(www.vknews.in) ಪುತ್ತೂರು: ಪುತ್ತೂರು ಮೂಲದ ವೈದ್ಯರಾದ, ಡಾ. ಕೃಷ್ಣಮೂರ್ತಿಯವರ ಅನುಮಾನಾಸ್ಪದ ಸಾವಿನ, ಸಮಗ್ರ ತನಿಖೆಯನ್ನು ನಡೆಸುವಂತೆ, ಪುತ್ತೂರು ತಾಲೂಕು ಮುಸ್ಲಿಂ ಯೂತ್ ಕೌನ್ಸಿಲ್ ಆಗ್ರಹ ವ್ಯಕ್ತಪಡಿಸಿದೆ.
ಪುತ್ತೂರಿನಲ್ಲಿ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಿರುವ, ಜನಪ್ರಿಯ ವೈದ್ಯರಿಬ್ಬರ ಸಹೋದರರಾದ ಡಾಕ್ಟರ್ ಕೃಷ್ಣಮೂರ್ತಿಯವರು, ಕರ್ನಾಟಕ- ಕೇರಳ ಗಡಿನಾಡು ಪ್ರದೇಶವಾದ ಬದಿಯಡ್ಕದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗೆ ಅವರ ಮೃತ ದೇಹವು ಕುಂದಾಪುರ ಬಳಿ ರೈಲ್ವೆ ಹಳಿ ಪಕ್ಕದಲ್ಲಿ, ಅನುಮಾನಾಸ್ಪದ ವಾಗಿ ಪತ್ತೆಯಾಗಿದೆ. ಇವರ ಸಾವಿನ ಕುರಿತು ಹಲವಾರು ಸಂಶಯಗಳನ್ನು ಅವರ ಕುಟುಂಬಸ್ಥರು ಹೊರ ಹಾಕುತ್ತಿದ್ದಾರೆ. ಈ ಪ್ರಕರಣವು ಕರ್ನಾಟಕ -ಕೇರಳ ಪ್ರದೇಶಕ್ಕೆ ಒಳಪಟ್ಟ ಪ್ರಕರಣವಾದುದರಿಂದ, ಈ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಿ, ಪ್ರಕರಣದ ಸಮಗ್ರ ತನಿಖೆಯನ್ನು ನಡೆಸಬೇಕೆಂದು, ಪುತ್ತೂರು ತಾಲೂಕು ಮುಸ್ಲಿಂ ಯೂತ್ ಕೌನ್ಸಿಲ್ ಅಧ್ಯಕ್ಷರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಸರಕಾರವನ್ನು ಆಗ್ರಹಿಸಿದ್ದಾರೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.