(ವಿಶ್ವ ಕನ್ನಡಿಗ ನ್ಯೂಸ್) : SKSSF ಬೊಳ್ಮಿನಾರ್ ಶಾಖೆಯ ವತಿಯಿಂದ ಪುದುವೆಟ್ಟು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಟೆ ಇದರ ಪರಿಸರ ಸ್ವಚ್ಚತಾ ಕಾರ್ಯಕ್ರಮ ಇತ್ತೀಚೆಗೆ ಜರಗಿತು. ಶಾಖಾ ಅಧ್ಯಕ್ಷರಾದ ಅಬೂಬಕರ್ ಕುಂಟ್ಯಾಣ, ಕಾರ್ಯದರ್ಶಿ ಸಿದ್ದೀಕ್ ಅಲೆಪಾಯ, ಕೋಶಾದಿಕಾರಿ ರಫೀಖ್ ಅಲೆಪಾಯ, ಬಶೀರ್ ಅಲೆಪಾಯ, ಮುನ್ಸೀರ್ ಕರಂಬಾರ್, ಬಶೀರ್ ಕಾಪಾಯ ಮುಂತಾದವರು ಸಹಕರಿಸಿದರು.
ಶಾಲಾ ಮುಖ್ಯ ಅಧ್ಯಾಪಕರಿಂದ ಅಭಿನಂದನೆ ; ಶಾಲೆಯ ಸ್ವಚ್ಚತಾ ಕಾರ್ಯಕ್ರಮವನ್ನು ಹಮ್ಮಿಕೊಂಡು ಯಶಸ್ವಿಗೊಳಿಸಿದ ಬೊಳ್ಮಿನಾರ್ ಶಾಖೆಯ SKSSF ಸಂಘಟನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶಾಲಾ ಮುಖ್ಯ ಅಧ್ಯಾಪಕರಾದ ಶಿಲ್ಪಾ ಅವರು ಅಭಿನಂದನಾ ಪತ್ರವನ್ನು ಸಂಘಟನಾ ನಾಯಕರಿಗೆ ನೀಡಿದರು. ಮುಂದೆಯು ಶಾಲಾ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಘಟನೆಯ ಸಹಕಾರವಿರಲೀ ಎಂದು ಕೋರಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.