(www.vknews.in) : ಭಾರತದ ಇಂದಿನ ಪರಿಸ್ಥಿತಿ ಮಾಧ್ಯಮದ ಮೂಲಕ ನಾವು ತಿಳಿದವರ ಆಗಿದ್ದೇವೆ. ಪ್ರತ್ಯೇಕವಾಗಿ ಕರ್ನಾಟಕದ ಈಗಿನ ಹಿಜಾಬ್ ವಿವಾದ. ಮುಸ್ಲಿಂ ಎಂಬ ಒಂದೇ ಕಾರಣಕ್ಕಾಗಿ ವೃದ್ದರು, ಮಹಿಳೆಯರು,ಮಕ್ಕಳು, ಯುವಕರು ಎಂದು ನೋಡದೆ ಯಾವುದೇ ದಾಕ್ಷಿನ್ಯವಿಲ್ಲದೆ ಅಕ್ರಮವಾಗಿ ಹಲ್ಲೆಗೈಯ್ಯುತ್ತಿದ್ದಾರೆ. ತಾವೆಲ್ಲರೂ ಪವಿತ್ರವಾದ ಈ ಪುಣ್ಯ ರಜಬ್ ತಿಂಗಳ ದಿವಸಗಳಲ್ಲಿ ಪ್ರತ್ಯೇಕವಾಗಿ ಪ್ರಾರ್ಥನೆ ಮಾಡಬೇಕಾಗಿದೆ.
ಹಲವಾರು ವ್ಯಕ್ತಿಗಳ ಮಾತಿನಲ್ಲೂ, ಮೊಹಲ್ಲಾಗಳಲ್ಲಲ್ಲಿಯೂ ಹೇಳುವಂತ ಮಾತಾಗಿಗದೆ “ನಾವು ಐಕ್ಯತೆಯಿಂದಿರುವವರು” ಆದರೆ ನಮ್ಮ ಮುಸ್ಲಿಂ ಸಮುದಾಯದಲ್ಲಿ ಹಲವಾರು ಸಂಘಟನೆಗಳು ಭಿನ್ನವಾಗಿದೆ. ಬಾಯಿ ಮಾತಿನಲ್ಲಿ ಐಕ್ಯತೆ ಎಂದು ಹೇಳಿ ಅನೈಕ್ಯತೆ ಪಾಲಿಸುತ್ತಿದೆ. ಕೆಲವೊಂದು ಸಂಘಟನೆಯ ಕಾರ್ಯಕರ್ತರು ಕೆಲವರು ಇಸ್ಲಾಮಿನ ಶತ್ರುಗಳಿಗೆ ಅಭಿನಂದನೆಯ ಕಾರ್ಯಕ್ರಮದಲ್ಲಿ ತೊಡಗಿದ್ದಾರೆ. ಇನ್ನೂ ಕೆಲವರು ಆ ಶತ್ರುವನ್ನು ನಿಂದನೆ ಮಾಡುತ್ತಿರುವ ಆತುರದಲ್ಲಿದ್ದಾರೆ, ಮಸ್ಜಿದ್ನ ಧರ್ಮಗುರುಗಳ ಮೇಲೆ ಹಲ್ಲೆ, ಮಸೀದಿ ಆಡಳಿತ ಮಂಡಳಿಯಲ್ಲಿ ಹತ್ತು ಹಲಾವಾರು ಪ್ರಶ್ನೆಗಳು ಇದೆ. ಇವೆಲ್ಲವೂ ಐಕ್ಯತೆ ಎಂದು ಹೇಳುವ ಮುಸ್ಲಿಂ ಸಂಘಟನೆಯಲ್ಲಾಗಿದೆ ಎಂಬೂದು ಖೇದಕರವಾಗಿದೆ. ಅದೇ ರೀತಿ ಇಂದು ಮಾಡುವ ಕೆಲವೊಂದು ರೀತಿಯ ಸಮಾಜ ಸೇವೆ ಅಥವ ಒಬ್ಬ ರೋಗಿಗೆ ಸಹಾಯ ಮಾಡಿದರೆ ಅದು ತನ್ನ ಪಕ್ಷಕ್ಕೆ, ತನ್ನ ಪಂಗಡಕ್ಕೆ, ತನ್ನ ಸಂಘಟನೆಗೆ ಅಥವ ತನ್ನ ಸ್ವಾರ್ಥಕ್ಕಾಗಿಯೇ ಎಂದು ಜಂಬ ಕೊಚ್ಚುವ ಸಮುದಾಯವಾಗಿ ನಮ್ಮ ಸಮುದಾಯ ಮಾರ್ಪಟ್ಟಿವೆ. ಎಲ್ಲಾಕ್ಕಿಂತ ಮಿಗಿಲಾಗಿ ಇದೆಲ್ಲವೂ ಮಾಡುವಂತದ್ದು ಒಂದು ಸಮುದಾಯದ ನಾಯಕರಾಗಿ ನೇತೃತ್ವ ನೀಡುವಂತ ವ್ಯಕ್ತಿಗಳಾಗಿದ್ದಾರೆ ಎಂಬುವುದು ವಿಪರ್ಯಾಸ. ಅಲ್ಲಾಹನ ಪವಿತ್ರ ಖುರ್ಆನ್ ಹೇಳುತ್ತಾನೆ :- “ನಿಮ್ಮ ಶತ್ರುವನ್ನು ನೀವು ನಾಯಕ ನಾಗಿಸಿದರೆ ನಿಮಗೆ ವಿಜಯ ಲಭಿಸಲ್ಲ”
ರಾಜಕೀಯ ಪಕ್ಷ ಎಂದರೆ ಮೈದಾನದಲ್ಲಿ ಆಡುವ ಚೆಂಡಿನ ಉದಾಹರಣೆಯಾಗಿದೆ. ಇಂದಿನ ರಾಜಕೀಯ ಪಕ್ಷ ಅದೇ ರೀತಿ ಆಡಳಿತ ನಡೆಸುತ್ತದೆ. ಒಂದು ಚೆಂಡನ್ನು ಹೇಗೆ ಕಾಲಿನಿಂದ ಒದ್ದುತ್ತಾರೋ ಅದೇ ರೀತಿ ಒದ್ದುವ ಆಡಳಿತವಾಗಿ ಇಂದಿನ ನಾಯಕರು ಪ್ರಜೆಗಳನ್ನು ಆಡಿಸುತ್ತಿದ್ದಾರೆ. ಕರ್ನಾಟಕ ರಾಜ್ಯವನ್ನೇ ನೋಡಿದರೆ ಗೊತ್ತಾಗುತ್ತೆ ಯಾವ ರೀತಿ ಇದೆ ಎಂದು. ಯಾವುದೇ ರಾಜಕೀಯ ಪಕ್ಷಕ್ಕೆ ಮುಸ್ಲಿಂ ಸಮುದಾಯದ ವ್ಯಕ್ತಿಗಳು ಬಲಿಪಶು ಆಗದಿರೊಣ. ರಾಜಕೀಯ ಪಕ್ಷಕ್ಕಾಗಿ ಮುಸ್ಲಿಂ ಸಮುದಾಯದ ಅನೈಕ್ಯವಾಗದಿರೋನ. ಮುಸ್ಲಿಂ ಸಮುದಾಯದಕ್ಕೆ ಬೇಕಾಗಿ ಅತ್ಯಾವಶ್ಯಕ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ರಾಜಕೀಯ ಪಕ್ಷಗಳು ಹಿಂದೇಟು ಹಾಕಿತ್ತಿದೆ. ಎಲ್ಲವೂ ತನ್ನ ಸ್ವಾರ್ಥಕ್ಕಾಗಿ ಮಾಡುವುದು ಖೇದಕರವಾಗಿದೆ. ಅಲ್ಲಾಹನ ದೀನ್ ಇಲ್ಲಿ ನೆಲೆಸಬೇಕು ಎಂದು ಹೇಳುತ್ತಾರೆ ಆದರೆ ಕಾರ್ಯರೂಪಕ್ಕೆ ಯಾವುದು ಬರುವುದಿಲ್ಲ. ಈ ರೀತಿಯಾಗಿ ಮುಸ್ಲಿಂಮರು ಜೀವಿಸುವುದಾದರೆ ಅಲ್ಲಾಹನು ಅಕ್ರಮಿಯಾದ ಆಡಳಿತಗಾರರನ್ನು ನೀಡಿ ಪರೀಕ್ಷಿಸುತ್ತಾನೆ. ಆ ಸಮಯದಲ್ಲಿ ಯಾವ ರಾಜಕೀಯ ಪಕ್ಷವನ್ನು , ಯಾವ ನಾಯಕರನ್ನು ಕರೆದರು ನೀವು ವಿಜಯಿಸುವುದಿಲ್ಲ.
