ಮನಾಮ(ವಿಶ್ವಕನ್ನಡಿಗ ನ್ಯೂಸ್): ಸ್ವಾತಂತ್ರ್ಯ ದ ಅಮೃತ ಮಹೋತ್ಸವದ ಅಂಗವಾಗಿ ಇಂಡಿಯನ್ ಸೋಷಿಯಲ್ ಫೋರಮ್ ಬಹರೈನ್ ಕರ್ನಾಟಕ ಘಟಕ ಆಯೋಜಿಸಿದ ಬೃಹತ್ ರಕ್ತದಾನ ಶಿಬಿರವನ್ನು ರೋಟರಾಕ್ಟ್ ಬಹರೈನ್, ಹ್ಯೂಮನ್ ವೆಲ್ಫೇರ್ ಅಸೋಸಿಯೇಷನ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಬಹರೈನ್ ಘಟಕ ಇದರ ಸಹಯೋಗದೊಂದಿಗೆ ಸಲ್ಮಾನಿಯ ಆಸ್ಪತ್ರೆ ರಕ್ತನಿಧಿ ಕೇಂದ್ರದಲ್ಲಿ ನಡೆಸಲಾಯಿತು.
ಬೆಳಿಗ್ಗೆ 7.30 ಗಂಟೆಗೆ ಆರಂಭಿಸಿ 12 ಗಂಟೆಯ ತನಕ ಸುಮಾರು 115 ಕ್ಕೂ ಹೆಚ್ಚು ಬೇರೆಬೇರೆ ರಾಜ್ಯ, ದೇಶಗಳ ರಕ್ತಧಾನಿಗಳು ಭಾಗವಹಿಸಿದ್ದರು. ಮತ್ತು ಮಹಿಳೆಯರಿಗೆ ಪ್ರತ್ಯೇಕ ಸ್ಥಳಾವಕಾಶ ಆಯೋಜಿಸಿ ಶಿಭಿರವನ್ನು ಬಹಳ ಆಕರ್ಷಣೀಯವಾಗಿ ಯಶಶ್ವಿ ಗೊಳಿಸಲಾಯಿತು.
ಕಾರ್ಯಕ್ರಮದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಇಂಡಿಯನ್ ಸೋಷಿಯಲ್ ಫೋರಮ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಯಾಗಿರುವಂತಹ ರಫೀಕ್ ಅಬ್ಬಾಸ್ ರವರು ಬಹರೈನಿನಲ್ಲಿ ಜಾತಿಬೇಧಮರೆತು ಇಂತಹ ಶಿಭಿರಗಳಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು. ಇಂಡಿಯನ್ ಸೋಷಿಯಲ್ ಫೋರಮ್ ಕರ್ನಾಟಕ ರಾಜ್ಯಾಧ್ಯಕ್ಷ ಇರ್ಫಾನ್ ಅಬ್ದುಲ್ ರಹಿಮಾನ್ ಅಧ್ಯಕ್ಷತೆಯಲ್ಲಿ ಸಲ್ಮಾನಿಯ ಆಸ್ಪತ್ರೆ ರಕ್ತನಿಧಿ ಉಸ್ತುವಾರಿ ಡಾ. ಸಕ್ನ ರವರಿಗೆ ಸ್ಮರಣಿಕೆಯನ್ನು, ಹಸ್ತಾಂತರಿಸಲಾಯಿತು. ಮುಖ್ಯ ಅತಿಥಿಯಾಗಿ ರೋಟರಾಕ್ಟ್ ಬಹರೈನ್ ಇದರ ಕಾರ್ಯದರ್ಶಿ ಆಗಿರುವಂತಹ ಅಬ್ದುಲ್ಲಾ ಮೊಹಮ್ಮದ್ ಮತ್ತು ಸಾಮುದಾಯಿಕ ನಿರ್ದೇಶಕಿ ಹದೀಲ್ ಇಸಾ, ಹ್ಯೂಮನ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷರಾದಂತಹ ಸಂಶುದ್ದೀನ್ ತಲಪಾಡಿ ಮತ್ತು ಕಾರ್ಯದರ್ಶಿ ನಾಸಿರ್ ತಲಪಾಡಿ, ಬ್ಲಡ್ ಡೊನೊರ್ಸ್ ಮಂಗಳೂರು ಬಹರೇನ್ ಘಟಕದ ಉಸ್ತುವಾರಿ ಫಾರೂಕ್ ಫಾದ್ , ಐ.ಸಿ.ಆರ್.ಎಫ್ ಕೋರ್ ಕಮಿಟಿ ಸದಸ್ಯ ಹಾಗು ಇಂಡಿಯನ್ ಸೋಶಿಯಲ್ ಫೋರಮ್ ಮಾಜಿ ಅಧ್ಯಕ್ಷರಾಗಿರುವಂತಹ ಅಬ್ದುಲ್ ಜವಾದ್ ಪಾಷ ಉಪಸ್ಥಿತರಿದ್ದರು.
ಇಂಡಿಯನ್ ಸೋಷಿಯಲ್ ಫೋರಮ್ ಕರ್ನಾಟಕ ಘಟಕ ಕಾರ್ಯದರ್ಶಿ ಮೊಹಮ್ಮದ್ ನಝೀಮ್ ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
– ಬ್ಲಡ್ ಡೋನರ್ಸ್ ಮಂಗಳೂರು (ರಿ)
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.