(www.vknews.in) : ತಾ 16 ಅಗೋಸ್ಟ್ ರೋಟರಿ ಕ್ಲಬ್ ಪುತ್ತೂರು ಸೆ೦ಟ್ರಲ್ ನಿಂದ ಆಟಿದ ಕೂಟ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ತುಳು ಅಕಾಡೇಮಿ ಮಾಜಿ ಸದಸ್ಯರಾದ ನಿರಂಜನ ರೈ ಮಟಂತಬೆಟ್ಥು ರವರು ಆಟಿ ತಿಂಗಳ ಬಗ್ಗೆ ವಿಶೇಷ ಪ್ರವಚನ ನೀಡಿದರು. ಕಾರ್ಯಕ್ರಮದ ಬಳಿಕ 50ಬಗೆಯ ತಿಂಡಿ ತಿನಿಸುಗಳನ್ನು ಸದಸ್ಯರು ಮನೆಯಲ್ಲಿ ತಯಾರಿಸಿ ತಂದು ತಿನಿಸುಗಳನ್ನ ಸವಿದು ಆಟಿಯ ನೆನಪನ್ನು ನೆನೆಸಿಕೊಂಡರು.
ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅದ್ಯಕ್ಷರಾದ ರಫ಼ೀಕ್ ದರ್ಬೆ, ಕಾರ್ಯದರ್ಶಿ ಚಂದ್ರಹಾಸ ರೈ, ನಿಯೋಜಿತ ಅದ್ಯಕ್ಷರಾದ ಪುರುಶೋತ್ತಮ್ ನಾಯ್ಕ್, IPP ನವೀನ್ ನಾಯ್ಕ್ ವೇದಿಕೆಯಲ್ಲಿ ಉಪಸ್ತಿತರಿದ್ದರು. ಕೆಸರ್ದ ಕುಸಲ್ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸದಸ್ಯರಾದ ರೋ ಭಾರತಿ ಎಸ್ ರೈ, ರೋ ಪದ್ಮನಾಭ ಶೆಟ್ಟಿ, ರೋ ಸನತ್ ರೈ, ರೋ ಅಶೋಕ್ ನಾಯ್ಕ್, ರೋ ರಾಜೇಶ್ ಬೆಜ್ಜಂಗಳ, ಕವನ್ ನಾಯ್ಕ್, ರಮೇಶ್ ರೈ ಬೊಳೋಡಿ, ರೋ ಪುರುಶೊತ್ತಮ ಶೆಟ್ಟಿ, ರೋ ಅಶ್ರಫ಼್ ಮುಕ್ವೆ, ರೋ ನವ್ಯಶ್ರೀ ಯವರನ್ನ ಹೂ ನೀಡಿ ಗೌರವಿಸಲಾಯಿತು.
ವಿಶೇಷ ಆಹ್ವಾನಿತರಾಗಿ ರೋಟರಿ ಕ್ಲಬ್ ಸ್ವರ್ಣದ ಅದ್ಯಕ್ಷರಾದ ವೆಂಕಟರಮಣ ಕಳ್ವಾಜೆ, ವಲಯ ಅರಣ್ಯಾಧಿಕಾರಿ ಕಿರಣ್, ಮಾಜಿ ಎ.ಜಿ ರೋ ಆಸ್ಕರ್ ಆನಂದ್, ವರ್ತಕ ಸಂಘದ ಕೋಶಾಧಿಕಾರಿ ಸದಾನಂದ ಕೆ, ಕೋರ್ಟ್ ಉದ್ಯೋಗಿ ಇತಿರಾಜ್ ಹಾಗು ಸದಸ್ಯರು, ಕುಟುಂಬಸ್ತರು, ಮಕ್ಕಳು ಉಪಸ್ತಿತರಿದ್ದರು. ಅದಕ್ಷರಾದ ರಫ಼ೀಕ್ ದರ್ಬೆ ಸ್ವಾಗತಿಸಿ, ಕಾರ್ಯದರ್ಶಿ ಚಂದ್ರಹಾಸ ರೈ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.