ಒಮಾನ್(ವಿಶ್ವಕನ್ನಡಿಗ ನ್ಯೂಸ್): DKSC ಓಮನ್ ನ್ಯಾಷನಲ್ ಸಮಿತಿಯ ವಾರ್ಷಿಕ ಮಹಾ ಸಭೆಯು ದಿನಾಂಕ 23-06-2022 ನೇ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ ಜನಾಬ್ ಮೋನಬ್ಬ ಅಬ್ದುಲ್ ರಹ್ಮಾನ್ ರವರ ಘನ ಅದ್ಯಕ್ಷತೆಯಲ್ಲಿ ರುವಿ ಮಸ್ಕತ್ ಸುನ್ನಿ ಸೆಂಟರ್ ಮದ್ರಸ ಹಾಲಿನಲ್ಲಿ ನಡೆಯಿತು .
ಕಲಂದರ್ ಬಾವ ಅವರ ದುಆ ದೊಂದಿಗೆ ಪ್ರಾರಂಭ ಗೊಂಡ ಸಭೆಯಲ್ಲಿ ಅಶ್ರಫ್ ಬಾವ ಮಂಗಳೂರು ಅವರು ಸಭಿಕರನ್ನು ಅಥಿತಿಗಳನ್ನು ಸಭೆಗೆ ಬರಮಾಡಿಕೊಂಡರು . ಪ್ರಧಾನ ಕಾರ್ಯದರ್ಶಿ ಯೂಸುಫ್ ಹೈದರ್ ಕಳೆದ ಸಾಲಿನ ವರದಿ ವಾಚಿಸಿ ಆರಿಫ್ ಕೋಡಿ ಅವರು ಲೆಕ್ಕ ಪತ್ರ ಮಂಡಿಸಿದರು. ವರದಿ ಮತ್ತು ಲೆಕ್ಕ ಪತ್ರವನ್ನು ತಕ್ಬಿರ್ ಮೂಲಕ ಸಭೆಯಲ್ಲಿ ಅಂಗೀಕರಿಸಲಾಯಿತು .
ತದನಂತರ ಸಭಿಕರಿಗೆ ಮಾತನಾಡಲು ಅವಕಾಶ ಕಲ್ಪಿಸಿ ಕೊಡಲಾಯಿತು .ಅದರಂತೆ ಪರ್ವೇಜ್ ರಫೀಕ್ ,ಮುಹ್ಸಿನ್ ಮೋನಬ್ಬ ,ಶಿಹಾಬ್ ಮೊಹಿದಿನ್ ,ರಮೀಜ್ ಸುಲೈಮಾನ್ ಮಾತನಾಡಿ DKSC ಓಮನ್ ಸಮಿತಿಯ ಉನ್ನತಿಗಾಗಿ ಎಲ್ಲರೂ ಶ್ರಮಿಸಬೇಕು ಸಂಘಟನೆಯಲ್ಲಿ ಕೆಲಸ ಮಾಡುವುದರಿಂದ ನಮಗೆ ಇಂತಹಾ ವೇದಿಕೆಗಳಲ್ಲಿ ,ಮಾತನಾಡುವ ಅವಕಾಶಗಳು ಸಿಗುತ್ತಿದೆ ಇದರ ಸಂಪೂರ್ಣ ಸದುಪಯೋಗ ಪಡಿಸಿಕೊಂಡು ಸಮಾಜದಲ್ಲಿ ನಮ್ಮನ್ನು ನಾವು ಗುರುತಿಸಿ ಕೊಳ್ಳುವಂತಾಗಬೇಕು . ಎಂದು ಅಭಿಪ್ರಾಯ ಪಟ್ಟ ಅವರು ತಮ್ಮ ತಮ್ಮ ಅನುಭವಗಳನ್ನು ವಿವಿಧ ರೀತಿಯಲ್ಲಿ ಹಂಚಿಕೊಂಡು ಸಭಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಬಳಿಕ ಪ್ರವಾಸಿ ಜೀವನಕ್ಕೆ ವಿದಾಯ ಹೇಳಿ ಊರಿಗೆ ತೆರಳುವ ಜನಾಬ್ ಅಬ್ಬಾಸ್ ಹಾಜಿ ಉಚ್ಚಿಲ ಅವರಿಗೆ ಸಭೆಯಲ್ಲಿ ಶಾಲು ಹೊದಿಸಿ ಮುಮೆಂಟೋ ನೀಡಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತಾಡಿದ ಅಬ್ಬಾಸ್ ಹಾಜಿ ಯವರು. DKSC ನಡೆದು ಬಂದ ಹಾದಿಯನ್ನು ನೆನಪಿಸಿ ಕೊಂಡರು.
