ಮೂಡುಬಿದಿರೆ (www.vknews.in) : ಜೈನಕಾಶಿ ಮೂಡುಬಿದಿರೆ ಬಡಗ ಬಸದಿಯ ಭಗವಾನ್ ಶ್ರೀ ಚಂದ್ರಪ್ರಭ ಸ್ವಾಮಿಯ ರಥೋತ್ಸವ ಸೋಮವಾರ (14/2/2022) ಪರಮಪೂಜ್ಯ ಜಗದ್ಗುರು’ಭಾರತ ಭೂಷಣ’ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮೀಜಿ ಶ್ರೀ ಜೈನ ಮಠ ಮೂಡುಬಿದಿರೆ ರವರ ಪಾವನ ಸಾನಿಧ್ಯ ಹಾಗೂ ನೇತೃತ್ವದಲ್ಲಿ ಜರಗಿತು.
ಈ ಸಂದರ್ಭದಲ್ಲಿ ಧವಳತ್ರಯ ಜೈನ ಕಾಶಿ ಟ್ರಸ್ಟ್ , ಶ್ರೀ ಜೈನ ಮಠ ಮೂಡುಬಿದಿರೆ ಸಹಾ ಯೋಗದಲ್ಲಿ ಮಕ್ಕಿಮನೆ ಕಲಾವೃಂದ ಮಂಗಳೂರು ವತಿಯಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅನುಷಾ ಜೈನ್ ಬೆಳುವಾಯಿ, ಮಾನ್ವಿ ಜೈನ್ ಮೂಡುಬಿದಿರೆ, ದಿಯಾ ಆಳ್ವ ಮೂಡುಬಿದಿರೆ, ಪ್ರಥಮ್ ಮಾರೂರು,ಶಾರಿಕಾ ಮೂಡುಬಿದಿರೆ, ಕವನ ಜೈನ್ ಮಾರ್ನಾಡು, ಕಾವ್ಯ ಜೈನ್ ಮಾರ್ನಾಡು, ಅನಿಂದಿತ ಜೈನ್ ಬೆಳುವಾಯಿ ಭಾಗವಹಿಸಿದ್ದರು.
ವಕೀಲರಾದ ಶ್ವೇತಾ ಜೈನ್ ಮೂಡುಬಿದಿರೆ ನಿರೂಪಿಸಿದರು. ಸುದೇಶ್ ಜೈನ್ ಮಕ್ಕಿಮನೆ ಸಂಯೋಜಿಸಿದ್ದರು. ಈ ಸಂದರ್ಭದಲ್ಲಿ ಅನೇಕ ಗಣ್ಯರು ಹಾಗೂ ಊರ – ಪರ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.