ಮಂಗಳೂರು (www.vknews.in) : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಟಿಪ್ಪು ಸುಲ್ತಾನ್ ಮತ್ತು ಹೈದರಾಲಿ ಸ್ವಾತಂತ್ರ್ಯ ಹೋರಾಟ ಮಾಡಿಲ್ಲ ಎನ್ನುವ ಅವಿವೇಕ ಮತ್ತು ಅಜ್ಞಾನದ ಹೇಳಿಕೆ ಮೂಲಕ ನೈಜ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆಂದು ಕರ್ನಾಟಕ ರಾಜ್ಯ ಟಿಪ್ಪು ಸುಲ್ತಾನ್ ಅಭಿಮಾನಿಗಳ ಮಹಾವೇದಿಕೆ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಗೌರವ ಡಾಕ್ಟರೇಟ್ ಪುರಸ್ಕೃತ ಹೆಚ್.ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ ಆರೋಪಿಸಿದ್ದಾರೆ.
ತಿರುಚಿದ ಭಾರತದ ಇತಿಹಾಸವನ್ನು ವೇದ ವಾಕ್ಯವೆಂಬಂತೆ ಓದಿರುವ ಸಿ.ಟಿ.ರವಿ,ಟಿಪ್ಪು ಸುಲ್ತಾನ್ ಮತ್ತು ಹೈದರಾಲಿ ಮುಸ್ಲಿಂ ಎಂಬ ಏಕೈಕ ಕಾರಣಕ್ಕೆ ಈ ರೀತಿ ಆರೋಪ ಹೊರಿಸುತ್ತಿದ್ದಾರೆ. 800 ವರ್ಷಕ್ಕಿಂತ ಹೆಚ್ಚು ಭಾರತವನ್ನಾಳಿದ ಮುಸ್ಲಿಂ ಆಡಳಿತಾಧಿಕಾರಿಗಳು ಭಾರತವನ್ನು ಮುಸ್ಲಿಂ ರಾಷ್ಟ್ರ ವಾಗಿ ಮಾಡುವ ಯಾವುದೇ ಷಡ್ಯಂತ್ರ ರೂಪಿಸದಿದ್ದರೂ,ಟಿಪ್ಪು ಸುಲ್ತಾನ್ ಭಾರತವನ್ನು ಮುಸ್ಲಿಂ ರಾಷ್ಟ್ರ ಮಾಡುವ ಬಗ್ಗೆ ಪತ್ರ ಬರೆದಿದ್ದರು ಎಂಬ ಹಸಿ ಸುಳ್ಳನ್ನು ಹೇಳುವ ಮೂಲಕ ತಾನೊಬ್ಬ ಸುಳ್ಳಿನ ಸರದಾರ ಎಂಬುದನ್ನು ಸಿ.ಟಿ.ರವಿ ತೋರ್ಪಡಿಸಿದ್ದಾರೆ.
ಹೈದರಾಲಿ ವಿರುದ್ಧ ಒನಕೆ ಓಬವ್ವ,ಧೀರ ದೇಶಪ್ರೇಮಿ ಆಡಳಿತಾಧಿಕಾರಿ ಹೈದರಾಲಿ ವಿರುದ್ಧ ಮಾಡಿದ ಯುದ್ಧ ವನ್ನು ಸ್ವಾತಂತ್ರ್ಯ ಹೋರಾಟ ಎಂಬಂತೆ ಬಿಂಬಿಸುವ ಸಿ.ಟಿ.ರವಿಯವರು, ಸ್ವಾತಂತ್ರ್ಯ ಹೋರಾಟ ರಂಗದಿಂದ ಹಿಂಜರಿದು ಹೇಡಿತನ ಪ್ರದರ್ಶಿಸಿ ಬ್ರಿಟಿಷರೊಂದಿಗೆ ಕ್ಷಮಾಪಣೆ ನಡೆಸಿದ್ದ ದೇಶದ್ರೋಹಿಯನ್ನು ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳುವುದರಲ್ಲಿ ಅಚ್ಚರಿಯಿಲ್ಲ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.