ಕಾಸರಗೋಡು (ವಿಶ್ವ ಕನ್ನಡಿಗ ನ್ಯೂಸ್) : ಏರ್ಗನ್ನಿಂದ ಬೀದಿ ನಾಯಿಗಳಿಗೆ ಗುಂಡು ಹಾರಿಸಿದರೆ ನಾಯಿ ಸಾಯುವುದಿಲ್ಲ. ಯಾರಿಗೂ ತೊಂದರೆ ಕೊಡುವ ಪ್ರಯತ್ನ ಮಾಡಿಲ್ಲ. ಶೋಕೇಸ್ ನಲ್ಲಿ ಇಟ್ಟಿದ್ದ ಏರ್ ಗನ್ ಇದಾಗಿದ್ದು, ಅದರಲ್ಲಿ ಶೂಟ್ ಮಾಡುವುದು ಕೂಡ ನನಗೆ ಗೊತ್ತಿಲ್ಲ ಎಂದು ಸಮೀರ್ ಹೇಳಿದ್ದಾರೆ. ನನ್ನ ಮಗುವನ್ನು ರಕ್ಷಿಸುವುದು ನನ್ನ ಕರ್ತವ್ಯ ನಾನು ಅದು ಮಾಡಿದ್ದು ಮಾತ್ರ ಎಂದು ಕಾಸರಗೋಡು ಬೇಕಲ್ ಹದ್ದಾದ್ ನಗರದ ಸಮೀರ್ ಹೇಳಿದರು.
ಸಮೀರ್ ವಿರುದ್ಧ ಐಪಿಸಿ 153ರ ಅಡಿಯಲ್ಲಿ ಬೇಕಲ ಪೊಲೀಸರು ಗಲಭೆ ಎಸಗಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುವಾರ ಬೆಳಗ್ಗೆ ಮಕ್ಕಳನ್ನು ರಕ್ಷಿಸಲು ಸಮೀರ್ ಏರ್ ಗನ್ ಹಿಡಿದು ವಿಡಿಯೊಂದು ಮಾಡಿದ್ದರು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ಬೇಕಲ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದರು .
ಕಳೆದ ದಿನ ಆ ಪ್ರದೇಶದಲ್ಲಿ ಮದರಸಾಕ್ಕೆ ಹೋಗುತ್ತಿದ್ದ ಆರು ವರ್ಷದ ಬಾಲಕನಿಗೆ ನಾಯಿ ಕಚ್ಚಿತ್ತು, ಹೀಗಾಗಿ ನಾಯಿಗಳ ಭಯದಿಂದ ಮಗಳು ಮದರಸಾಕ್ಕೆ ಹೋಗಲು ಹಿಂದೇಟು ಹಾಕಿದಾಗ ಏರ್ ಗನ್ ಹಿಡಿದು ಮಕ್ಕಳನ್ನು ಕರೆದುಕೊಂಡು ಹೋಗಿದ್ದೆ ಅಷ್ಟೇ ಎಂದು ಸಮೀರ್ ಹೇಳಿದ್ದಾರೆ. ಯಾವುದೇ ನಾಯಿ ಓಡಿಸಿದರೆ ಬಂದೂಕು ತೆಗೆದುಕೊಂಡು ಗುಂಡಿಟ್ಟು ಸಾಯಿಸುತ್ತೇನೆ ಎಂದು ಸಮೀರ್ ವಿಡಿಯೋದಲ್ಲಿ ಹೇಳಿದ್ದರು. ಈ ದೃಶ್ಯವನ್ನು ಅವರ ಪುತ್ರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸಮೀರ್ ತನ್ನ ಕೈಯಲ್ಲಿ ಏರ್ ಗನ್ ಇತ್ತು ಮತ್ತು ದೃಶ್ಯಗಳನ್ನು ಪ್ರಸಾರ ಮಾಡಿದ ನಂತರ ನಾಯಿಯನ್ನು ಶೂಟ್ ಮಾಡಲಿಲ್ಲ ಎಂದು ಹೇಳಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.