(www.vknews.in) : ಫರಂಗಿಪೇಟೆ, ಅಮೆಮಾರ್ ಬದ್ರಿಯಾ ಮದರಸ ಮತ್ತು ಜುಮ್ಮಾ ಮಸೀದಿ ವತಿಯಿಂದ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಮಸೀದಿ ಅಧ್ಯಕ್ಷ ಉಮರಬ್ಬ ಎ.ಎಸ್.ಬಿ ದ್ವಜಾರೋಹಣಗೈದರು ಖತೀಬ್ ಮೊಹಮ್ಮದ್ ಆಲಿ ಫೈಝಿ ಇರ್ಫಾನಿ ಈ ಸಂದರ್ಭದಲ್ಲಿ ಮಾತನಾಡಿ ನಮ್ಮ ಪೂರ್ವಿಕರ ತ್ಯಾಗ ಬಲಿದಾನದ ಪ್ರತೀಕವಾಗಿ ನಾವು ಇಂದು ಸ್ವತಂತ್ರ ಭಾರತವನ್ನು ಅನುಭವಿಸುತ್ತಿದ್ದೇವೆ.
75 ವರ್ಷಗಳಲ್ಲಿ ದೇಶ ನಿರೀಕ್ಷಿತ ಸಾದನೆ ಕಾಣದಿದ್ದರೂ ಕ್ರಮಿಸಿದ ಸಾಧನೆಯ ಮೈಲುಗಲ್ಲು ಕಡಿಮೆಯೇನಲ್ಲ. ಸಾಧನೆ ಹಿನ್ನಡೆಗೆ ಪ್ರಮುಖ ಕಾರಣ ಭ್ರಷ್ಟಾಚಾರ, ಜಾತಿ ರಾಜಕೀಯ, ಸ್ವಜನಾ ಪಕ್ಷಪಾತ ಮತ್ತು ಕೋಮುವಾದವಾಗಿದೆ ಎಂದು ಹೇಳಿದ ಅವರು, ಇದನ್ನು ತೊಡೆದು ಹಾಕಿ ಸುಂದರ ಭಾರತವನ್ನು ಕಟ್ಟುವ ಗುರಿ ನಮ್ಮದಾಗಬೇಕು ಎಂದರು.
ಮಸೀದಿ ಆಡಳಿತ ಮಂಡಳಿ ಉಪಾಧ್ಯಕ್ಷ ಅಬ್ದುಲ್ ಖಾದರ್ ಎಫ್. ಎ, ಕಾರ್ಯದರ್ಶಿ ಅಬೂಸ್ವಾಲಿಹ್ ಉಸ್ತಾದ್, ಜೊತೆ ಕಾರ್ಯದರ್ಶಿ ಮೊಹಮ್ಮದ್ ಶಾಫಿ, ಕೋಶಾಧಿಕಾರಿ ಅಬ್ದುಲ್ ರಜಾಕ್, ಲೆಕ್ಕಪರಿಶೋಧಕ ಬಶೀರ್ ತಂಡೇಲ್ ಸದಸ್ಯರಾದ ಹೈದರ್, ಸಿದ್ದೀಕ್, ಇಕ್ಬಾಲ್, ಹನೀಫ್, ಇಬ್ರಾಹಿಂ, ಜಮಾಲ್, ಅಬ್ದುಲ್ ಕುಞ, ದಾರಿಮಿ, ಇಕ್ಬಾಲ್ ಆಶ್ರಫಿ, ಇಸ್ಮಾಯಿಲ್ ಯಮಾನಿ, ಅಬ್ದುಲ್ ಹಮೀದ್ ಅರ್ಶದಿ, ಸಾದಿಕ್ ಫೈಝಿ, ಅಬೂಬಕ್ಕರ್ ಮದನಿ, ಅಬ್ದುಲ್ ಮಜೀದ್ ಮುಸ್ಲಿಯಾರ್ ಮತ್ತಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.