ಮೊದಲು ಈಜಿ ದಡ ಸೇರಿದ್ದ ವ್ಯಕ್ತಿ, ಕಾರಿನಲ್ಲಿದ್ದ ದಾಖಲೆಗಳಿಗಾಗಿ ಪುನಃ ಈಜಿದಾಗ ದುರ್ಘಟನೆ ಸಂಭವಿಸಿದೆ..
(ವಿಶ್ವ ಕನ್ನಡಿಗ ನ್ಯೂಸ್) : ಬಹ್ರೇನ್ ನಲ್ಲಿ ಅನಿವಾಸಿ ಭಾರತೀಯರೊಬ್ಬರು ಕಾರು ಸಮುದ್ರಕ್ಕೆ ಬಿದ್ದ ಪರಿಣಾಮ ಸಾವನ್ನಪ್ಪಿದ್ದಾರೆ. ಮೃತರನ್ನು ಕೇರಳದ ಶ್ರೀಜಿತ್ ಗೋಪಾಲಕೃಷ್ಣನ್(42) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ ಈ ಘಟನೆ ನಡೆದಿದೆ.
ಶ್ರೀಜಿತ್ ಗೋಪಾಲಕೃಷ್ಣನ್ ತನ್ನ ಕಾರಿನಲ್ಲಿ ಸಿತ್ರಾ ಸೇತುವೆಯ ಮೂಲಕ ಪ್ರಯಾಣಿಸುವಾಗ ಕಾರು ನಿಯಂತ್ರಣ ಕಳೆದುಕೊಂಡು ಸಮುದ್ರಕ್ಕೆ ಬಿದ್ದಿದೆ. ಶ್ರೀಜಿತ್ ಮೊದಲು ಮುಳುಗಿದ ಕಾರಿನಿಂದ ಈಜಿ ದಡ ಸೇರಲು ಯಶಸ್ವಿಯಾಗಿದ್ದರು, ಆದರೆ ಅವರು ಕೆಲವು ದಾಖಲೆಗಳನ್ನು ಹೊಂದಿರುವ ಚೀಲ ಕಾರಿನಲ್ಲಿದೆ ಅದನ್ನು ತೆಗೆಯಬೇಕೆಂದು ಈಜಲು ಹಿಂತಿರುಗಿದಾಗ, ದೊಡ್ಡ ಅಲೆಯಲ್ಲಿ ಸಿಕ್ಕಿ ಕೊಚ್ಚಿಹೋದರು.
ನಾಗರಿಕ ರಕ್ಷಣಾ ಪಡೆ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿತು, ಆದರೆ ಶ್ರೀಜಿತ್ ಜೀವವನ್ನು ಉಳಿಸಲು ಸಾಧ್ಯವಾಗಲಿಲ್ಲ. ಶವವನ್ನು ಸಲ್ಮಾನ್ಯಾ ಆಸ್ಪತ್ರೆಗೆ ಸಾಗಿಸಲಾಯಿತು. ಶ್ರೀಜಿತ್ ಬಹ್ರೇನ್ ನಲ್ಲಿ ರಾಕ್ನ್ ಹೋಮ್ ಮಾರ್ಬಲ್ ಮತ್ತು ಗ್ರಾನೈಟ್ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದರು.
ಮೃತರು ಪತ್ನಿ, ಅಲ್ ಮಹದ್ ಶಾಲೆಯ ಶಿಕ್ಷಕಿ ವಿದ್ಯಾ, ಮಕ್ಕಳಾದ ಅಭಿಜಿತ್, ಮಾಳವಿಕಾ ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.