ಹುಬ್ಬಳ್ಳಿ(ವಿಶ್ವಕನ್ನಡಿಗ ನ್ಯೂಸ್): ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹುಬ್ಬಳ್ಳಿ ತಾಲೂಕಿನ ಕುಸುಗಲ್ಲ ಗ್ರಾಮದ ಸರಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮುಂಜಾನೆ ಮಕ್ಕಳಿಗೆ ಯೋಗ ಕಾರ್ಯಕ್ರಮ ನೇರವೇರಿಸಲಾಯಿತು.
ಕರಾಪ್ರಾಶಾಸಿ ಸಂಘ ಜಿಲ್ಲಾ ಘಟಕ ಧಾರವಾಡ ಅಧ್ಯಕ್ಷರು, ಶಾಲೆಯ ಪ್ರಧಾನ ಗುರುಗಳಾದ ವಿ. ಎಫ್. ಚುಳಕಿ ಅವರು ಹಾಗೂ ದಹಿಕ ಶಿಕ್ಷಕರಾದ ವಾಯ್. ಐ. ಬಾಗಿ ಗುರುಗಳ ನೇತೃತ್ವದಲ್ಲಿ ಅಂತರಾಷ್ಟ್ರೀಯ ಯೋಗಪಟು ಕಿರಣ ಕುಮಾರ ಪೂಜಾರ ಅವರ ಮಾರ್ಗದರ್ಶನದಲ್ಲಿ ಯೋಗ ಕಾರ್ಯಕ್ರಮ ನೇರವೇರಿಸಲಾಯಿತು.
ನಂತರ ಅಂತರಾಷ್ಟ್ರೀಯ ಯೋಗ ಪ್ರಶಸ್ತಿ ಪುರಸ್ಕೃತ ಕಿರಣ ಕುಮಾರ ಪೂಜಾರ ಹಾಗೂ ಪತ್ರಕರ್ತರಾದ ಎಸ್. ಪಿ. ಭಾಷಾಖಾನ ಅವರನ್ನು ಶಾಲಾ ಶಿಕ್ಷಕ ವೃಂದದ ವತಿಯಿಂದ ಸನ್ಮಾನಿಸಲಾಯಿತು.
ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಕೆಂಚಪ್ಪ ಶಿವಳ್ಳಿ ಅವರು ಹಾಗೂ ಸಮುದಾಯ ಆರೋಗ್ಯ ಇಲಾಖೆ ಅಧಿಕಾರಿಗಳಾದ ಸೀಮಾ ಕಲಾಲ, ಮಂಜುಳಾ ಮುದ್ದೇಬಿಹಾಳ ಅವರು ಯೋಗ ದಿನಾಚರಣೆಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಎಸ್.ಡಿಎಮ್.ಸಿ ಸದಸ್ಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಶಾಲಾ ಶಿಕ್ಷಕ ಬಳಗ ಸೇರಿದಂತೆ ಗ್ರಾಮದ ಹಿರಿಯರು, ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.