ಪುತ್ತೂರು(www.vknews.in): ಹಿಜಾಬ್ ಎನ್ನುವುದು ಭಾರತೀಯ ಸಂಸ್ಕ್ರತಿಯ ಭಾಗವಾಗಿದೆ. ಏಕ ದೈವ ವಿಶ್ವಾಸಿ ಅಲ್ಲಾಹನಿಗೆ ಮಾತ್ರ ಭಯಪಟ್ಟು ಅವನಿಗೆ ಮಾತ್ರ ಸುಜೂದ್ ಮಾಡುವುದು ಎಂದು ದೃಢ ನಿರ್ಧಾವನ್ನು ಮಾಡಿರುವ ಮುಸಲ್ಮಾನರು ಯಾವತ್ತೂ ತಮ್ಮ ಬೌದ್ಧಿಕ ಲಾಭಕ್ಕಾಗಿ ಇತರರ ಮುಂದೆ ತನ್ನ ವಿಶ್ವಾಸವನ್ನು ಮೀಸಲಿಡುವುದು ಅಸಾಧ್ಯ. ಮುಸ್ಲಿಂ ಮಹಿಳೆಯರ ಹಿಜಾಬ್ ಬೇಕಾಗುವ ಸಮಯದಲ್ಲಿ ಧರಿಸುವುದು ಬೇಡವಾದ ಸಮಯದಲ್ಲಿ ಕಳಚುವ ವಸ್ತುವಲ್ಲ. ಅಲ್ಲಾಹನ ನಿಯಮಗಳನ್ನು ನಿಯಮಗಳು ಬೇಕಾದ ರೀತಿಯಲ್ಲಿ ಬದಲಾವಣೆ ಮಾಡಲು ಯಾರಿಗೂ ಸಾದ್ಯವಿಲ್ಲ ಹಿಜಾಬ್ ವಿಚಾರದಲ್ಲಿ ಕೋರ್ಟು ತೀರ್ಪು ಯಾವುದೇ ಬಂದರು ಅಲ್ಲಾಹನ ತೀರ್ಪನ್ನು ಕೈಬಿಟ್ಟ ಜೀವಿಸಲು ಒಬ್ಬ ವಿಶ್ವಾಸಿಗೆ ಸಾದ್ಯವಿಲ್ಲ. ಹಿಜಾಬಿನ ವಿರುದ್ಧ ಪ್ರತಿಭಟನೆ ಮಾಡುವವರು ಅವರವರ ಧರ್ಮದ ಕುರಿತು ಕಲಿಯಲು ಮುಂದೆ ಬರಬೇಕು ಎಂದು ಮಿತ್ತೂರು ಸಿರಾಜುಲ್ ಹುದಾ ಜುಮ್ಮಾ ಮಸೀದಿಯ ಖತೀಬರಾದ ಬಹು। ಕೆ.ವಿ.ಮಜೀದ್ ದಾರಿಮಿ ಹೇಳಿದರು. ಶುಕ್ರವಾರದ ಜುಮಾ ನಂತರ ಮಾತನಾಡಿದ ಅವರು ಹಿಜಾಬ್ ಕೇವಲ ಇಸ್ಲಾಂ ಧರ್ಮದ ನಿಯಮಗಳಲ್ಲ . ಪರಶುರಾಮನು ತನ್ನ ಮುಂದೆ ಬರುವುದನ್ನು ನೋಡಿದ ರಾಮ ತನ್ನ ಮಡದಿಯಾದ ಸೀತೆಯೊಂದಿಗೆ ಹೀಗೆ ಹೇಳುತ್ತಾನೆ ‘ಹೋ ಸೀತೆ ನೀನು ನಿನ್ನ ಶಿರವಸ್ತದಿಂದ ನಿನ್ನನ್ನು ರಕ್ಷಿಸು ನಿನ್ನ ದೃಷ್ಟಿಯನ್ನು ಕೆಳಗೆ ತಗ್ಗಿಸು’. ಮುಹಾವೀರ ಚರಿತ್ರೆ ನಿಯಮ ಎಂಬ ಮಳಯಾಲಂ ಪುಸ್ತಕ ಭಾಗ 2 /71 ರಲ್ಲಿ ಈ ಸನ್ನಿವೇಶವನ್ನು ವಿವರಿಸಲಾಗಿದೆ ಎಂದರು. ತನ್ನ ದರ್ಮದ ಕುರಿತು ತಿಳಿಯದೆ ಪ್ರತಿಭಟಿಸುವವರು ಮೂರ್ಖರ ಲೋಕದಲ್ಲಿ ವಿಹರಿಸುತ್ತಿದ್ದಾರೆ ಎಂದು ಹೇಳಿದರು . ರಾಜಕೀಯ ಲಾಭಕ್ಕಾಗಿ ಬೇಳೆ ಬೇಯಿಸುವ ಕೆಲವು ಬ್ರಿಟಿಷರ ಅನುಯಾಯಿಗಳು ಮಾತ್ರ ಹಿಜಾಬ್ ನ ವಿರುದ್ಧ ಶಬ್ದ ಎತ್ತುತ್ತಿದ್ದಾರೆ ಎಂದರು ಡಿವೈಡ್ ಆ್ಯಂಡ್ ರೂಲ್ ಮೂಲಕ ಇನ್ನೂ ಈ ಭಾರತವನ್ನು ನಡೆಸಬಹುದು ಎಂದು ಗ್ರಹಿಸುವ ಶಕ್ತಿಗಳು ಕರ್ನಾಟಕವನ್ನು ಗುಜರಾತ್ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ಫ್ಯಾಸಿಸ್ಟ್ ಶಕ್ತಿಗಳು ಕೆಲವು ಘಟನೆಗಳನ್ನು ತಿಳಿಯುವುದು ಒಳಿತು 2002ಗುಜರಾತ್ ನಲ್ಲಿ ತನ್ನ ಜೀವಕ್ಕೆ ಬೇಕಾಗಿ ತನ್ನ ಅಂಗೈ ಚಾಚಿದ ಖುತುಬುಲ್ ಅನ್ಸಾರಿ ರವರಿಂದ ಪ್ರಾರಂಭಗೊಂಡು ನೂರಾರು ವಿಧ್ಯಾರ್ಥಿಗಳ ಮುಂದೆ ತನ್ನ ಹಕ್ಕಿಗಾಗಿ ತಕ್ಬೀರ್ ದ್ವನಿಯೊಂದಿಗೆ ಶಬ್ದ ಎತ್ತಿದ ಬೀಬಿ ಮುಸಾಕ್ ಖಾನ್ ದೈರ್ಯದೊಂದಿಗೆ ಬಾರತಿಯರು ಬದಲಾವಣೆ ಆಗಿದ್ದಾರೆ ಎಂಬುವುದನ್ನು ಫ್ಯಾಶಿಸ್ಟರು ಮೆರೆಯಬೇಡಿ ಎಂದು ಹೇಳಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.