ತಿರುವನಂತಪುರಂ (ವಿಶ್ವ ಕನ್ನಡಿಗ ನ್ಯೂಸ್) : ಕಳೆದ ರವಿವಾರ ಕತರ್ ನಲ್ಲಿ ಶಾಲಾ ಬಸ್ಸಿನೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ನಾಲ್ಕು ವರ್ಷದ ಬಾಲಕಿ ಮಿನ್ಸಾ ಮರಿಯಂ ಜೇಕಬ್ ಅಂತ್ಯಸಂಸ್ಕಾರ ಆಕೆಯ ಹುಟ್ಟೂರಾದ ಕೊಟ್ಟಾಯಂ ಜಿಲ್ಲೆಯ ಪನ್ನಿಮತ್ರಂ ಎಂಬಲ್ಲಿ ನಡೆಯಿತು.
ಅಭಿಲಾಷ್ ಚಾಕೋ-ಸೌಮ್ಯಾ ದಂಪತಿಯ ಎರಡನೇ ಪುತ್ರಿಯಾಗಿದ್ದ ಮಿನ್ಸಾ ಕತಾರ್ ನಲ್ಲಿ ಕಿಂಡರ್ಗಾರ್ಟನ್ ವಿದ್ಯಾರ್ಥಿನಿಯಾಗಿದ್ದಳು. ಎಂದಿನಂತೆ ರವಿವಾರ ಬೆಳಿಗ್ಗೆ ಶಾಲೆಗೆ ತೆರಳಿದ್ದ ಆಕೆ ಶಾಲಾ ಬಸ್ಸಿನೊಳಗೆ ನಿದ್ದೆಗೆ ಜಾರಿದ್ದು ಯಾರ ಗಮನಕ್ಕೂ ಬಂದಿರಲಿಲ್ಲ. ಆಕೆ ವಾಹನದೊಳಗೆ ಅಧಿಕ ಉಷ್ಣತೆಯಿಂದಾಗಿ ಉಸಿರುಗಟ್ಟಿ ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ.
ಅಪರಾಹ್ನ ಶಾಲೆ ಮುಗಿದು ಮಕ್ಕಳೆಲ್ಲಾ ಬಸ್ ಹತ್ತಿದಾಗ ಅಲ್ಲಿ ಮಿನ್ಸಾ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆಕೆಯನ್ನು ಬದುಕುಳಿಸಲಾಗಿರಲಿಲ್ಲ. ಬಾಲಕಿಯ ಸಾವಿಗೆ ಸಂತಾಪ ಸೂಚಿಸಿದ್ದ ಕತರ್ ಶಿಕ್ಷಣ ಸಚಿವಾಲಯ, ನಿರ್ಲಕ್ಷ್ಯಕ್ಕಾಗಿ ಶಾಲೆಯನ್ನು ಮುಚ್ಚಿಸಿದೆ ಹಾಗೂ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದೆಂದು ಹೇಳಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.