ಹಸನ್ ಫೈಝಿ ಉಸ್ತಾದ್ ರವರು DKSC ಎಂಬ ಸ್ಥಾಪನೆಯನ್ನು ಸ್ಥಾಪಿಸಿದರು ,ಹಲವಾರು ಘಣ್ಯ ವ್ಯಕ್ತಿಗಳು ಇದರ ಚುಕ್ಕಾಣಿ ಹಿಡಿದು ಮುನ್ನಡೆಸಿದರು ಇದೀಗ ಹಲವು ವರ್ಷದಿಂದ ಮೋನಬ್ಬ ಅಬ್ದುಲ್ ರಹ್ಮಾನ್ ರವರು ಅಧ್ಯಕ್ಷರಾಗಿ ಉತ್ತಮ ರೀತಿಯ ಕೆಲಸ ಕಾರ್ಯ ಗಳನ್ನೂ ಮಾಡುವ ಮೂಲಕ ಇದನ್ನು ಅಭಿವ್ರದ್ಧಿ ಪಥದಲ್ಲಿ ಸಾಗುವಂತೆ ಪರಿಶ್ರಮಿಸಿದ್ದಾರೆ .ಇನ್ನು ಮುಂದಕ್ಕೆ ಯುವಕರು ಮುಂದೆ ಬಂದು ಸಂಘಟನೆಯಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ತಮ್ಮ ತಮ್ಮ ಪ್ರತಿಭೆಗಳನ್ನು ಹೊರತರಬೇಕೆಂದು ಉಪದೇಶಗಳನ್ನು ನೀಡುತ್ತಾ ಸನ್ಮಾನ ಮಾಡಿದ್ದಕ್ಕಾಗಿ ಸಂಘಟಕರಿಗೆ ತುಂಬು ಹ್ರದಯದ ಕೃತಜ್ಞತೆ ಗಳನ್ನು ಅರ್ಪಿಸಿದರು .
ಮುಂದೆ ಅಧ್ಯಕ್ಷರ ಭಾಷಣ -ಅಧ್ಯಕ್ಷರಾದ ಮೋನಬ್ಬ ಅಬ್ದುಲ್ ರಹ್ಮಾನ್ ರವರು ಮಾತನಾಡಿ ಹಲವು ವರ್ಷಗಳಿಂದ DKSC ಎಂಬ ಸಂಸ್ಥೆಯ ಶ್ರೇಯೋಭಿವ್ರದ್ಧಿಯಲ್ಲಿ ಒಂದಿಷ್ಟು ಅಳಿಲು ಸೇವೆಯನ್ನು ಮಾಡಲು ಅವಕಾಶ ಮಾಡಿಕೊಟ್ಟ ಅಲ್ಲಾಹನಿಗೆ ಮೊದಲನೆಯದಾಗಿ ಸುತ್ತಿ ಅರ್ಪಿಸುತ್ತ ಯುವ ತಲೆಮಾರು ಮುಂದೆ ಬಂದು ಸಂಘಟನೆಯಲ್ಲಿ ಜವಾಬ್ದಾರಿಯುತ ಸ್ಥಾನವನ್ನು ವಹಿಸಿಕೊಂಡು ವಿದ್ಯಾ ಸಂಸ್ಥೆಯ ಬೆಳವಣಿಗೆಯಲ್ಲಿ ಬಾಗಿಯಾಗಬೇಕು , ಪ್ರಸ್ತುತ ಕಾಲ ಘಟ್ಟದಲ್ಲಿ ಮುಸ್ಲಿಂ ಸಮುದಾಯದಯವು ಎದುರಿಸುವ ಕಷ್ಟ ನಷ್ಟಗಳನ್ನು ಇಲ್ಲದಂತೆ ಮಾಡಬೇಕಾದರೆ ನಮ್ಮ ಮುಂದಿನ ತಲೆಮಾರಿಗೆ ಉತ್ತಮ ವಿದ್ಯಾಭ್ಯಾಸ ವನ್ನು ಕೊಡುವುದರ ಮೂಲಕ ,ಎಚ್ಚೆತ್ತುಕೊಳ್ಳಬೇಕಾಗಿದೆ . ಅದರಲ್ಲಿ ದಕ್ಷಿಣ ಕನ್ನಡ ಸುನ್ನಿ ಸೆಂಟರ್ ನಲ್ಲಿ ಅತ್ಯುನ್ನತ ಮಟ್ಟದ ವಿದ್ಯಾರ್ಜನೆ ಸಿಗುತಿದ್ದು ,ಇದರ ಸದುಪಯೋಗ ಪಡಿಸಿ ,ಈ ಸಂಸ್ಥೆಯ ಬೆಳವಣಿಗೆಯಲ್ಲಿ ತಾವೆಲ್ಲರೂ ಕೈ ಜೋಡಿಸಿ ಸಹಕರಿಸಬೇಕೆಂದು ಸಭಿಕರಿಗೆ ಕರೆನೀಡಿದರು ಈ ಸಂಸ್ಥೆಯ ಉನ್ನತಿಗಾಗಿ ಶ್ರಮಿಸಿದ ಎಲ್ಲಾ. . ಸದಸ್ಯರನ್ನು ಮುಕ್ತ ಕಂಠದಿಂದ ಪ್ರಶಂಶಿಸುತ್ತಾ ಹಾಲಿ ಸಮಿತಿಯನ್ನು ಬರ್ಕಾಸ್ತು ಗೊಳಿಸಿ ನೂತನ ಸಮಿತಿ ರಚನೆಗೆ ಅನುವು ಮಾಡಿಕೊಟ್ಟರು.
