ತಪ್ಪು ಮಾಡಿದವನಿಗೆ ಶಿಕ್ಷೆಯಾಗಲಿ, ತಾರತಮ್ಯ ಬೇಡ..
(ವಿಶ್ವ ಕನ್ನಡಿಗ ನ್ಯೂಸ್) : ಸಮುದಾಯದ ದುರಂತ ಹಾಗೂ ಏನಾದರೂ ಹೇಳಿದರೆ ಆಲೀಂಗಳನ್ನು ನಿಂದನೆ ಮಾಡುವವನು ಅಂತ ಹಣೆಪಟ್ಟಿ ಕಟ್ಟುವರು ಆದರೂ ನನ್ನ ಮನದಲ್ಲಿ ಉಳಿದಿರುವ ಒಂದು ಪ್ರಶ್ನೇ..? ಯಾವುದಾದರೂ ಸಾಧಾರಣ ಮುಸ್ಲಿಂ ವ್ಯಕ್ತಿ ಒಂದು ತಪ್ಪನ್ನು ಮಾಡಿದಾಗ ಕೆಲವರಿಂದ ಹಲವು ಬರಹಗಳು ಹಾಗೂ ಫತ್ವಾಗಳು ಹಾಗೂ ಜಮಾಹತಿನಿಂದ ಹೊರಗಿಡುವ ಕ್ರಮಕ್ಕೆ ಮುಂದಾಗುತ್ತಾರೆ ಆದರೆ ಒಂದು ಹಿರಿಯ ವ್ಯಕ್ತಿ ಅಥವಾ ರಾಜಕಾರಣಿ ಮೂರ್ತೀ ಪೂಜೆ ಹಾಗೂ ಇಸ್ಲಾಮಿನಲ್ಲಿ ಕಡ್ಡಾಯಗೊಳಿಸಿದ ಹಿಜಾಬ್ ವಿರುದ್ಧ ಹೇಳಿಕೆಗಳು ನೀಡಿದವರ ವಿರುದ್ಧ ಯಾವುದೇ ಫತ್ವಾಗಳು ಇಲ್ಲಾ ಬರಹಗಳು ಇಲ್ಲ ಹಾಗೂ ದೊಡ್ಡ ಖೇದಕರ ವಿಷಯವೇನೆಂದರೆ ಅವರನ್ನು ಸಮ್ಮಿಲನದಂತಹ ಕಾರ್ಯಕ್ರಮದಲ್ಲಿ ಹೊಗಳುವುದು ಹಾಗೂ ಸನ್ಮಾನ ಮಾಡುವುದು ಎಲ್ಲವೂ ನಡೆಯುತ್ತದೆ ಹಾಗೂ ಇದೂ ವಾಸ್ತವವಾಗಿ ನಡೆಯುತ್ತಿರುವ ವಿಷಯವಾಗಿದೆ.
ಹಾಗೂ ಧಾರ್ಮಿಕ ಪಠಣದ ಅಧ್ಯಯದ ಸಮಯದಲ್ಲಿ ತಾರತಮ್ಯ ನೀತಿಯನ್ನು ಇಸ್ಲಾಮಿನಲ್ಲಿ ಕಲಿಸಿಲ್ಲ ಎಂದು ಹೇಳುತ್ತಾರೆ, ಆದರೆ ಇವರ ಇಂತಹ ಪಠಣದ ಅಧ್ಯಯ ಯಾವುದು ಎಂಬುವುದು ಅರಿವಾಗುತ್ತಿಲ್ಲ. ಇಸ್ಲಾಮಿನಲ್ಲಿ ತಾರತಮ್ಯ ನೀತಿ ಇಲ್ಲ ಎಂಬ ವಿಷಯ ಎಲ್ಲರಿಗೂ ಅರಿವಿರುವ ವಿಷಯವಾಗಿದೆ ಹಾಗೂ ಇದಕ್ಕೆ ಹಲವಾರು ಉದಾಹರಣೆಗಳನ್ನು ಚರಿತ್ರೆಯ ಪುಟಗಳಲ್ಲಿ ಕಾಣಬಹುದು.
