ದುಬೈ (www.vknews.in) : ಬೆಳ್ತಂಗಡಿ ಪ್ರದೇಶದಲ್ಲಿ ಮತ ಭೌದ್ಧಿಕ ಸಮನ್ವಯ ವಿದ್ಯಾಭ್ಯಾಸವನ್ನು ನೀಡುತ್ತಾ ಬಂದಿರುವ ದಾರುಸ್ಸಲಾಂ ಎಜುಕೇಷನ್ ಸೆಂಟರ್ ಬೆಳ್ತಂಗಡಿ ಸಂಸ್ಥೆಯು ತನ್ನ ಪ್ರಚಾರರ್ಥ ಯು ಎ ಇ ಯಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿರುವ ಅಹ್ಲನ್ ರಮಳಾನ್. ಕಾರ್ಯಕ್ರಮವು ನಾಳೆ , 27 ಮಾರ್ಚ್ 2022 ರ ಆದಿತ್ಯವಾರ ಮಗ್ರಿಬ್ ನಮಾಝಿನ ಬಳಿಕ 7.00 ಗಂಟೆಗೆ ಸರಿಯಾಗಿ, ಪರ್ಲ್ ಕ್ರೀಕ್ ಹೋಟೆಲ್* (ದೇರಾ ಬನಿಯಾಸ್ ರೋಡ್ ಹತ್ತಿರ) ಸಭಾಂಗಣದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ದಾರುಸ್ಸಲಾಂ ಶಿಲ್ಪಿಯೂ, ಸಂಸ್ಥೆಯ ಅಧ್ಯಕ್ಷರೂ ಆದ ಸಯ್ಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಬೆಳ್ತಂಗಡಿ ರವರು ಭಾಗವಹಿಸಲಿದ್ದಾರೆ. ಅಲ್ಲದೆ ಅನಿವಾಸಿ ವಿವಿಧ ಕ್ಷೇತ್ರಗಳ ಗಣ್ಯರು ಉಲಮಾ ಉಮರಾ ನೇತಾರರು ಭಾಗವಹಿಸುವ, ಪ್ರಸ್ತುತ ಕಾರ್ಯಕ್ರಮದಲ್ಲಿ ಪ್ರಭಾಷಣ ವೇದಿಕೆಗಳಲ್ಲಿ ಮಿಂಚುತ್ತಿರುವ ಯುವ ಪ್ರ ತಿಭೆ ಉಸ್ತಾದ್ ಫಾರೂಕ್ ದಾರಿಮಿ ಕೊಲ್ಲಂಬಾಡಿ ಕಾಸರಗೋಡ್ ರವರು ಮುಖ್ಯ ಪ್ರಭಾಷಣ ಗೈಯಲಿದ್ದಾರೆ.
ಸಯ್ಯದ್ ಅಸ್ಕರ್ ಅಲಿ ತಂಙಳ್ ಕೋಲ್ಪೆ ರವರು ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮವನ್ನು ಸಯ್ಯದ್ ಶುಹೈಬ್ ತಂಙಳ್ ರವರು ಉದ್ಘಾಟಿಸಲಿದ್ದಾರೆ . ಅಲ್ಲದೆ ಸಯ್ಯದ್ ಅಬ್ದುಲ್ ಹಕೀಮ್ ತಂಙಳ್ ಆಲ್ ಬುಖಾರಿ ರವರು ಪ್ರಾರ್ಥನೆಗೆ ನೇತೃತ್ವವನ್ನು ನೀಡಲಿದ್ದು , ಅನಿವಾಸಿ ದೀನೀ ಸ್ನೇಹಿಗಳಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀ ಗೊಳಿಸುವಂತೆ ದಾರುಸ್ಸಲಾಂ ಅಹ್ಲನ್ ರಮಳಾನ್ ಸ್ವಾಗತ ಸಮಿತಿಯು ಕರೆ ನೀಡಿದ್ದು , ಸರ್ವರು ಸಹಕರಿಸುವಂತೆ ಸ್ವಾಗತ ಸಮಿತಿ ಅಧ್ಯಕ್ಷರಾದ ಇಬ್ರಾಹಿಂ ಆತೂರ್ ಕಾರ್ಯದರ್ಶಿ ಇಸಾಕ್ ಕುಡ್ತಮೊಗೇರ್ ಕೋಶಾಧಿಕಾರಿ ಜಾಬೀರ್ ಬಪ್ಪಳಿಗೆ ರವರು ರವರು ವಿನಂತಿಸಿಕೊಂಡಿರುತ್ತಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.