ಅಬುಧಾಬಿ (www.vknews.in) : ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘಟನೆಯ 7ನೇ ವಾರ್ಷಿಕ ಮಹಾ ಸಭೆಯು ದುಬೈಯ ಶೇಕ್ ಜಾಯೆದ್ ರಸ್ತೆಯಯಲ್ಲಿರುವ ಹೋಟೆಲ್ ಸಭಾಂಗಣದಲ್ಲಿ 20.03.2022 ಸಂಜೆ 6.30ಕ್ಕೆ ನಡೆಯಿತು, ಈ ಕಾರ್ಯಕ್ರಮಕ್ಕೆ ಸಂಘದ ಆಡಳಿತ ಮಂಡಳಿಯ ಮತ್ತು ಸಂಘಕ್ಕೆ ಸೇರಲು ಇಚ್ಛೆಪಡುವ ಅನಿವಾಸಿ ಕೊಡಗಿನವರು ಆಗಮಿಸದ್ದರು.
ಸಂಯುಕ್ತ ಅರಬ್ ಸಂಸ್ಥಾನದ ರಾಷ್ಟ್ರ ಗೀತೆ, ಭಾರತದ ರಾಷ್ಟ್ರ ಗೀತೆ ಮತ್ತು ಕರ್ನಾಟಕ ನಾಡ ಗೀತೆ ಮೂಲಕ ಕಾರ್ಯಕ್ರಮವನ್ನು ಪ್ರಾಂಭಿಸಲಾಯಿತು, ಸಭೆಯ ಅಧ್ಯಕ್ಷತೆಯನ್ನು ಸಂಘದ ಛೇರ್ಮನ್ ಆದ ಹುಸೈನ್ ಉಸ್ತಾದ್ ಸೋಮವಾರಪೇಟೆ ಅವರು ವಹಿಸಿ ಯುಎಇಯಲ್ಲಿ ಕೊಡಗಿನ ಹಲವು ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳು ಇದ್ದು ಎಲ್ಲಾ ಸಂಘಟನೆಗಳ ಜೊತೆ ಕೈಜೋಡಿಸಿ ತಮ್ಮ ತಮ್ಮ ಕೈಲಾದ ಸಹಾಯ ಮತ್ತು ಊರಿನ ಎಲ್ಲಾ ಧಾರ್ಮಿಕ ಸಂಸ್ಥೆಗಳಿಗೆ ತಮ್ಮ ತಮ್ಮ ಕೈಲಾದ ಆರ್ಥಿಕ ಸಹಾಯ ಮಾಡಲು ಕರೆ ನೀಡಿದರು, ಸಂಘದ ವೈಸ್ ಛೇರ್ಮನ್ ಅಬ್ದುಲ್ಲಾ ಕೊಂಡಂಗೇರಿ ಅವರು ಆಗಮಿಸಿದ ಸರ್ವರಿಗೂ ಸ್ವಾಗತ ಕೋರಿದರು ಮತ್ತು ಸಂಘದ ಉದ್ದೇಶ ಮತ್ತು ಗುರಿಗಳನ್ನು ವಿವರಿಸಿದರು, ಸಂಘದ ಮುಖ್ಯ ಕಾರ್ಯದರ್ಶಿ ರಫೀಕಲಿ ಕುಂಡಂಡ ಕುಂಜಿಲ ಅವರು ಕೊಡಗು ಹಳೆ ವಿದ್ಯಾರ್ಥಿಗಳ ಸಂಘ ಕಳೆದ ಏಳು ವರ್ಷಗಳಲ್ಲಿ ನಡೆಸಿದ ಚಟುವಟಿಕೆ ಬಗ್ಗೆ ವಿವರಿಸಿದರು,
ಕಾರ್ಯಕ್ರಮದ ಕೊನೆಯಲ್ಲಿ ಸಂಘದ ಸಮಿತಿ ಸದಸ್ಯರಾದ ಮುಜೀಬ್ ಮಾಸ್ಟರ್ ಕೊಂಡಂಗೇರಿ ಅವರು ಆಗಮಿಸಿದ ಎಲ್ಲರಿಗೂ ವಂದನಾರ್ಪಣೆ ಸಲ್ಲಿಸಿದರು, ಸಂಘದ ಕಾರ್ಯದರ್ಶಿ ಶಾಫಿ ಅಜಾದ್ ನಗರ, ಸಮಿತಿ ಸದಸ್ಯರಾದ ಹಮೀದ್ ವಿರಾಜಪೇಟೆ ಮತ್ತು ಇರ್ಫಾನ್ ಮೂರ್ನಾಡು ಅವರು ಸಭೆ ಯಶಸ್ವಿಯಾಗಿ ನಡೆಯಲು ಕಾರ್ಯ ನಿರ್ವಹಿಸಿದರು.
