ತಿರುವಲ್ಲಾ (ವಿಶ್ವ ಕನ್ನಡಿಗ ನ್ಯೂಸ್) : ಬೆಳಗಿನ ಉಪಾಹಾರ ಸೇವಿಸುತ್ತಿದ್ದಾಗ ಗಂಟಲಿನಲ್ಲಿ ಆಹಾರವು ಸಿಲುಕಿ ಕುಸಿದುಬಿದ್ದು ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ಕೇರಳದಲ್ಲಿ ನಡೆದಿದೆ. ಮೃತರನ್ನು ರೆಜಿ ಸೆಬಾಸ್ಟಿಯನ್ (48) ಎಂದು ಗುರುತಿಸಲಾಗಿದೆ.
ಕುಸಿದುಬಿದ್ದ ಕೂಡಲೇ ರೆಜಿಯನ್ನು ತಿರುವಲ್ಲಾದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ತಿರುವಲ್ಲಾ ಪೊಲೀಸರು ಅಸ್ವಾಭಾವಿಕ ಸಾವಿನ ಪ್ರಕರಣವನ್ನು ದಾಖಲಿಸಿದ್ದಾರೆ. ಟ್ಯಾಪಿಂಗ್ ಕೆಲಸಗಾರನಾಗಿರುವ ರೆಜಿ ಹೆಂಡತಿ, ಎರಡು ಮಕ್ಕಳು ಹಾಗು ಬಂಧು ಬಳಗವನ್ನು ಅಗಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.