ಇಸ್ಲಾಮಿನ ಸಂವಿಧಾನದ ನಾಲ್ಕನೇ ಖಲೀಫ ಅಲೀ (ರ.ಅ) ಒಂದು ಘೋರವಾದ ಯುದ್ದದಲ್ಲಿ ಭಾಗಿಯಾಗುತ್ತಾರೆ. ಒಬ್ಬ ಶತ್ರುವನ್ನು ನೆಲಕ್ಕುರುಲಿಸಿ ತನ್ನನ್ನು ಕೊಲ್ಲಲು ಹೊರಟಾಗ ಅಲೀ (ರ) ಮುಖಕ್ಕೆ ವಾಕರಿಸಿ ಉಗುಲಿದ ಕಾರಣ ಆ ಶತ್ರುವನ್ನು ಅಲೀ (ರ.ಅ) ಕೊಲ್ಲದೇ ಬಿಟ್ಟರು ಕಾರಣವೇನೆಂದು ಕೇಳಿದಾಗ ಅಲೀ (ರ.ಅ) ಹೇಳಿದರು :- ಯುದ್ದ ಸಂರ್ಭದಲ್ಲಿ ಅವನು ನನ್ನ ಮುಖಕ್ಕೆ ಉಗುಳಿದ ನಾನೇನಾದರು ಆ ಶತ್ರುವನ್ನು ಕೊಂದರೆ ಮುಖಕ್ಕೆ ಉಗುಳಿದ ಎಂಬ ಕಾರಣವಾಗಬಹುದು ಹೊರು ಅಲ್ಲಾಹನ ದೀನಿಗಾಗಿ ಅಲ್ಲ.” ಇಸ್ಲಾಂ ದೀನ್ ನೆಲೆನಿಲ್ಲಬೇಕು ಎಂದು ಬಾಯಿ ಮಾತು ಸಾಲದು ಕಾರ್ಯರೂಪಕ್ಕೆ ಬರಬೇಕು. ಅಲ್ಲಾಹನು ತೌಫೀಕ್ ನೀಡಲಿ. ಲೊಕ ಮುಸಲ್ಮಾನರಿಗೆ ಅತ್ಯುನ್ನತ ಆಡಳಿತಧಿಕಾರಿಗಳನ್ನು ನೀಡಲಿ ಎಂದು ಪ್ರಾರ್ಥಿಸುತ್ತಾ…..!
✒ ಮುಹಮ್ಮದ್ ಶಫೀಕ್ ಅಲ್-ಫಾಳಿಲ್ ಕೌಸರಿ ಖತೀಬರು, ಮಾಲೋಂ ಬದರ್ ಟೌನ್ ಜುಮಾ ಮಸ್ಜಿದ್ ವೆಳ್ಳರಿಕುಂಡ್, ಕಾಞಂಗಾಡ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.