ಚಿಕ್ಕಮಗಳೂರು (www.vknews.in) : ಪ್ರವಾದಿ ಮುಹಮ್ಮದ್ (ಸ.ಅ) ಅವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಬಿಜೆಪಿಯ ರಾಷ್ಟ್ರೀಯ ವಕ್ತಾರರುಗಳಾದ ನುಪುಲ್ ಶರ್ಮ, ಮತ್ತು ನವೀನ್ ಜಿಂದಾಲ್ ರನ್ನು ಬಂಧಿಸುವಂತೆ ಆಗ್ರಹಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಮಗಳೂರು ಜಿಲ್ಲಾ ಸಮಿತಿ ವತಿಯಿಂದ ನಗರದ ಆಝಾದ್ ಪಾರ್ಕ್ ನ ಬಳಿ ಬೃಹತ್ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಎಸ್ಡಿಪಿಐ ಜಿಲ್ಲಾಧ್ಯಕ್ಷರಾದ ಗೌಸ್ ಮುನೀರ್ ರವರು ಮಾತನಾಡಿ ದೇಶದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಪಕ್ಷವು ತನ್ನ ವೈಫಲ್ಯಗಳನ್ನು ಮರೆಮಾಚಿ, ಜನರ ಗಮನ ಬೇರೆಡೆಗೆ ಸೆಳೆಯುವ ಸಲುವಾಗಿ ಸದಾ ಹಿಂದು, ಮುಸ್ಲಿಮರ ನಡುವೆ ಭಿನ್ನಾಭಿಪ್ರಾಯ ಮೂಡಿಸಿ ರಾಜಕೀಯ ಲಾಭ ಗಳಿಸುವ ಪ್ರಯತ್ನ ಇವರ ಅಜೆಂಡವಾಗಿದೆ. ಇದರ ಮುಂದುವರಿದ ಭಾಗವಾಗಿ ತನ್ನ ರಾಷ್ಟ್ರೀಯ ವಕ್ತಾರರ ಮುಖಾಂತರ ಇಂತಹ ಹೇಳಿಕೆ ನೀಡಿಸಿರುತ್ತಾರೆ, ಪ್ರವಾದಿ ಯವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಕ್ತಾರರಿಗೆ ಕೇವಲ ಪಕ್ಷದಿಂದ ಉಚ್ಛಾಟಿಸಿದರೆ ಸಾಲದು, ಅವರನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಹೇಳಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಎಸ್ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮೀಲ್ ಖಾನ್, ಪಿಎಫ್ಐ ಜಿಲ್ಲಾಧ್ಯಕ್ಷರಾದ ಚಾಂದ್ ಪಾಷ, ಆಲ್ ಇಂಡಿಯಾ ಇಮಾಮ್ ಕೌನ್ಸಿಲ್ ಜಿಲ್ಲಾಧ್ಯಕ್ಷರಾದ ಮೌಲಾನ ಯೂನುಸ್, ಖಾದ್ರಿಯ ಮಸೀದಿಯ ಇಮಾಮ್ ಹಾಫಿಜ್ ಖಾರಿ ಯೂಸುಫ್ ರಝ, ಧರ್ಮ ಗುರುಗಳಾದ ಮೌಲಾನ ಇಬ್ರಾಹಿಂ ಸಯೀದಿ, ಔರಂಗಜೇಬ್ ಆಲಂಗಿರಿ, ಎಐಎಮ್ಡಿಎಫ್ ನ ನಾಸೀರ್ ರವರು ಸೇರಿದ್ದ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ಡಿಪಿಐ ಜಿಲ್ಲಾ ಸಮಿತಿ ಸದಸ್ಯರಾದ ಶ್ರೀನಿವಾಸ್, ಪಿಎಫ್ಐ ಜಿಲ್ಲಾ ಕಾರ್ಯದರ್ಶಿ ಝಮೀರ್ ಬಾಷ, ಕೂದುವಳ್ಳಿ ಮಂಜುನಾಥ್, ಹಾಫಿಜ್ ಮೊಹ್ಸೀನ್, ಖ್ವಾಜಾ ಮೊಹಿದ್ದೀನ್ ಸಾಬ್, ಪ್ರೋ. ನಸರುಲ್ಲಾ ಶರೀಫ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.