ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ನಲ್ಲಿ ಸಿಲುಕಿದ ವೈದ್ಯರೊಬ್ಬರು ರೋಗಿಯ ಶಸ್ತ್ರಚಿಕಿತ್ಸೆ ವಿಳಂಬವಾಗುವುದನ್ನು ತಪ್ಪಿಸಲು ಮೂರು ಕಿಲೋಮೀಟರ್ ಓಡಿದ್ದಾರೆ. ಮಣಿಪಾಲ ಆಸ್ಪತ್ರೆ ಡಾ. ಗೋವಿಂದ್ ನಂದಕುಮಾರ್ ಕಾರನ್ನು ರಸ್ತೆಯಲ್ಲೇ ಬಿಟ್ಟು ಓಡಿ ಹೋಗಿದ್ದಾರೆ. ವೈದ್ಯರು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿ ಪಿತ್ತಕೋಶದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಗೊಳಿಸಿದರು. ಕಳೆದ ವಾರ ನಡೆದ ಘಟನೆ ಇದೀಗ ಆನ್ಲೈನ್ ಮಾಧ್ಯಮಗಳ ಮೂಲಕ ಬೆಳಕಿಗೆ ಬರುತ್ತಿದೆ.
ಆಸ್ಪತ್ರೆ ತಲುಪಲು ಮೂರು ಕಿಲೋಮೀಟರ್ ದೂರವಿರುವಾಗ ಕಾರು ಟ್ರಾಫಿಕ್ ಜಾಮ್ಗೆ ಸಿಲುಕಿತು. ಸಾಮಾನ್ಯವಾಗಿ ಇಲ್ಲಿಂದ ಆಸ್ಪತ್ರೆಗೆ ತಲುಪಲು ಹತ್ತು ನಿಮಿಷಗಳು ಬೇಕಾಗುತ್ತದೆ. ಆದರೆ, ಗೂಗಲ್ ಮ್ಯಾಪ್ಸ್ ನೋಡಿದಾಗ ಟ್ರಾಫಿಕ್ ಜಾಮ್ ನಿಂದಾಗಿ 45 ನಿಮಿಷ ಬೇಕು ಎಂದು ನೋಡಿದೆ. ಆಗ ವೈದ್ಯರು ಕಾರನ್ನು ಚಾಲಕನಿಗೆ ಒಪ್ಪಿಸಿ ಓಡಿ ಹೋಗಿದ್ದಾರೆ.
ಪ್ರತಿನಿತ್ಯ ವ್ಯಾಯಾಮ ಮಾಡುತ್ತಿದ್ದರಿಂದ ಮೂರು ಕಿಲೋಮೀಟರ್ ಓಡುವುದು ಕಷ್ಟವಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯರ ಕಾರ್ಯಕ್ಕೆ ಇದೀಗ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.