ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಸಯ್ಯಿದ್ ಮುಹಮ್ಮದಲಿ ಶಿಹಾಬ್ ತಂಙಳ್ ಜೂನಿಯರ್ ಶರೀಅತ್ ಕಾಲೇಜು, ಸುಂಟಿಕೊಪ್ಪ ಯುಎಇ ನಡೆಸಿಕೊಂಡು ಬರುತ್ತಿರುವ ಆದ್ಯಾತ್ಮಿಕ ಶಿಬಿರ ಮಜ್ಲಿಸುನ್ನೂರ್ (ರವಿವಾರ ದಿನಾಂಕ 17/07/2022) ಮಗರಿಬ್ ನಮಾಝಿನ ಬಳಿಕ ಸರಿಯಾಗಿ 08:00ಕ್ಕೆ ದೇರಾ ದುಬೈ ನಾಸಿರ್ ಸ್ಕ್ವೇರ್ ಬನಿಯಾಸ್ ಮೆಟ್ರೊ ಸ್ಟೇಷನ್ ಬಳಿ ಇರುವ ಲ್ಯಾಂಡ್ ಮಾರ್ಕ್ ಹೋಟೆಲ್ ನ 3rd Floor ಸೆನೇಟ್ ಹಾಲ್ ನಲ್ಲಿ ಸಯ್ಯದ್ ಅಸ್ಕರ್ ಅಲಿ ತಂಗಳ್ ರವರ ನೇತೃತ್ವದಲ್ಲಿ ನಡೆಯಲಿದೆ.
ಮುಖ್ಯ ಅಥಿತಿಗಳಾಗಿ ಶುಹೈಬ್ ತಂಙಳ್, ಉಮರ್ ಫೈಝಿ, ಇಖ್ಬಾಲ್ ಮೌಲವಿ, ರಫೀಕ್ ಮಾಸ್ಟರ್ ಭಾಗವಹಿಸಲಿದ್ದಾರೆ. ಮಜ್ಲಿಸುನ್ನೂರ್ ಬಳಿಕ ಉಸ್ತಾದರಿಂದ ನಸೀಹತ್ ಕಾರ್ಯವೂ ನೆರವೇರಲಿದೆ.
ಆದುದರಿಂದ ತಾವೆಲ್ಲರೂ ಕ್ಲಪ್ತ ಸಮಯಕ್ಕೆ ಸರಿಯಾಗಿ ಮುತ್ತು ನೆಬಿಯವರ ಶ್ರೇಷ್ಠ ಸ್ವಾಹಾಬಾಗಳಾದ ಅಹ್ಲ್ ಬದ್ರ್ ಶುಹದಾಗಳ ಗುಣಗಾನ ಮಾಡುವ ಪುಣ್ಯ ಮಜ್ಲಿಸ್ ನಲ್ಲಿ ಒಂದುಗೂಡಿ ಅಲ್ಲಾಹನ ಸಂಪ್ರೀತಿ ಗಳಿಸುವವರ ಸಾಲಲ್ಲಿ ಸೇರಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.