ಮಹದೇವಪುರ (ವಿ.ಕೆ.ನ್ಯೂಸ್): ಮಹದೇವಪುರ ವಲಯದಲ್ಲಿನ ಗರುಡಚಾರಪಾಳ್ಯ ವಾರ್ಡ್ ನಂ- 82 ರ ಆರ್.ಹೆಚ್.ಬಿ ಕಾಲೋನಿಯಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ, ಬಿ.ಬಿ.ಎಂ.ಪಿ ಸಹಯೋಗದಲ್ಲಿ ಆರ್.ಹೆಚ್.ಬಿ ಕಾಲೋನಿಯ ನಿವಾಸಿಗಳ ಜೊತೆಗೆ “ಘನತ್ಯಾಜ್ಯ ನಿರ್ವಹಣೆಯ ಜಾಗೃತಿ, ಕಸದ ವಿಂಗಡಣೆ, ಹಾಗೂ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಆರ್.ಹೆಚ್.ಬಿ ಕಾಲೋನಿಯ ಎಲ್ಲಾ ಬೀದಿ-ಬೀದಿಗಳಲ್ಲಿ ಪರಿಸರ ಸಂರಕ್ಷಣೆ, ಘನತ್ಯಾಜ್ಯ ವಿಂಗಡಣೆ, ಪ್ಲಾಸ್ಟಿಕ್ ನಿಷೇಧದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಢಿಸಲಾಯಿತು. ಇದೇ ಸಂದರ್ಭದಲ್ಲಿ ಆರ್.ಹೆಚ್.ಬಿ ಕಾಲೋನಿಯಲ್ಲಿ ಸಮರ್ಥನಂ ಪರಿಸರ ತಂಡವು ಪರಿಸರ ಸಂರಕ್ಷಣೆ ಬಗ್ಗೆ ಹಲವು ಗೀತೆಗಳನ್ನು ಹಾಡಿ ಸಾರ್ವಜನಿಕರಲ್ಲಿ ಅರಿವು ಮೂಢಿಸಲಾಯಿತು.
ಈ ಸಂದರ್ಭದಲ್ಲಿ ಆರ್.ಹೆಚ್.ಬಿ ಕಾಲೋನಿಯ ನಿವಾಸಿಯೋಬ್ಬರು ಮಾತನಾಡುತ್ತಾ ” ಘನತ್ಯಾಜ್ಯ ವಿಂಗಡಣೆಯ ಅರಿವು ಬಹುಮುಖ್ಯವಾಗಿದೆ, ಕಸವನ್ನು ಸರಿಯಾಗಿ ವಿಂಗಡಣೆ ಮಾಡಿ ಬಿ.ಬಿ.ಎಂ.ಪಿ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ನೀಡಬೇಕು. ಅದೇ ರೀತಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರುತ್ತದೆ. ಪ್ಲಾಸ್ಟಿಕ್ ಉಪಯೋಗ ಮಾಡುವುದರಿಂದ ಹಲವು ಕಾಯಿಲೆಗಳಿಗೆ ತುತ್ತಾಗಿ ಮುಂದಿನ ಪೀಳಿಗೆಗೆ ಮಾರಕವಾಗುತ್ತದೆ” ಎಂದರು.
ಕಾರ್ಯಕ್ರಮದಲ್ಲಿ ಸಮರ್ಥನಂ ಅಂಗವಿಕಲರ ಸಂಸ್ಥೆ ಗರುಡಚಾರಪಾಳ್ಯ, ಬಿ.ಬಿ.ಎಂ.ಪಿ, ಆರ್.ಹೆಚ್.ಬಿ ಕಾಲೋನಿ ನಿವಾಸಿಗಳು, ಸಾರ್ವಜನಿಕರಲ್ಲಿ ಅರಿವು ಮೂಢಿಸುವಲ್ಲಿ ಸಫಲವಾಯಿತು.
ಈ ಸಂದರ್ಭದಲ್ಲಿ ಮಹದೇವಪುರ ವಲಯ ಗರುಡಚಾರಪಾಳ್ಯ ವಾರ್ಡ್-82, ಸಹಾಯಕ ಕಾರ್ಯಪಾಲಕ ಅಭಿಯಂತರರು, ಘನತ್ಯಾಜ್ಯ ನಿರ್ವಹಣೆಯ ಮುಖ್ಯಸ್ಥರಾದ ಶ್ರೀಮತಿ ಮಮತ.ಎಂ.ಎಸ್, ಕಿರಿಯ ಆರೋಗ್ಯ ಪರಿವೀಕ್ಷಕರಾದ ಶೇಷಗಿರಿ, ಬಿ.ಬಿ.ಎಂ.ಪಿ ಸೂಪರ್ ವೈಸರಗಳು, ಫೀಲ್ಡ್ ಮಾರ್ಷಲ್ ಗಳು ಹಾಗೂ ಸಮರ್ಥನಂ ಅಂಗವಿಕಲರ ಸಂಸ್ಥೆಯ ಪರಿಸರ ತಂಡದವರು ಭಾಗಿಯಾಗಿದ್ದರು..
ವರದಿ: ಲಕ್ಕೂರು ಎಂ.ನಾಗರಾಜ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.