮತ್ತಷ್ಟು ಗಟ್ಟಿ ಮಾಡಿದ ವರುಷ ಇದು . ಅಮ್ಮನ ಕುಟುಂಬಸ್ಥರನ್ನು ಭೇಟಿಯಾದೆ. ನನ್ನ ಬಾಳಸಂಗಾತಿಯನ್ನು ಮೊದಲ ಬಾರಿ ಕಂಡದ್ದು ಅವರ ಮನೆಯವರ ಪ್ರೀತಿಯಲ್ಲಿ ಮನಸ್ಸಲ್ಲಿ ಅಡಗಿದ್ದ ನೋವನ್ನೇ ಮರೆತೆ.ದಿನೇ ದಿನೇ ಖಿನ್ನತೆಗೆ ಜಾರುತಿದ್ದ ನನ್ನ ಬಾಳಲಿ ಒಂದು ಹೊಸ ಮುನ್ನುಡಿ ಬರೆದ ವರ್ಷ. ಜೀವನದಲ್ಲಿ ಏನೂ ಸಾಧಿಸಲಾಗದು ಎಂದುಕೊಂಡಿದ್ದ ನನಗೆ ಪ್ರಯತ್ನ ಪಟ್ಟರೆ ಎಲ್ಲವೂ ಸಾಧಿಸಬಹುದು ಎಂದು ನಂಬಿಸಿದೆ.
ಮೊದಲ ಬಾರಿ ಕವನ ವಾಚಿಸಲು ಬ್ಯಾರಿ ಸಾಹಿತ್ಯಅಕಾಡೆಮಿ ನನಗೆ ಅವಕಾಶ ಮಾಡಿಕೊಟ್ಟ ವರುಷ.. ವೃತ್ತಿ ಜೀವನದಲ್ಲೂ ಉತ್ತಮ ಅವಕಾಶ ಸಿಕ್ಕ ವರುಷ. ಹಲವಾರು ಕನಸ ಕಂಡಿದ್ದರೂ ಮನೆಯವರ ಸಂತೋಷದ ಮುಂದೆ ಬೇರೇನೂ ದೊಡ್ಡದಲ್ಲ ಎಂದು ಎಲ್ಲವನ್ನು ಅವರಿಚ್ಚೆಯಂತೆ ನಡೆಸಿದ ಕುಶಿ. ಹೀಗೆ ಹಲವಾರು ಕಾರ್ಯಗಳು ಈ ವರುಷ ನಡೆದವು . 2021 ನನ್ನ ಬಾಳಲಿ ನೋವುಗಳ ನಡುವೆಯೂ ಅತೀ ಹೆಚ್ಚು ಕುಶಿ ನೀಡಿದ ವರ್ಷ.
– ಡಾ. ಜುವೈರಿಯಾ ಮುಫೀದ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.