(ವಿಶ್ವ ಕನ್ನಡಿಗ ನ್ಯೂಸ್) : ಮಡಿಕೇರಿಯಿಂದ ಸೇವಾಭಾರತಿ ಆಂಬುಲೆನ್ಸ್ ಮೂಲಕ ಸುಳ್ಯ ಕೆವಿಜಿ ಆಸ್ಪತ್ರೆಗೆ ಕರೆತರುತ್ತಿದ್ದ ರೋಗಿಯೊಬ್ಬರನ್ನು ಮಾನವೀಯತೆ ತೋರಿದ ಯುವಕರ ತಂಡವು ಅರ್ಧ ರಾತ್ರಿ ಸುಮಾರು 2 ಗಂಟೆಯ ಹೊತ್ತಲ್ಲಿ ಆಸ್ಪತ್ರೆಗೆ ತಲುಪಿಸಲು ಸಹಕಾರ ನೀಡಿದ್ದಾರೆ.
ಕೆವಿಜಿ ಆಸ್ಪತ್ರೆಯ ಸಿಬ್ಬಂದಿಯವರಾದ ಕೀರ್ತನ್ ರವರ ಸಂಬಂಧಿ ರೋಗಿಯೊಬ್ಬರು ಅರ್ಧ ರಾತ್ರಿಯಲ್ಲಿ ತುರ್ತಾಗಿ ಆಸ್ಪತ್ರೆಗೆ ದಾಖಲಾಗಲು ಬಂದ ಸಂಧರ್ಭದಲ್ಲಿ ಅರಂಬೂರು ಬಳಿ ರಸ್ತೆಯಲ್ಲಿ ಪಯಸ್ವಿನಿ ನೀರು ಹರಿದು ಬಂದು ಜಲಾವೃತವಾಗಿರುವುದನ್ನು ಗಮನಿಸಿದ ಕೀರ್ತನ್ ಹಾಗೂ ಕೌಶಲ್ ಎಂಬ ಕೆವಿಜಿ ಆಸ್ಪತ್ರೆಯ ಇಬ್ಬರು ಸಿಬ್ಬಂದಿಗಳು ರೋಗಿಯನ್ನು ಸುರಕ್ಷಿತವಾಗಿ ಆಸ್ಪತ್ರೆಗೆ ತಲುಪಿಸಲು ಅರ್ಧ ರಾತ್ರಿಯಲ್ಲಿ ಸಾಹಸ ಪ್ರಯತ್ನ ಮಾಡಿದ್ದಾರೆ.
ಅದಕ್ಕಾಗಿ ಎಸ್ಸೆಸ್ಸಫ್ ತುರ್ತು ಸೇವಾ ತಂಡದ ಸದಸ್ಯರಾದ ಸಿದ್ದೀಖ್ ಗೂನಡ್ಕ, ರಫೀಕ್ ಬಿ ಎಂ ಸುಳ್ಯ, ಆಬಿದ್ ಕಲ್ಲುಮುಟ್ಲು ರವರನ್ನು ಸಂಪರ್ಕಿಸಿ ಸಹಕಾರ ಕೋರಿದರು. ಮಧ್ಯ ರಾತ್ರಿಯಲ್ಲಿ ಯಾವುದೇ ರೀತಿಯ ಸಂಕಷ್ಟವನ್ನು ಲೆಕ್ಕಿಸದೆ ಕೀರ್ತನ್ ರವರ ನೇತೃತ್ವದಲ್ಲಿ ಐವರ ತಂಡವು ರೋಗಿಯನ್ನು ರಭಸವಾದ ನೀರಿನ ಸೆಳೆತವನ್ನು ಲೆಕ್ಕಿಸದೆ ಹೊತ್ತುಕೊಂಡು ಹೋಗಿ ಸುರಕ್ಷಿತವಾಗಿ ಮತ್ತೊಂದು ದಡಕ್ಕೆ ಸೇರಿಸಿ ಅಲ್ಲಿಂದ ಮತ್ತೊಂದು ಆಂಬುಲೆನ್ಸ್ ಮುಖಾಂತರ ಆಸ್ಪತ್ರೆಗೆ ತಲುಪಿಸಲಾಯಿತು.
ಮಧ್ಯ ರಾತ್ರಿಯಲ್ಲಿ ನಡೆಸಿದ ಈ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಿಂದ ವ್ಯಾಪಕ ಅಭಿನಂದನೆಗಳು ಹರಿದು ಬಂದವು. ಕಳೆದ ಮೂರು ದಿನಗಳಿಂದಲೂ ಎಸ್ಸೆಸ್ಸಫ್ ನ ತುರ್ತು ಸೇವಾ ತಂಡವು ರಾತ್ರಿ ಹಗಲೆನ್ನದೆ ನಿಸ್ವಾರ್ಥ ಕಾರ್ಯಾಚರಣೆಯಲ್ಲಿದೆ ಎಂಬುದನ್ನು ಈ ಸಂಧರ್ಭದಲ್ಲಿ ಊರವರು ಸ್ಮರಿಸುತ್ತಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.