ಪುತ್ತೂರು (www.vknews.in) : ಮೇ 22. 2021-22ರ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪುತ್ತೂರು ತೆಂಕಿಲದಲ್ಲಿರುವ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಅಭಯ್ ಶರ್ಮಾ. ಕೆ 625 ಅಂಕಗಳನ್ನು ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಇವರು ಕೆದಿಲ ಗ್ರಾಮದ ಪೇರಮೊಗರು ಬಳಿಯ ನಿವಾಸಿ ಕೈಲಾರು ಗಿರೀಶಂಕರ್ ಹಾಗೂ ವಿದ್ಯಾ. ಜಿ. ಭಟ್ ಇವರ ಪುತ್ರ.
ಅಭಯ್ ಶರ್ಮರವರ ಈ ವಿಶಿಷ್ಟ ಸಾಧನೆಯನ್ನು ಗುರುತಿಸಿ ಮುಸ್ಲಿಂ ಚಾರಿಟೇಬಲ್ ಟ್ರಸ್ಟ್ ವಿಧ್ಯಾ ಸಂಸ್ಥೆ, ಮೂಲ್ಕಿ ಇದರ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಮಾಜಿ ಏರ್ ಫೋರ್ಸ್ ಫ್ಲೈಯಿಂಗ್ ಆಫೀಸರ್ ಎಂ.ಬಿ.ಖಾನ್ ಮೂಲ್ಕಿರವರು ಅವರ ಮನೆಗೆ ಭೇಟಿಕೊಟ್ಟು ಉಡುಗೊರೆಯನ್ನು ನೀಡಿ ಸನ್ಮಾನಿಸಿ ಪ್ರೋತ್ಸಾಹಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.