ಶ್ರೀನಿವಾಸಪುರ (ವಿಶ್ವಕನ್ನಡಿಗ ನ್ಯೂಸ್) : ಕಡ್ಡಾಯ ಶಿಕ್ಷಣ ಹಕ್ಕು ( ಆರ್ಟಿಇ ) ಅಡಿಯಲ್ಲಿ ಅರ್ಜಿಗಳನ್ನು ಅಂಗಿಕರಿಸಬೇಕಾದ ಶಿಕ್ಷಣ ಇಲಾಖೆ ಅಧಿಕಾರಿಗಳು ಅರ್ಜಿಗಳನು ಅಂಗಿಕರಿಸದೆ ಎ೦ದು ಕರ್ನಾಟಕ ದಲಿತ ಯುವ ಸೇನೆ ಅಕ್ರಮ ಎಸಗಿದ್ದಾರೆ ಆರೋಪಿಸಿ , ಕರ್ನಾಟಕ ಆಡಳಿತ ಸುಧಾರಣೆ ಆಯೋಗಕ್ಕೆ ದೂರು ನೀಡಿದೆ. ಇಂದು ತಾಲೂಕಿಗೆ ಆಗಮಿಸಿದ್ದ ಸುಧಾರಣೆ ಕರ್ನಾಟಕ ಆಡಳಿತ ಆಯೋಗದ ತಂಡ ವಿವಿಧ ಕಚೇರಿಗಳಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಯುವ ಸೇನೆಯ ಜಿ.ಆರ್.ಶ್ರೀನಿವಾಸ್ ದೂರು ಸಲ್ಲಿಸಿ 2022-23 ಸಾಲಿನ ಖಾಸಗಿ ಶಾಲೆಗಳಲ್ಲಿ ಕಡ್ಡಾಯ ಶಿಕ್ಷಣ ಹಕ್ಕು ಅಡಿಯಲ್ಲಿ ತಾಲೂಕಿನಾದ್ಯಂತ 224 ಅರ್ಜಿಗಳು ಬಂದಿರುತ್ತದೆ ಆದರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಿಂದ ಕೇವಲ 42 ಅರ್ಜಿಗಳನ್ನು ಮಾತ್ರ ಅಂಗಿಕರಿಸಿ ಉಳಿದ ಅರ್ಜಿಗಳನ್ನು ಉದ್ದೇಶ ಪೂರಕವಾಗಿ ತಿರಸ್ಕರಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ತ೦ದರೆ ತಾಂತ್ರಿಕ ಕಾರಣಗಳಿಗಾಗಿ ತಿರಸ್ಕೃತವಾಗಿದೆ ಇವು ಪರಶೀಲನೆಯಲ್ಲಿದೆ ಮತ್ತೆ ಅರ್ಜಿ ಸಲ್ಲಿಸಲು ಅವಕಾಶ ಇದೆ ಎಂದು ಹೇಳಿದ್ದರು . ಆದರೆ ಪುನ ಪರಿಶೀಲನೆಯಲ್ಲಿ ಅವರಿಗೆ ಬೇಕಾದ ಕೆಲವರ ಹೆಸರುಗಳನ್ನು ಸೇರಿಸಿದ್ದಾರೆ . ಈ ವಿಚಾರವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಅಕ್ರಮ ನಡೆದಿರುವುದಾಗಿ ದೂರಿದರು.
ಈ ಅಕ್ರಮಗಳಿಗೆ ಕಾರಣರಾಗಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಮತ್ತು ಅನ್ಯಾಯಕ್ಕೆ ಒಳಗಾದ ದಲಿತ ಮಕ್ಕಳಿಗೆ ನ್ಯಾಯ ಒದಗಿಸಕೊಡಬೇಕು ಎಂದು ಒತ್ತಾಯಿಸಿದರು.
ವರದಿ ಶಬ್ಬೀರ್ ಅಹ್ಮದ್ ಶ್ರೀನಿವಾಸಪುರ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.