ಅಶ್ರಫ್ ಮಡಿಕೇರಿ, ಸೌರಭ್ ಕಾರ್ಯಪ್ಪ ಹುದಿಕೇರಿ, ಪ್ರವೀಣ, ಫೈಝಲ್,ಸತ್ತಾರ್ ಶನಿವಾರಸಂತೆ, ಪೂವಯ್ಯ ವಿರಾಜಪೇಟೆ, ಜುನೈದ್, ಶಾಝಿರಲಿ, ಗೌತಮ್ ದೇವಯ್ಯ, ಶಾಹಿದ್, ನಯಾಜ್, ಮನ್ಸೂರ್ ಕುಶಾಲನಗರ, ಸಲೀಂ ಮುಂತಾದವರು ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಕೊಡಗು ಹಳೆ ವಿಧ್ಯಾರ್ಥಿಗಳ ಸಂಘದ ಕಿರು ಪರಿಚಯ : ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಏಳು ವರ್ಷಗಳ ಹಿಂದೆ ಸಮಾನ ಮನಸ್ಕ ಯುವ ಸಮೂಹದಿಂದ ಕೊಡಗು ಹಳೆ ವಿದ್ಯಾಥಿಗಳ ಸಂಘವು ದುಬೈ ಕೇಂದ್ರೀಕರಿಸಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಹಳೆ ವಿದ್ಯಾರ್ಥಿಗಳನ್ನು ಒಳಗೊಂಡು ರೂಪುಗೊಂಡಿತು, ಕೊಡಗು ಹಳೆ ವಿಧ್ಯಾರ್ಥಿಗಳ ಸಂಘವು ಕಳೆದ ಹಲವು ವರ್ಷಗಳಿಂದ ಹಲವು ಮಾನವೀಯ ಮತ್ತು ಶೆಕ್ಷಣಿಕ ಸಾಮಾಜಿಕಪರ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಿದ್ಧರಾಗಲು ಕಾರ್ಯಗಾರ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಗಾರವನ್ನು ಹಮ್ಮಿಕೊಂಡು ಓದುವ ವಿದ್ಯಾರ್ಥಿಗಳಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ,
ಹಾಗೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಕೊಡಗಿನ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಿ ವಿದ್ಯಾಭ್ಯಾಸ ಮುಂದುವರೆಸಲು ಸಹಾಯ ಮಾಡಿದ್ದಾರೆ, ಹಾಗೆ ಕೊಡಗಿನ ಬಡ ಹೆಣ್ಣು ಮಕ್ಕಳ ಮದುವೆಗೆ ಮತ್ತು ರೋಗಿಗಳಿಗೆ ಆರ್ಥಿಕ ಸಹಾಯ ಮಾಡಿದ್ದಾರೆ, ಕೊಡಗಿನಲ್ಲಿ ಪ್ರಕೃತಿ ವಿಕೋಪ ಮತ್ತು ಕೋವಿಡ್ ಮುಂತಾದ ಸಂಕಷ್ಟ ಸಮಯದಲ್ಲಿ ಆರ್ಥಿಕ ಸಹಾಯ ಮಾಡಿದ್ದು ಮತ್ತು ಫುಡ್ ಕಿಟ್ ವಿತರಿಸಿದ್ದಾರೆ.
ಕೊಡಗಿನಿಂದ ಸಂಯುಕ್ತ ಅರಬ್ ಸಂಸ್ಥಾನಕ್ಕೆ ಕೆಲಸ ಹುಡುಕಿ ಬಂದ ಜನರಿಗೆ ಉದ್ಯೋಗ ಮಾಹಿತಿ ನೀಡುವುದರೊಂದಿಗೆ ಎಲ್ಲಾ ವರ್ಷವು ಉದ್ಯೋಗ ಮಾರ್ಗದರ್ಶ ಕಾರ್ಯಗಾರ ಮತ್ತು ಯುಎಇ ವ್ಯಾಪಾರಸ್ಥರನ್ನು, ಕಂಪನಿಗಳ ಎಚ್ ಆರ್ ರನ್ನು ಮುಂತಾದ ಕೆಲಸ ಲಭ್ಯವಿರುವವರನ್ನು ಕರೆಸಿ ಉದ್ಯೋಗ ಮೇಳವನ್ನು ನಡೆಸಿ ಹಲವು ಕೊಡಗಿನವರಿಗೆ ಉದ್ಯೋಗ ಪಡೆದುಕೊಡುವಲ್ಲಿ ತಮ್ಮದೇ ಆದ ಕಾಣಿಕೆಯನ್ನು ಈ ಸಂಘಟನೆಯು ಮಾಡುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.