ಚಿಕ್ಕಬಳ್ಳಾಪುರ (www.vknews.in) : ಕೋಡಿ ಹರಿದ ಕೆರೆಯ ಬಳಿ ರೀಲ್ಸ್ ಮಾಡಲು ಹೋದ ಯುವತಿ ಕಾಲು ಜಾರಿ ಕೆರೆಯೊಳಗೆ ಬಿದ್ದು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಗಂಗಾನಹಳ್ಳಿ ಗ್ರಾಮದ ಬಳಿ ನಡೆದಿದೆ. ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಗಾಜಿಲುವಾರುಪಲ್ಲಿ ಗ್ರಾಮದ ಎಂಎ ಪದವೀದರೆ ಅಮೃತ(22) ಕಾಲು ಜಾರಿ ಕೆರೆಯೊಳಗೆ ಬಿದ್ದ ಮೃತಪಟ್ಟ ಯುವತಿ. ಮೃತ ದೇಹ ಕೆರೆಯಿಂದ ಮೇಲೆತ್ತಿ ಹೆಣದ ಮೇಲೆ ಉಪ್ಪು ಸುರಿದು ಬದುಕಿಸಲು ಯತ್ನಿಸಲಾಗಿದೆ.
ಶಿಡ್ಲಘಟ್ಟ ತಾಲೂಕಿನ ಗಾಜಿಲುವಾರುಪಲ್ಲಿ ಗ್ರಾಮದ ಎಂಎ ಪದವೀದರೆ ಅಮೃತ ಎಂಬುವರು ಜಿಲ್ಲೆಯ ಜಂಬಿಗೆಮರದಹಳ್ಳಿಯ ನೆಂಟರ ಮನೆಯ ಗೃಹಪ್ರವೇಶದ ಕಾರ್ಯಕ್ರಮ ನಿಮಿತ್ತ ಹೋಗಿದ್ದ ವೇಳೇಯಲ್ಲಿ ರೀಲ್ಸ್ ಮಾಡಲು ತನ್ನ ಸ್ನೇಹಿತೆ ಜೊತೆ ಕೋಡಿ ಹರಿದ ಗಂಗಾನಹಳ್ಳಿ ಕೆರೆಗೆ ಹೋಗಿದ್ದಾಳೆ, ಈ ವೇಳೆ ಆಕಸ್ಮಿಕ ಕಾಲು ಜಾರಿ ಕೆರೆಗೆ ಅಮೃತಾ ಉರುಳಿಬಿದ್ದು ಸಾವನ್ನಪ್ಪಿದ್ದು, ತಕ್ಷಣ ಅಲ್ಲೇ ಇದ್ದ ಅಕ್ಷತಾ ರವರು ತೋಟದಲ್ಲಿದ್ದ ಗ್ರಾಮಸ್ಥರಿಗೆ ತಿಳಿಸಿದ್ದು, ಅರ್ಧ ಗಂಟೆಯಲ್ಲೇ ಕೆರೆಯಿಂದ ಮೃತ ದೇಹವನ್ನು ಸ್ಥಳೀಯರೇ ಮೇಲೆ ಎತ್ತಿ ಹೊರ ತೆಗೆದಿದ್ದಾರೆ, ದೇಹದ ಮೇಲೆ ಉಪ್ಪು ಹಾಕಿದರೆ ಬದಕುತ್ತಾಳೆ ಎಂಬ ಮೂಡ ನಂಬಿಕೆ ಇಂದ ಮೃತದೇಹದ ಮೇಲೆ ಅರ್ಧ ಗಂಟೆ ಉಪ್ಪು ಹಾಕಿ ಮಲಗಿಸಿ ಬದುಕಿಸಲು ಯತ್ನಿಸಲಾಗಿದೆ.
ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯೊಂದು ವೈರಲ್ ಆಗುತ್ತಿದ್ದು, ವೈರಲ್ ಆಗಿರುವ ಪೋಸ್ಟ್ನಲ್ಲಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದವರನ್ನು ಉಪ್ಪಿನ ಮೇಲೆ ಮಲಗಿಸಿ ಅವರನ್ನು ಸಂಪೂರ್ಣವಾಗಿ ಉಪ್ಪಿನಿಂದ ಮುಚ್ಚಿದ್ರೆ ಮತ್ತೆ ಬದುಕುತ್ತಾರೆ ಅಂತ ಹೇಳಲಾಗಿದೆ. ಇದನ್ನೇ ನಂಬಿರುವ ಜನತೆ ಕೆರೆಗೆ ಬಿದ್ದು ಸಾವನ್ನಪ್ಪಿದವರನ್ನು ಉಪ್ಪಿನಿಂದ ಮುಚ್ಚಿ ಬದುಕಲು ಯತ್ನಿಸುತ್ತಿರುವ ಘಟನೆಗಳು ಇತ್ತೀಚಿಗೆ ಹೆಚ್ಚಾಗುತ್ತಿದೆ. ಅವಿವೇಕಿಗಳು ಮಾಡಿರುವ ಈ ಹುಚ್ಚು ಪೋಸ್ಟ್ನಿಂದಾಗಿ ಕೆಲವು ಜನ ಅದನ್ನೇ ಹಿಂಬಾಲಿಸುತ್ತಿದ್ದಾರೆ. ಇನ್ನೂ ಸ್ಥಳಕ್ಕೆ ಬಂದ ಗುಡಿಬಂಡೆ ಪೊಲೀಸರು ಅಲ್ಲಿನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಮೃತ ದೇಹವನ್ನು ರವಾನಿಸಿದ್ದಾರೆ. ಈ ಬಗ್ಗೆ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.