ಅದರಲ್ಲಿ ಒಂದು ಉದಾಹರಣೆಯನ್ನು ವಿವರಣೆಯನ್ನು ನೀಡದೆ ಚೊಕ್ಕದಾಗಿ ತಿಳಿಸುವೆ, ಅದು ಯಾರೆಂದರೆ ಪ್ರವಾದಿ ﷺ.ಕಾಲದಲ್ಲಿ ಜೀವಿಸಿದ ಸ್ವಹಾಬಿ ಯುವಕರ ಸಾಲಿನಲ್ಲಿ ಸೇರ್ಪಡೆಯಾಗುವ ಸಣ್ಣ ಪ್ರಾಯವನ್ನು ಹಾಗೂ ಗಟ್ಟಿ-ಮುಟ್ಟಾದ ಶರೀರವನ್ನು ಹೊಂದಿರುವ ಸ್ವಹಾಬಿಯಾಗಿದ್ದರು ಮಾಯಿಝ್ رضی اللہ عنہ ಅವರನ್ನು ಇಸ್ಲಾಂ ನಿಷೇಧಿಸಿದ ಕಾರ್ಯವನ್ನು ಮಾಡಿದಾಗ ಅವರಲ್ಲಿ ಯಾವುದೇ ತಾರತಮ್ಯವನ್ನು ನೀಡದೆ ಕಲ್ಲು ಎಸೆದು ಅವರನ್ನು ಕೊಲ್ಲಲಾಯಿತು. ಯಾಕೆಂದರೆ ಅವರು ಮಾಡಿರುವ ತಪ್ಪಿಗೆ ಇಸ್ವಾಮಿನಲ್ಲಿ ಕಲ್ಲು ಎಸೆದು ಕೊಲ್ಲಬೇಕೆಂದಾಗಿದೆ ಇರುವುದು ಆದ್ದರಿಂದ ಅವರಿಗೆ ಇಸ್ಲಾಮಿನ ಕಾನೂನಿನ ಅಡಿಯಲ್ಲಿ ಶಿಕ್ಷೆಯನ್ನು ನೀಡಲಾಯಿತು ಹಾಗೂ ಅದನ್ನು ಮಾಯಿಝ್رضی اللہ عنہ ಯಾವುದೇ ಅಭ್ಯಂತರವಿಲ್ಲದೆ ಶಿಕ್ಷೆಯನ್ನು ಸ್ವಿಕರಿಸಿ ಈ ಜಗತ್ತಿಗೆ ವಿದಾಯವನ್ನು ಹೇಳಿದರು, ಹಾಗೂ ಇದನ್ನು ಅರಿತವರು ಇಂದು ಈ ದೇಶದಲ್ಲಿ ಮಾಡುವ ಕಾರ್ಯವೇನು ಸಾಧಾರಣ ವ್ಯಕ್ತಿಗೆ ಒಂದು ನ್ಯಾಯ ಹಣದವನಿಗೆ ಒಂದು ನ್ಯಾಯ ಇದು ನಡೆಯುವುತ್ತಿರುವುದು ನಮ್ಮ ಮೊಹಲ್ಲಾಗಳಲ್ಲಾಗಿದೆ.
ಕಳಕಲಿಯ ವಿನಂತಿ ಎಲ್ಲಾರಿಗೂ ಸಮಾನವಾದ ನಿಯಮವನ್ನು ಕಲ್ಪಿಸಿರಿ, ತಪ್ಪು ಮಾಡಿದವನಿಗೆ ಶಿಕ್ಷೆಯಾಗಲಿ, ತಾರತಮ್ಯ ಬೇಡ ಹಾಗೂ ಅಲ್ಲಾಹನಿಗಾಗಿ ಇರುವ ದೇಹವನ್ನು ಇಹದ ಲಾಭಗೊಸ್ಕರ ಧರ್ಮದ ನಿಯಮವನ್ನು ಬದಿಗಿಡದಿರಿ, ಸತ್ಯ ಎಂಬುವುದು ಕಹಿಯಾಗುತ್ತೆ ಅಂತ ಅಸತ್ಯವನ್ನು ನುಡಿಯದಿರಿ ಹಾಗೂ ಇಂದು ಮುಸ್ಲಿಂ ಸಮುದಾಯದ ಮೇಲಾಗುವ ದೌರ್ಜನ್ಯದ ವಿರುದ್ಧ ಪ್ರತಿಯೊಂದು ಜಮಾಹಿತಿನಲ್ಲಿ ಸಂದೇಶವನ್ನು ನೀಡಿ ಒಂದಾಗಬೇಕಾದ ಸಮುದಾಯ ಸಂಘಟನೆಯ ಹೆಸರಿನಲ್ಲಿ ಇಬ್ಭಾಗವಾಗುತ್ತಿದೆ ಅದನ್ನು ಒಂದು ಒಂದು ಗೂಡಿಸುವ ಪ್ರಯತ್ನಕ್ಕೆ ಹಿರಿಯರು ಮುಂದಾಗಬೇಕು. ಭವಿಷ್ಯದ ಚಿಂತನೆಯ ಬಗ್ಗೆ ಯೋಚನೆಯನ್ನು ಕಲ್ಪಿಸುವವಲ್ಲಿ ನಿರತರಾಗಬೇಕಿದೆ..
✍️ ಅನೀಸ್ ಕುಕ್ಕಾಜೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.