(ವಿಶ್ವ ಕನ್ನಡಿಗ ನ್ಯೂಸ್) : ಕ್ಷಮಿತಾ.ಜೈನ್.ವಿ, ಮೃದು ಸ್ವಭಾವದ ಮುಗ್ಧ ಹುಡುಗಿ. ಬಹುಮುಖ ಪ್ರತಿಭೆಯಾದ ಇವರು ಚಿತ್ರಕಲೆ, ಬರವಣಿಗೆ, ಗಾಯನ, ನಟನೆ, ನೃತ್ಯ (ಭರತನಾಟ್ಯ), ಚೆಸ್ ಸೇರಿದಂತೆ ಇತರೆ ಹಲವಾರು ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮದೇಯಾದ ಛಾಪನ್ನು ಮೂಡಿಸಿ ಹೆತ್ತವರ ಹೆಸರನ್ನು ಎಲ್ಲರ ಮನಸ್ಸಿನಲ್ಲಿ ಹಸಿರಾಗಿ ಉಸಿರಾಡುವಂತೆ ಮಾಡಿದ್ದಾರೆ.
ಮೂಲತಃ ಕೊಗ್ರೆಯವರಾದ ಇವರು ಬಲಿಗೆ ದೊಡ್ಡ ಮನೆಯ ಬಿ.ಎ. ವರ್ಧಮಾನ್ ಹಾಗೂ ಹೊರನಾಡಿನ ಪದ್ಮಲತಾ ಇವರ ಪ್ರಥಮ ಪುತ್ರಿ. ಕೇವಲ ಶಿಕ್ಷಣೇತರ ಚಟುವಟಿಕೆಯಲ್ಲಿ ಮಾತ್ರವಲ್ಲದೆ ಶೈಕ್ಷಣಿಕವಾಗಿ ಅದ್ಬುತವಾದ ಸಾಧನೆಯನ್ನು ಮಾಡಿ ಜನರ ಮನಸ್ಸಿನಲ್ಲಿ ನೆಲೆಯಾಗಿದ್ದಾರೆ.
ಶ್ರೀ ಸತ್ಯ ಸಾಯಿ ಜ್ಯೋತಿ ವಿದ್ಯಾಕೇಂದ್ರ ಜಯಪುರದಲ್ಲಿ ಹತ್ತನೇ ತರಗತಿಯಲ್ಲಿ 10 ಸಿ.ಜಿ.ಪಿ.ಎ ಯೊಂದಿಗೆ ತೇರ್ಗಡೆ ಹೊಂದಿ ಮುಂದೆ ಮೂಡಬಿದ್ರೆಯ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ 98% rank ಪಡೆದು ಸಿ.ಯಿ.ಟಿ ಯಲ್ಲಿ 2000 rank, ನಾ.ಟ ಪರೀಕ್ಷೆಯಲ್ಲಿ 209 ನೇ rank ಪಡೆದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಆಯುರ್ವೇದ ಅಂಡ್ ಹಾಸ್ಪಿಟಲ್ ಹಾಸನ್ ಇಲ್ಲಿ ಶಿಕ್ಷಣ ಮುಗಿಸಿದ್ದಾರೆ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಆಫ್ ಆಯುರ್ವೇದ ಅಂಡ್ ಹಾಸ್ಪಿಟಲ್ ಹಾಸನ್ ನಲ್ಲಿ ಬಿ.ಎ.ಎಂ.ಎಸ್ ನಲ್ಲಿ 76.5% ಅಂಕದೊಂದಿಗೆ ತೇರ್ಗಡೆಯಾಗಿ ಡಾ.ಕ್ಷಮಿತಾ.ಜೈನ್.ವಿ ಎಂಬ ಪಟ್ಟವನ್ನು ಅಲಂಕರಿಸಿ ಸಾಧನೆಯ ಶಿಖರದಲ್ಲಿ ಮತ್ತೊಂದು ಮೈಲಿಗಲ್ಲನ್ನು ಇಟ್ಟು ತಮ್ಮ ಕುಟುಂಬದ ಸದಸ್ಯರ ಹೆಮ್ಮೆಗೆ ಪಾತ್ರರಾಗಿದ್ದಾರೆ. ಇವರು ನಾನು ಬಲ್ಲವರಲ್ಲಿ ಒಬ್ಬರೆಂದು ಹೇಳಲು ನನಗೆ ಹೆಮ್ಮೆ ತರುತ್ತದೆ.
ಇವರ ಮುಂದಿನ ಭವಿಷ್ಯದ ಸಾಧನೆಗೆ ಹಾಗೂ ಮುಂದಿನ ಹೆಜ್ಜೆಗೆ ದೇವರ ಆಶೀರ್ವಾದ ಸದಾ ಹಾಗೆ ಸಮಾಜದ ಸಹಕಾರ ಪ್ರೋತ್ಸಾಹ ಇವರ ಜೊತೆ-ಜೊತೆಯಲ್ಲಿ ಸಾಗಲಿ ಎಂದು ಆಶಿಸುತ್ತೇವೆ.
✍ ಅರ್ಚಿತ್.ಎ.ಜೈನ್. ಸಂಸೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.