ಹೊಸದಿಲ್ಲಿ (ವಿಶ್ವ ಕನ್ನಡಿಗ ನ್ಯೂಸ್) : ಟಿ20 ವಿಶ್ವಕಪ್ನ ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಸೋತಾಗ ಭಾರತವನ್ನು ಅಪಹಾಸ್ಯ ಮಾಡಿದವರಲ್ಲಿ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಕೂಡ ಸೇರಿದ್ದಾರೆ. ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಹೀನಾಯ ಸೋಲನ್ನು ಅನುಭವಿಸಿದ್ದು, ಈ ಸೋಲು ಯುಗಯುಗಾಂತರಗಳಿಂದ ಕಾಡಲಿದೆ ಎಂದು ಅಖ್ತರ್ ಹೇಳಿದ್ದಾರೆ. ಪಾಕಿಸ್ತಾನ ಇಂಗ್ಲೆಂಡ್ನಂತಲ್ಲ ಮತ್ತು ಪಾಕಿಸ್ತಾನ ಕಪ್ ಗೆಲ್ಲುತ್ತದೆ ಎಂಬುದು ಅಖ್ತರ್ ಅವರ ವಾದವಾಗಿತ್ತು. ಆದರೆ ಇದೀಗ ಫೈನಲ್ ನಲ್ಲಿ ಪಾಕಿಸ್ತಾನ ಸೋಲನುಭವಿಸಿರುವುದು ಅಖ್ತರ್ ಗೂ ನೋವುಂಟು ಮಾಡಿದೆ.
ಹೃದಯ ವಿದ್ರಾವಕ ಎಮೋಜಿಯನ್ನು ಟ್ವೀಟ್ ಮಾಡುವ ಮೂಲಕ ಅಖ್ತರ್ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಭಾರತದ ಸ್ಟಾರ್ ಆಟಗಾರ ಮೊಹಮ್ಮದ್ ಶಮಿ ನೀಡಿದ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ಇದನ್ನು ಕರ್ಮ ಎನ್ನುತ್ತಾರೆ ಎಂದು ಶಮಿ ಟ್ವೀಟ್ ಮಾಡಿದ್ದಾರೆ. ಅಖ್ತರ್ ಟ್ವೀಟ್ ಹಾಗೂ ಅದಕ್ಕೆ ಶಮಿ ನೀಡಿದ ಉತ್ತರ ಟ್ವಿಟರ್ ನಲ್ಲಿ ಚರ್ಚೆಯಾಗುತ್ತಿದೆ.
ಬಳಿಕ ಶಮಿ ಇಂಗ್ಲೆಂಡ್ ತಂಡವನ್ನು ವಿಜೇತರಾಗಿ ಅಭಿನಂದಿಸಿದರು. ಬೆನ್ ಸ್ಟೋಕ್ಸ್ ಸುಂದರ ಇನ್ನಿಂಗ್ಸ್ ಆಡಿದ್ದು, ಇಂಗ್ಲೆಂಡ್ ಟಿ20 ವಿಶ್ವ ಪ್ರಶಸ್ತಿಗೆ ಅರ್ಹವಾಗಿದೆ ಎಂದು ಶಮಿ ಟ್ವೀಟ್ ಮಾಡಿದ್ದಾರೆ. ಪಾಕಿಸ್ತಾನದ ವೇಗಿಗಳು ಉತ್ತಮವಾಗಿ ಬೌಲಿಂಗ್ ಮಾಡಿದ್ದಾರೆ ಎಂದೂ ಶಮಿ ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.