(www.vknews.in) ಪುತ್ತೂರಿನ ಸಾಮಾಜಿಕ ಸೇವಾ ಸಂಸ್ಥೆ ಇ-ಫೌಂಡೇಶನ್ ಪುತ್ತೂರು (ಇ-ಫ್ರೆಂಡ್ಸ್), ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆಯನ್ನು ಸಾಲ್ಮರ ಸರಕಾರಿ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಎಲ್ಲಾ ಶಿಕ್ಷಕಿಯರಿಗೆ ಸನ್ಮಾನಿಸುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.
ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ಉತ್ತಮ ಪ್ರಭಾವ ಬೀರುತ್ತಾರೆ. ಅವರಿಗೆ ಪಾಠ ಕಲಿಸುತ್ತಾರೆ ಮತ್ತು ಯಾವುದೇ ವಿದ್ಯಾರ್ಥಿ ತಪ್ಪು ಮಾಡಿದಾಗ, ಅವರ ತಪ್ಪಿನ ಅರಿವನ್ನು ಸಹ ಮಾಡುತ್ತಾರೆ. ಶಿಕ್ಷಕರಿಲ್ಲದೆ ಯಾರೂ ತಮ್ಮ ಜೀವನದಲ್ಲಿ ಸಾಮಾಜಿಕವಾಗಿ ಮತ್ತು ಬೌದ್ಧಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ನಮ್ಮ ಜೀವನ ಶೈಲಿಯಲ್ಲಿ ಶಿಕ್ಷಕರ ಉಪದೇಶವು ಮತ್ತು ಅವರ ಮಾರ್ಗದರ್ಶನ ಮಹತ್ವದ್ದಾಗಿದೆ ಎಂದು ಇ-ಫೌಂಡೇಶನ್ ಅಧ್ಯಕ್ಷ ಆರಿಫ್ ಸಾಲ್ಮರ ಶಿಕ್ಷಕರ ಮಹತ್ವದ ಕುರಿತು ಮಾತನಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಚಂದ್ರಾವತಿ ಮಾತನಾಡುತ್ತಾ ಇ-ಫೌಂಡೇಶನ್ ಯುವಕರು ಶಿಕ್ಷಕರ ದಿನಾಚರಣೆಯನ್ನು ನಮ್ಮ ಶಾಲೆಯಲ್ಲಿ ಬಂದು ಆಚರಿಸಿದ್ದು ಮತ್ತು ನಮ್ಮ ಸೇವೆಯನ್ನು ಗುರುತಿಸಿ ನಮಗೆ ಸನ್ಮಾನ ಮಾಡಿದ್ದನ್ನು ನೋಡಿ ನಮಗೆ ಹೆಚ್ಚು ಸಂತೋಷ ತಂದಿದೆ. ನಿಮ್ಮ ಈ ಕಾರ್ಯವು ಮುಂದಿನ ತಲೆಮಾರು ಮಕ್ಕಳಿಗೆ ಪ್ರೇರಣೆಯಾಗಲಿ ಎಂದು ಹೇಳುತ್ತಾ, ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಕರ ದಿನವು ಡಾ:ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಸೂಚಿಸುತ್ತದೆ. ಡಾ ರಾಧಾಕೃಷ್ಣನ್ ಅವರು ಶಿಕ್ಷಕ, ತತ್ವಜ್ಞಾನಿ ಮತ್ತು ವಿದ್ವಾಂಸರಾಗಿ ಗಮನಾರ್ಹ ಕೆಲಸಕ್ಕಾಗಿ ಹೆಸರುವಾಸಿಯಾಗಿದ್ದಾರೆ. 1962 ರಿಂದ, ಶಿಕ್ಷಣ ಮತ್ತು ವಿದ್ಯಾರ್ಥಿಗಳ ಬಗ್ಗೆ ಡಾ ರಾಧಾಕೃಷ್ಣನ್ ಅವರ ಗಮನಾರ್ಹ ವಿಧಾನವನ್ನು ಗೌರವಿಸಲು ಭಾರತದಲ್ಲಿ ಸೆಪ್ಟೆಂಬರ್ 5 ಅನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತದೆ ಎಂದರು. ಮುಂದಿನ ದಿನಗಳಲ್ಲಿ ಶಾಲಾ ಅಭಿವೃದ್ಧಿ ಕಾರ್ಯದಲ್ಲಿ ತಾವು ಕೈ ಜೋಡಿಸಬೇಕು ಎಂಬ ಶಿಕ್ಷಕರ ಮನವಿಗೆ ಸ್ಪಂದಿಸಿದ ಸಂಸ್ಥೆಯ ಸದಸ್ಯರು, ಈ ಶಾಲೆಗೆ ನಮ್ಮಿಂದಾಗುವ ಸಹಾಯವನ್ನು ಮುಂದಿನ ದಿನಗಳಲ್ಲಿ ಮಾಡುವುದಾಗಿ ಭರವಸೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಸಾಲ್ಮರ ಶಾಲೆಯಲ್ಲಿ ವೃತ್ತಿಯಲ್ಲಿರುವ ಶಿಕ್ಷಕಿಯರಾದ ಮುಖ್ಯೋಪಾದ್ಯಾಯಿನಿ ಚಂದ್ರಾವತಿ, ಪ್ರಭಾವತಿ, ಪ್ರೇಮಲತಾ, ಭಾರತಿ, ವಸಂತಿ ಯವರಿಗೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು ಮತ್ತು ಶಿಕ್ಷಕಿಯರಿಗೆ, ಶಾಲಾ ಮಕ್ಕಳಿಗೆ ಸಿಹಿತಿಂಡಿ ವಿತರಣೆಯೂ ನಡೆಯಿತು. ಈ ಸಂದರ್ಭದಲ್ಲಿ SDMCಅಧ್ಯಕ್ಷ ಬಷೀರ್, ಇ-ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ನೌಶಾದ್ ಕೂರ್ನಡ್ಕ ಸೇರಿದಂತೆ ಇ-ಫೌಂಡೇಶನ್ ನ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.