ಅದರಂತೆ ನೂತನ ಸಮಿತಿ ಜವಾಬ್ದಾರಿ ಅಶ್ರಫ್ ಬಾವ ಮಂಗಳೂರು ಮತ್ತು ಅಲ್ತಾಫ್ ಮಂಗಳೂರು ಅವರಿಗೆ ನೀಡಲಾಯಿತು . ಅವರಿಂದ 2022-23 ನೇ ಸಾಲಿನ ನೂತನ ಸಮಿತಿ ರಚಿಸುವ ಪ್ರಕ್ರಿಯೆ ನಡೆಯಿತು. ಹಲವಾರು ಚರ್ಚೆಗಳ ಮೂಲಕ ಕೊನೆಗೂ ಸರ್ವ ಸದಸ್ಯರ ಅನುಮತಿ ಮೇರೆಗೆ ಮೋನಬ್ಬ ಅಬ್ದುಲ್ ರಹ್ಮಾನ್ ರವರು ಮತ್ತೊಮ್ಮೆ ನೂತನ ಅಧ್ಯಕ್ಷರಾಗಿ ನೇಮಕ ಗೊಂಡರು ,ಪ್ರಧಾನ ಕಾರ್ಯ ದರ್ಶಿಯಾಗಿ ಮೊಹಿದಿನ್ ಪಡುಬಿದ್ರಿ ,ಕೋಶಾಧಿಕಾರಿಯಾಗಿ ಸುಲೈಮಾನ್ ಮಿತ್ತೂರು ಇವರನ್ನು ನೇಮಕ ಮಾಡಲಾಯಿತು ಅಲ್ಲದೆ ಇತರ ಹುದ್ದೆಗಳನ್ನು ಅರ್ಹ ಸದಸ್ಯರಿಗೆ ನೀಡಲಾಯಿತು ಸರಿ ಸುಮಾರು 23 ಕಾರ್ಯ ಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು.
ಕೊನೆಗೆ ಇಬ್ರಾಹಿಂ ಹಾಜಿ ಅತ್ರಾಡಿ ,ಅನ್ಸಾರ್ ಕಾಟಿಪಳ್ಳ ,ಆಬಿದ್ ಹೈದ್ರೋಸ್ ತಂಗಳ್ ಎಮ್ಮೆಮ್ಮಾಡ್ ಸಂದರ್ಬೋಜಿತವಾಗಿ ಮಾತನಾಡಿ ತಮ್ಮ ತಮ್ಮ ಅನಿಸಿಕೆಗಳನ್ನು ಪ್ರಕಟಿಸಿ ನೂತನ ಸಮಿತಿಗೆ ಶುಭ ಹಾರೈಸಿದರು, ಮೊಹಿದಿನ್ ಪಡುಬಿದ್ರೆ ಅವರು ಧನ್ಯವಾದ ಸಮರ್ಪಿಸಿ ಕಲಂದರ್ ಬಾವ ಅಚ್ಚುಕಟ್ಟಾಗಿ ಕಾರ್ಯ ಕ್ರಮ ನಿರ್ವಹಿಸಿದರು .ಮೂರು ಸ್ವಲಾತಿನೊಂದಿಗೆ ಕಾರ್ಯ ಕ್ರಮವು ಮುಕ್ತಾಯ ಗೊಂಡಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.