(www.vknews.in) : ಭಾರತಕ್ಕಿದು ಸ್ವಾತಂತ್ರ್ಯ ಸಿಕ್ಕ ದಿನ. ಎರಡು ಶತಮಾನಗಳ ಪರಕೀಯ ಪ್ರಭುತ್ವದಿಂದ ದೇಶ ಮುಕ್ತಿ ಗೊಂಡ ನೆನಪನ್ನು ಸಂಭ್ರಮಿಸುವ ಸುದಿನ.ಆದರೆ ಇಂದು ಸಂಭ್ರಮಕ್ಕಿಂತ ಸವಾಲು ಎದುರಿಸುವ ಮತ್ತು ದೇಶ ಮತ್ತೆ ಸ್ವಾತಂತ್ರ್ಯಕ್ಕಾಗಿ ಹೋರಾಡ ಬೇಕೆನಿಸುವಂತಹ ಸಂಕಷ್ಟಗಳು ಭಾರತವನ್ನಿಂದು ಆವರಿಸಿಕೊಂಡಿದೆ. ಜನತೆಗೆ ನ್ಯಾಯ ನೀಡಬೇಕಾದ ನ್ಯಾಯಾಂಗವೇ ದೇಶದ ಸ್ಥಿತಿಗತಿಗಳನ್ನು ಕಂಡು ಬೆಚ್ಚಿಬೀಳುತ್ತಿದೆ. ಪ್ರತೀ ಆರು ಗಂಟೆಗೊಂದು ಮಹಿಳೆಯ ಆತ್ಯಾಚಾರವಾಗುತ್ತಿರುವ ವರದಿಯನ್ನು ನೋಡಿ ದೇಶದಲ್ಲಿ ಏನು ನಡೆಯುತ್ತಿದೆ? ಎಂದು ನ್ಯಾಯಾಂಗವೇ ಕೇಳುತ್ತಿದೆ. ದಲಿತರ ದಯನೀಯ ಸ್ಥಿತಿಯನ್ನು ಕೇಳುವವರಿಲ್ಲ.
ಸರ್ಕಾರಿ ಅಧಿಕಾರಿಯಾಗಿದ್ದು ಕೊಂಡು ದಲಿತೆ ಎಂಬ ಕಾರಣಕ್ಕೆ ಜನರು ಕುಡಿಯಲು ನೀರು ಕೊಡದೆ ಸತಾಯಿಸಲಾದ ದೇಶದಲ್ಲಿ ಸಮಾನ್ಯ ದಲಿತರ ಸ್ಥಿತಿ ಹೇಗಿರಬಹುದು? ಒಂದೆಡೆ ವಿದೇಶಕ್ಕೆ ಯಥೇಚ್ಛ ಗೋಮಾಂಸ ರಫ್ತು ಮಾಡುತ್ತಲೇ,ತನ್ನ ದೇಶವಾಸಿಗಳು ಗೋಮಾಂಸ ಬಳಸಿದರೆಂಬ ನೆಪದಲ್ಲಿ ಗುಂಪು ಅಲ್ಲೆ,ಹತ್ಯೆ ನಡೆಸುವ ದೃಶ್ಯಗಳು ಮಾಮೂಲಿಯಾಗುತ್ತಿವೆ.ಸಾಕಷ್ಟು ದೃಢೀಕರಣ ದಾಖಲೆಗಳಿಲ್ಲವೆಂದು ಹೇಳಿ ತನ್ನದೇ ದೇಶದಲ್ಲಿ ವಾಸವಾಗಿರುವ ಪ್ರಜೆಗಳನ್ನು ಪರದೇಶಿಗಳನ್ನಾಗಿಸುವ ಪ್ರಯತ್ನ ಎಗ್ಗಿಲ್ಲದೆ ನಡೆಯುತ್ತಿದೆ.
ಉಳಿದು ಕೊಳ್ಳುವುದಕ್ಕೊಂದು ಸೂರಿಲ್ಲದೆ ಸಾರ್ವಜನಿಕ ಶೌಚಾಲಯದಲ್ಲೇ ವರ್ಷಾನುಗಟ್ಟಲೆ ವಾಸ ಹೊಡಿರುವ ಮಹಿಳೆಯರ ಗೋಳಿನ ಕಥೆಗಳು ವರದಿಯಾಗುತ್ತಿದೆ.ಸ್ವಾತಂತ್ರ್ಯ ಸಿಕ್ಕಿ ಏಳು ದಶಕ ದಾಟಿದ ಮೇಲೂ ಹಸಿವಿನಿಂದ ಸಾಯುವ,ಚಿಕಿತ್ಸೆ ಸಿಗದೆ ಸಾಯುವ ಪ್ರಕರಣಗಳು ಆಗಾಗ ಕೇಳಿ ಬರುತ್ತಲೇ ಇವೆ.ಸ್ವಸ್ಥ ಜೀವನಕ್ಕೆ ಆಗತ್ಯವಾದ ಸ್ವಾತಂತ್ರ್ಯವನ್ನು ಸ್ವತಂತ್ರ ಕಳ ಕೊಂಡಂತಹ ಸ್ಥಿತಿಯಲ್ಲಿ ಜನತೆ ನಿಜವಾದ ಸ್ವಾತಂತ್ರ್ಯಕ್ಕಾಗಿ ಹಪಹಪಿಸುತ್ತಿದ್ದಾರೆ.
ಹಾಗೇ ನೋಡಿದರೆ ದೇಶಕ್ಕಷ್ಟೇ ಅಲ್ಲ ಇಡೀ ಜಗತ್ತಿಗೇ ಸ್ವಾತಂತ್ರ್ಯಬೇಕಾಗಿದೆ. ಮನುಷ್ಯನಿಗೆ ಮನುಷ್ಯನಾಗಿ ಬದುಕುವ ಸ್ವಾತಂತ್ರ್ಯ ಸಿಗಬೇಕಾಗಿದೆ. ಭಯೋತ್ಪಾದನೆ, ಹಿಂಸಾಚಾರ, ರಾಜಕೀಯದ ದೌರ್ಜನ್ಯಗಳು, ಕೊಲೆ, ಕೊಳ್ಳೆ, ದರೋಡೆಗಳು, ಜೀವ ಕಂಟಕ ಕೃತ್ಯಗಳು ವಿಶ್ವವ್ಯಾಪಕವಾಗಿ ಮನುಷ್ಯನ ಜೀವ ತಿನ್ನುತ್ತಿದೆ ಇವೆಲ್ಲವುಗಳಿಂದ ಮುಕ್ತಿ ಸಿಕ್ಕಿ ನಿಜವಾದ ಸ್ವಾತಂತ್ರ್ಯ ಪ್ರತಿಯೊಬ್ಬ ಪ್ರಜೆಗೂ ಸಿಗಲಿ, ಸ್ವಾತಂತ್ರ್ಯಗೋಸ್ಕರ ಹೋರಾಡಿದ ನಾಯಕರು ಈ ಬಾರತದಲ್ಲಿ ಮತ್ತೆ ಮತ್ತೆ ಕಾಣ ಸಿಗಲಿ ಎಂದು ಹಾರೈಸುತ್ತಾ..
ಸರ್ವ ಜನ ಬಾಂಧವರಿಗೂ 75 ನೇ ಸ್ವಾತಂತ್ರ್ಯ ದಿನದ ಶುಭಾಶಯಗಳು.. ಜೈ ಭಾರತ್…
✍🏼ತಂಜೀದ್ ಅಮ್ಮೆಂಬಳ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.