ಸಲಾಲ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರ್ ಫೌಂಡೇಶನ್ (ಕೆಸಿಎಫ್) ದುಬೈ ನಾರ್ತ್ ಝೋನ್ ಆಯೋಜಿಸಿದ ಸಲಾಲ ಯಾತ್ರೆಯಲ್ಲಿದ್ದ ನಾಯಕರುಗಳು ಒಮಾನಿನ ಸಲಾಲದಲ್ಲಿ ಈದ್ ಮೀಟ್ ನಡೆಸಲಾಯಿತು.
ಈದ್ ಮೀಟ್ ನ ಅಧ್ಯಕ್ಷತೆಯನ್ನು ಝೋನ್ ಅಧ್ಯಕ್ಷರಾದ ಇಸ್ಮಾಯಿಲ್ ಮದನಿನಗರ ವಹಿಸಿದರು. ಝೋನ್ ಕಛೇರಿ ವಿಭಾಗದ ಕಾರ್ಯದರ್ಶಿ ಹಬೀಬ್ ಸಜೀಪ ಸ್ವಾಗತಿಸಿದರು.
ಟೂರ್ ಅಮೀರ್ ಆಗಿದ್ದ ಮುಸ್ತಫ ಮಾಸ್ಟರ್ ಉಳ್ಲಾಲ, ಸೈಯ್ಯದ್ ಜಾಫರ್ ತಂಙಳ್ ಕಾಸರಗೋಡ್, ಕೆಸಿಎಫ್ ರಾಷ್ಟ್ರೀಯ ನಾಯಕರ ಶುಕೂರ್ ಮಣಿಲಾ, ಝೋನ್ ಕ್ಯಾಬಿನೆಟ್ ನಾಯಕರಾದ ರಿಯಾಝ್ ಕೊಂಡಂಗೇರಿ, ಬಷೀರ್ ಪಡುಬಿದ್ರಿ, ಅಬ್ಬಾಸ್ ಮಂಜನಾಡಿ, ಕೆಸಿಎಫ್ ಸೌತ್ ಝೋನ್ ನಾಯಕರಾದ ಮೊಹಮ್ಮದ್ ಅಲೀ ಕನ್ಯಾನ, ಐಸಿಫ್ ನಾಯಕರಾದ ಈಸಾ ಫಯ್ಯನೂರ್, ಹಮೀದ್ ಚಾಮಿಯಾಲ್, ಮುನೀರ್ ಕೊಂಡಂಗೇರಿ, ಮಜೀದ್ ಮೊಂಡೆಪದವು, ಲತೀಫ್ ಕಂಡಿಗ, ಮುಹಿದ್ದೀನ್ ತಳಿಫರಂಬು ಇನ್ನಿತರರು ಪರಸ್ಪರ ಶುಭಾಶಯ ವಿನಿಮಯ ನಡೆಸಿದರು.
ಝೋನ್ ಸಂಘಟನಾ ಕಾರ್ಯದರ್ಶಿ ಮುಸ್ತಫ ಮಾಸ್ಟರ್ ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.