(www.vknews.in)ಕೃಷ್ಣನ ಅರ್ಚನೆ-ಆರಾಧನೆಗೆ ಹೆಸರು ಮಾಡಿರುವ ಉಡುಪಿಯೂ ಸೇರಿದಂತೆ ದೇಶದೆಲ್ಲೆಡೆ ಪ್ರತೀ ವರ್ಷ ಶ್ರಾವಣ ಬಹುಳ ಅಷ್ಟಮಿ ದಿನದಂದು *‘ಕೃಷ್ಣ ಜನ್ಮಾಷ್ಟಮಿ’* ಆಚರಣೆಯು ವಿಶೇಷತೆ ಮತ್ತು ವೈವಿಧ್ಯತೆಯಿಂದ ಕೂಡಿರುತ್ತದೆ. ಬಹುಪಾಲು ಎಲ್ಲಾ ಮಹಾನಗರಗಳು, ಪಟ್ಟಣಗಳು, ಜೊತೆಗೆ ಹಳ್ಳಿಗಾಡಿನಲ್ಲಿಯೂ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಮೇಳೈಸಿರುತ್ತದೆ. ಮನೆ-ಮನೆಗಳಲ್ಲಿ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಕೃಷ್ಣ ವೇಷಧಾರಿ ಪುಟಾಣಿಗಳ ಕಲರವ ಅಧಿಕವಾಗಿರುತ್ತದೆ. ವಿಶೇಷವಾಗಿ ಖಾಸಗಿ ಸ್ವಾಮ್ಯದ ಪೂರ್ವಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಕೃಷ್ಣ ಜನ್ಮಾಷ್ಟಮಿಯ ನಿಮಿತ್ಯ ವಿಶೇಷ ಛದ್ಮವೇಷದ ಸ್ಪರ್ಧೆಗಳೂ ಇರುತ್ತವೆ.
ಧಾರವಾಡದ ಅನೇಕ ಕಡೆಗಳಲ್ಲಿ ಪುಟಾಣಿಗಳು ಕೃಷ್ಣನ ವೇಷ ಧರಿಸಿ ಬಹಳ ಮುದ್ದಾಗಿ ತಮ್ಮ ಅಭಿನಯಗಳನ್ನು ಹಂಚಿಕೊಂಡದ್ದು ಶುಕ್ರವಾರ ಸಾಮಾನ್ಯವಾಗಿತ್ತು. ಈ ಬಾರಿ ಶ್ರಾವಣ ಸಂಪತ್ತ ಶುಕ್ರಗೌರಿ ಪೂಜೆಯೊಂದಿಗೆ ಕೃಷ್ಣ ಜನ್ಮಾಷ್ಟಮಿಯೂ ಸೇರಿಕೊಂಡದ್ದರಿಂದ ಹಬ್ಬದ ವಾತಾವರಣ ಅಧಿಕವಾಗಿತ್ತು.
ಬೆಣ್ಣೆ ಕದ್ದ ಕೃಷ್ಣ*: ಧಾರವಾಡ ಸನ್ಮತಿ ನಗರದ ಪುಟಾಣಿ ತ್ರಿಷಾ ಕಿರಣ ಯಲಿಗಾರ ಕೃಷ್ಣನ ವೇಷ ಧರಿಸಿ ಬೆಣ್ಣೆ ಕದಿಯಲು ಹೋಗಿ ನವನೀತದ (ಬೆಣ್ಣೆಯ) ಮಡಿಕೆಯಲ್ಲಿಯೇ ಕಾಲು ಸಿಕ್ಕಿಸಿಕೊಂಡ ಪ್ರಸಂಗವೂ ಜರುಗಿತು. ಈ ಕೃಷ್ಣ ತನ್ನ ಅನಂತ ಲೀಲೆಗಳನ್ನು ಅಭಿವ್ಯಕ್ತಗೊಳಿಸಿ ಮನೆಮಂದಿಯ ಖುಷಿಗೆ ಕಾರಣನಾಗಿದ್ದ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.