ಮಾಣಿ(ವಿಶ್ವಕನ್ನಡಿಗ ನ್ಯೂಸ್): ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ಇದರ ಅಧೀನದಲ್ಲಿ ಕಾರ್ಯಾಚರಿಸುವ ಮದ್ರಸ ವಿದ್ಯಾರ್ಥಿ ಸಂಘ ಸುನ್ನಿ ಬಾಲ ಸಂಘ ಇದರ ನೂತನ ವಲಯ ಸಮಿತಿಗೆ ಮಾಣಿ ರೇಂಜ್ ಗೆ ಒಳಪಟ್ಟ 12 ಮದ್ರಸದ ವಿದ್ಯಾರ್ಥಿ ನಾಯಕರನ್ನು ಸೇರಿಸಿಕೊಂಡು ತಾ 31.8.2022ರಂದು ದಾರುಲ್ ಇರ್ಶಾದ್ ನಲ್ಲಿ ರಚಿಸಲಾಯಿತು.
ಈ ಕಾರ್ಯಕ್ರಮವು ರೇಂಜ್ ಅಧ್ಯಕ್ಷರಾದ ಯುನುಸ್ ಸಅದಿ ಪೇರಮುಗರುರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯನ್ನು ಮಿಷನರಿ ಟ್ರೈನಿಂಗ್ ವಿಭಾಗದ ಕಾರ್ಯದರ್ಶಿ ರಫೀಕ್ ಮದನಿ ಪಾಟ್ರಕೋಡಿರವರು ಸ್ವಾಗತಿಸಿದರು. ವಿಭಾಗದ ಅಧ್ಯಕ್ಷರಾದ ನಝೀರ್ ಅಮ್ಜದಿ ಮಾಣಿ ವಿಷಯ ಮಂಡಿಸಿದರು.
ಇಸ್ಮಾಯಿಲ್ ಸಅದಿ ಸೂರ್ಯ, ಅಬ್ದುಲ್ ಲತೀಫ್ ಸಅದಿ ಶೇರ, ಹೈದರ್ ಸಖಾಫಿ ಬೂಡೋಳಿ, ಜಬ್ಬಾರ್ ಮದನಿ ಪೇರಮುಗರು, ಡಿ ಎಸ್ ಅಬ್ದುಲ್ ರಹ್ಮಾನ್ ಮದನಿ , ಹನೀಫ್ ಸಖಾಫಿ ಪಾಟ್ರಕೋಡಿ, ರಫೀಕ್ ಮದನಿ ಗುಂಡ್ಯಡ್ಕ , ಅಶ್ರಪ್ ಸಖಾಫಿ ಸತ್ತಿಕಲ್ಲು, ಅಬ್ದುಲ್ ರಝ್ಝಾಕ್ ನೌರತುಲ್ ಮದೀನಾ ಮಿತ್ತೂರು,ರವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದರು.
ನೂತನ ಸಮಿತಿ ಅಧ್ಯಕ್ಷರಾಗಿ ಸವಾದ್ ಪೇರಮುಗರ್,. ಪ್ರ.ಕಾರ್ಯದರ್ಶಿಯಾಗಿ ಅಸ್ಲಾಂ ಕೆಮ್ಮಾನ್ ಕಜೆ , ಕೋಶಾಧಿಕಾರಿಯಾಗಿ ಸಲೀತ್ ಸೂರ್ಯ, ಉಪಾಧ್ಯಕ್ಷರುಗಳಾಗಿ ಸಾಹಿಲ್ ಮಾಣಿ, ಉಸ್ಮಾನ್ ಶೇರಾ,ಹಸನ್ ರಾಝಿ ಸತ್ತಿಕಲ್ಲು , ಜೊತೆ ಕಾರ್ಯದರ್ಶಿಗಳು ರಾಝಿ ನೌರತುಲ್ ಮದೀನ ಮಿತ್ತೂರು, ಅನೀಸ್ ಶೇರಾ ಬುಡೋಳಿ, ಸಅದ್ ಕುದುಂಬ್ಲಾಡಿ, ಸಜ್ಜಾದ್ ಗುಂಡ್ಯಡ್ಕ , ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮುಹಮ್ಮದ್ ಅಶ್ಪರ್ ಅಬ್ದುಲ್ ಸುಹೈಬ್, ಮುಹಮ್ಮದ್ ಸಿನಾನ್, ಮುಹಮ್ಮದ್ ಇರ್ಷಾದ್ ಅತೂಫ್ ಇಬ್ರಾಹಿಂ, ಮುಹಮ್ಮದ್ ರಾಝಿ, ಮುಹಮ್ಮದ್ ರಾಹಿದ್, ಮುಹಮ್ಮದ್ ಮಸ್ಹೂದ್, ಹುಸೈನ್ ರಾಪಿರವರನ್ನು ಆಯ್ಕೆ ಮಾಡಲಾಯಿತು. ನೂತನ ಕಾರ್ಯದರ್ಶಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.