ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿರುವ ರಬ್ಬರ್ ತೋಟಕ್ಕೆ 2.5 ವರ್ಷದ ಮಗು ಹೋಗಿದ್ದಾದರೂ ಹೇಗೆ..?
ಕೊಲ್ಲಂ (ವಿಶ್ವ ಕನ್ನಡಿಗ ನ್ಯೂಸ್) : ಕೊಲ್ಲಂನ ಅಂಚಲ್ ತಡಿಕಾಡು ಎಂಬಲ್ಲಿ ನಾಪತ್ತೆಯಾಗಿದ್ದ ಎರಡೂವರೆ ವರ್ಷದ ಮಗು ಪತ್ತೆಯಾಗಿದ್ದಾನೆ. ಅನ್ಸಾರಿ ಮತ್ತು ಫಾತಿಮಾ ದಂಪತಿಯ ಪುತ್ರ ಫರ್ಹಾನ್ ಇಂದು ಬೆಳಿಗ್ಗೆ ತನ್ನ ಮನೆಯ ಬಳಿಯ ರಬ್ಬರ್ ತೋಟದಲ್ಲಿ ಪತ್ತೆಯಾಗಿದ್ದಾನೆ. ಮಗುವಿಗೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ.
ಮಗು ನಿನ್ನೆ ಸಂಜೆ ತನ್ನ ಮನೆಯ ಹಿತ್ತಲಿನಲ್ಲಿ ಆಟವಾಡುತ್ತಿದ್ದಾಗ ಕಾಣೆಯಾಗಿದ್ದ. ಇದರ ನಂತರ, ಪೊಲೀಸರು, ಅಗ್ನಿಶಾಮಕ ದಳ ಮತ್ತು ಸ್ಥಳೀಯರು ತಡರಾತ್ರಿ ಶೋಧ ಕಾರ್ಯಾಚರಣೆಯನ್ನು ನಡೆಸಿದರು, ಇಂದು ಬೆಳಿಗ್ಗೆ ಮಗುವನ್ನು ಹತ್ತಿರದ ರಬ್ಬರ್ ತೋಟದಲ್ಲಿ ಪತ್ತೆಹಚ್ಚಹಲಾಯಿತು.
ರಬ್ಬರ್ ತೋಟವು ಮನೆಯಿಂದ ಅರ್ಧ ಕಿಲೋಮೀಟರ್ ದೂರದಲ್ಲಿದೆ. ಎರಡೂವರೆ ವರ್ಷದ ಮಗು ಇಲ್ಲಿಗೆ ಹೇಗೆ ಬಂತು ಎಂಬುದು ಸ್ಪಷ್ಟವಾಗಿಲ್ಲ. ಮಗುವನ್ನು ಯಾರೋ ಅಪಹರಿಸಿ ಇಲ್ಲಿ ಬಿಟ್ಟು ಹೋಗಿದ್ದಾರೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.